Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಆತ್ಮಹತ್ಯೆ ಪರಿಣಾಮ ಪ್ರಭಾಸ್ಗೆ ಆಯ್ತು ದೊಡ್ಡ ನಷ್ಟ!
ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಪ್ರಭಾಸ್ ಗೂ ಎತ್ತಣಿಂದೆತ್ತ ಸಂಬಂಧ. ಖಂಡಿತ ಸಂಬಂಧ ಇಲ್ಲ. ಆದರೆ ಸುಶಾಂತ್ ಸಿಂಗ್ ಸಾವಿನ ಪರಿಣಾಮ ಪ್ರಭಾಸ್ ಮೇಲೆ ಆಗಿದೆ.
ಹೌದು, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪರಿಣಾಮ ನಟ ಪ್ರಭಾಸ್ ಮೇಲಾಗಿದೆ. ಸುಶಾಂತ್ ಸಾವಿನಿಂದಾಗಿ ದೊಡ್ಡ ಸಿನಿಮಾ ಒಂದನ್ನು ಕಳೆದುಕೊಂಡಿದ್ದಾರೆ ಪ್ರಭಾಸ್.
ನಾಯಿ ಬೆಲ್ಟ್ ಬಳಸಿ ಸುಶಾಂತ್ ಕೊಲೆ ಮಾಡಲಾಗಿದೆ: ಮಾಜಿ ಸಹಾಯಕನ ಆರೋಪ
ಪ್ರಭಾಸ್ ಬಾಲಿವುಡ್ ಸಿನಿಮಾಕ್ಕೆ ಪಾದಾರ್ಪಣೆ ಮಾಡುವವರಿದ್ದರು. ಬಾಲಿವುಡ್ನ ಭಾರಿ ದೊಡ್ಡ ನಿರ್ಮಾಪಕರೊಬ್ಬರು ಪ್ರಭಾಸ್ ಸಿನಿಮಾಕ್ಕೆ ಬಂಡವಾಳ ಹೂಡಲು ತಯಾರಾಗಿ ತುದಿಗಾಲಲ್ಲಿ ನಿಂತಿದ್ದರು. ಆದರೆ ಸುಶಾಂತ್ ಸಿಂಗ್ ಸಾವಿನಿಂದಾಗಿ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ.
ಪ್ರಭಾಸ್-ಕರಣ್ ಜೋಹರ್ ಹತ್ತಿರದ ಸ್ನೇಹಿತರು
ಪ್ರಭಾಸ್ ಹಾಗೂ ಬಾಲಿವುಡ್ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಬಹು ಹತ್ತಿರದ ಸ್ನೇಹಿತರು. ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದ ಹಿಂದಿ ಡಬ್ ಅನ್ನು ವಿತರಿಸಿದ್ದು ಇದೇ ಕರಣ್ ಜೋಹರ್. ಬಾಹುಬಲಿ ಹಿಂದಿ ವರ್ಷನ್ನಿಂದ ಸಾಕಷ್ಟು ಒಳ್ಳೆ ಹಣವನ್ನೂ ಮಾಡಿದರು ಕರಣ್ ಜೋಹರ್.
ಪ್ರಭಾಸ್ಗೆ ದೊಡ್ಡ ಪಾರ್ಟಿ ಕೊಟ್ಟಿದ್ದ ಕರಣ್
ಬಾಹುಬಲಿ ಗೆಲುವಿನ ನಂತರ ಪ್ರಭಾಸ್ ಮುಂಬೈಗೆ ಬಂದಾಗ ಕರಣ್ ಜೋಹರ್ ದೊಡ್ಡ ಪಾರ್ಟಿ ನೀಡಿದ್ದರು. ಅಷ್ಟೆ ಅಲ್ಲದೆ ಪ್ರಭಾಸ್ಗಾಗಿ ಹಿಂದಿ ಸಿನಿಮಾ ನಿರ್ಮಿಸುವುದಕ್ಕೆ ತಯಾರೆಂದು ಹೇಳಿದ್ದರು. ದೊಡ್ಡ ಬಜೆಟ್ ಸಿನಿಮಾ ಮಾಡುವುದಕ್ಕೆ ಮಾತುಕತೆಯೂ ಸಹ ನಡೆದಿತ್ತು. ಆದರೆ ಈಗ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಪರಿಸ್ಥಿತಿ ಬದಲಾಗಿದೆ.
ಪ್ರಭಾಸ್ ಅಭಿಮಾನಿಗಳ ಸಿಟ್ಟೇರಿಸಿದ ದೀಪಿಕಾ ಪಡುಕೋಣೆ ಟ್ವೀಟ್
ಸುಶಾಂತ್ ಸಿಂಗ್ ಸಾವಿನಲ್ಲಿ ಕರಣ್ ಪಾತ್ರ?
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಕರಣ್ ಜೋಹರ್ ಅನ್ನು ಆರೋಪಿಯಂತೆ ನೋಡಲಾಗುತ್ತಿದೆ. ಕರಣ್ ಜೋಹರ್ ಸ್ವಜನಪಕ್ಷಪಾತ ಸುಶಾಂತ್ ಸಿಂಗ್ ಸಾವಿಗೆ ಕಾರಣವೆಂದು ಕರಣ್ ಮೇಲೆ ಆರೋಪ ಹೊರಿಸಲಾಗಿದೆ. ಕರಣ್ ಜೋಹರ್ ಸಹ ಮಾನಸಿಕವಾಗಿ ಜರ್ಜಿರತರಾಗಿದ್ದಾರೆ.
ಪ್ರಭಾಸ್ ನ ಈ ಸಿನಿಮಾ ನೋಡಲು ಕಾತರರಾಗಿದ್ದಾರೆ ಅನುಷ್ಕಾ ಶೆಟ್ಟಿ
ಕರಣ್ ಜೋಹರ್ನಿಂದ ಅಂತರ ಕಾಯ್ದುಕೊಂಡಿರುವ ಪ್ರಭಾಸ್
ಇದೆಲ್ಲವನ್ನೂ ಗಮನಿಸಿದ ಪ್ರಭಾಸ್ ಸದ್ಯಕ್ಕೆ ಬಾಲಿವುಡ್ನಿಂದ ಹಾಗೂ ಕರಣ್ ಜೋಹರ್ ಇಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ಬಾಲಿವುಡ್ ನಿಂದಲೂ ದೂರ ಉಳಿವುಳಿದು, ತೆಲುಗು ಸಿನಿಮಾಕ್ಕೆ ಮಾತ್ರವೇ ಸೀಮಿತವಾಗಿರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.