ಕೇರಳ ಜನತೆಯ ನೆರವಿಗೆ ಬಂದ ನಟಿ ಪೂನಂ ಪಾಂಡೆ
ಭೀಕರ ಮಳೆ, ಪ್ರವಾಹಕ್ಕೆ ದೇವರನಾಡು ಕೇರಳ ನಲುಗಿ ಹೋಗಿದೆ. ಎಷ್ಟೋ ಜನರು ಪ್ರಾಣ, ಎಷ್ಟೋ ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ದುಖಃದಲ್ಲಿ ಇರುವ ಈ ಜನತೆಗೆ ಈಗ ನಟಿ ಪೂನಂ ಪಾಂಡೆ ನೆರವಾಗಿದ್ದಾರೆ.
ಈಗಾಗಲೇ ಕನ್ನಡದ ಕೆಲ ನಟರ ಜೊತೆಗೆ ಇತರ ಚಿತ್ರರಂಗದ ಕಲಾವಿದರು ಸಹ ಕೇರಳ ಪುನರ್ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ್ದರು. ಈಗ ನಟಿ ಪೂನಂ ಪಾಂಡೆ ಕೂಡ ತನ್ನ ಒಂದು ಸಿನಿಮಾದ ಸಂಭಾವನೆಯನ್ನು ಕೇರಳ ಜನತೆಗೆ ನೀಡಿದ್ದಾರೆ. ಆದರೆ, ಆ ಚಿತ್ರಕ್ಕೆ ಅವರು ತೆಗೆದುಕೊಂಡಿದ್ದ ಸಂಭಾವನೆಯ ಮೊತ್ತ ತಿಳಿದಿಲ್ಲ.

ಸದ್ಯ ಪೂನಂ ಪಾಂಡೆಗೆ ಸಿನಿಮಾ ಅವಕಾಶಗಳು ಕಡಿಮೆ ಇವೆ. ಈಗ ಅವರು 'ಲೇಡಿ ಗಬ್ಬರ್ ಸಿಂಗ್' ಎನ್ನುವ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ಹೀಗಿದ್ದರೂ ಈ ಸಿನಿಮಾದ ನಟನೆಗಾಗಿ ಅವರು ತೆಗೆದುಕೊಂಡಿದ್ದ ಪೂರ್ಣ ಸಂಭಾವನೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಪೂನಂ ಮಾಡಿದ ಈ ಕೆಲಸವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಇತ್ತೀಚಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಕೇರಳ ಜನತೆಯ ನೆರವಿಗೆ 5 ಕೋಟಿ ಹಣವನ್ನು ನೀಡಿದ್ದರು.


Click it and Unblock the Notifications











