Don't Miss!
- News ಚಿತ್ರದುರ್ಗ: ಬೆಂಕಿ ಹಚ್ಚಿಕೊಂಡು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
- Lifestyle ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- Automobiles Self-Driving Car: ಭಾರತೀಯರು ಅಸಮಾನ್ಯರು... ಬೊಲೆರೋದಲ್ಲಿ ಭವಿಷ್ಯ ಬದಲಿಸುವ ತಂತ್ರಜ್ಞಾನ!
- Sports Viral look: IPL 2024 ಆರಂಭಕ್ಕೂ ಮುನ್ನ ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿರುವ ವಿರಾಟ್ ಕೊಹ್ಲಿ Trendy look
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನನ್ನೊಂದಿಗೆ ರಾತ್ರಿ ಇರು' ಎಂದ ನಿರ್ಮಾಪಕನ ಅಸಲಿ ಮುಖ ಬಿಚ್ಚಿಟ್ಟ ನೀನಾ ಗುಪ್ತಾ
ಹಿಂದಿ ಚಿತ್ರರಂಗ ಖ್ಯಾತ ನಟಿ ಮತ್ತು ನಿರ್ದೇಶಕಿ ನೀನಾ ಗುಪ್ತಾ ಬರೆದಿರುವ 'ಸಚ್ ಕಹುನ್ ತೋಹ್' ಪುಸ್ತಕ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ಕುರಿತು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ನಟಿ ನೀನಾ ಗುಪ್ತಾ ತನ್ನ ಪುಸ್ತಕದಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಉಲ್ಲೇಖಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇರುವುದು ನಿಜ ಎಂದು ಹೇಳಿರುವ ನಟಿ ತಮಗಾದ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ.
ಪೀಡಿಸಿದ ನಿರ್ದೇಶಕನಿಂದ ಬಚಾವಾದ ಕತೆ ಹೇಳಿದ ನಟಿ
ಸಿನಿಮಾ ಜೀವನದಲ್ಲಿ ಇನ್ನು ಆರಂಭಿಕ ಹಂತದಲ್ಲಿದ್ದ ಸಮಯದಲ್ಲಿ ನಿರ್ಮಾಪಕರೊಬ್ಬರು ಅವಕಾಶ ಕೊಡುವುದಾಗಿ ಕರೆದು ಕೆಟ್ಟದಾಗಿ ಆಫರ್ ಮಾಡಿದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...
ಚರ್ಚಿಸಲು ಹೋಟೆಲ್ಗೆ ಹೋದೆ
ದಕ್ಷಿಣ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕರೊಬ್ಬರನ್ನು ಭೇಟಿ ಮಾಡಲು ಸ್ನೇಹಿತೆ ಸೂಚಿಸಿದಳು. ಸ್ಟಾರ್ ಹೋಟೆಲ್ವೊಂದರಲ್ಲಿ ತಂಗಿದ್ದ ನಿರ್ಮಾಪಕನನ್ನು ಭೇಟಿ ಮಾಡಲು ನಾನು ಹೋದೆ. ಹೋಟೆಲ್ ಲಾಬಿಗೆ ಹೋಗಿ ಫೋನ್ ಮಾಡಿದೆ. ಆತ ''ನಿಮ್ಮನ್ನೇ ಕಾಯ್ತಿದ್ದೆ, ಮಹಡಿಗೆ ಬನ್ನಿ'' ಎಂದು ಹೇಳಿದೆ. ನಾನು ಆ ನಿರ್ಮಾಪಕ ಇದ್ದಲ್ಲಿಗೆ ಹೋದೆ.
ನನ್ನ ಪಾತ್ರವೇನು ಸರ್?
ನಿರ್ಮಾಪಕನನ್ನು ಭೇಟಿ ಮಾಡಿದ ನಾನು ''ಸರ್ ನನ್ನ ಪಾತ್ರವೇನು?'' ಎಂದು ಕೇಳಿದೆ. ಅದಕ್ಕೆ ಅವರು ''ನಾಯಕಿಯ ಸ್ನೇಹಿತೆ'' ಎಂದು ಹೇಳಿ ವಿವರಿಸಿದರು. ಅದನ್ನು ಕೇಳಿದ ನನಗೆ ಈ ಪಾತ್ರ ಬಹಳ ಸಣ್ಣದು ಅನಿಸಿತು. ''ಸರಿ, ನಾನು ಹೋಗ್ತೇನೆ ಸರ್, ನನ್ನ ಸ್ನೇಹಿತರು ಕಾಯ್ತಿದ್ದಾರೆ'' ಅಂದೆ. ಈ ಮಾತು ಕೇಳಿ ಆತ ಒಂದು ಕ್ಷಣ ಆಘಾತವಾದಂತೆ ನೋಡಿದೆ.
ನಿರ್ಮಾಪಕನೊಂದಿಗೆ ಮಲಗಲು ಹೇಳಿದ್ದರು: ಕೆಟ್ಟ ಅನುಭವ ಬಿಚ್ಚಿಟ್ಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ
ಈ ರಾತ್ರಿ ಇಲ್ಲಿ ಇರಲ್ವೇ ಎಂದ ನಿರ್ಮಾಪಕ
ನಾನು ಹೋಗ್ತೀನಿ ಸರ್ ಎಂದ ತಕ್ಷಣ ಆತ ಗಾಬರಿಯಾಗಿ ನೋಡತೊಡಗಿದ. 'ಹೇ ಹೋಗ್ತೀರಾ, ಹಾಗಾದ್ರೆ ನೀವು ಈ ರಾತ್ರಿ ಇಲ್ಲಿ ಇರಲ್ವಾ''? ಎಂದು ಪ್ರಶ್ನಿಸಿದ. ಇದನ್ನು ಕೇಳಿ ನನಗೆ ಇದ್ದಕ್ಕಿದ್ದಂತೆ ನನ್ನ ತಲೆ ಮೇಲೆ ಒಂದು ಬಕೆಟ್ ಐಸ್ ನೀರು ಹಾಕಿದ್ರಾ ಎಂದೆನಿಸಿತು ಎಂದು ಘಟನೆಯನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ''ಆಮೇಲೆ ಆ ನಿರ್ಮಾಪಕ ನನ್ನನ್ನು ಒತ್ತಾಯಿಸಿಲ್ಲ, ನಾನು ಅಲ್ಲಿಂದ ಬೇಗ ಬಂದು ಬಿಟ್ಟೆ'' ಎಂದು ತಿಳಿಸಿದ್ದಾರೆ.
Recommended Video
ರಾಷ್ಟ್ರ ಪ್ರಶಸ್ತಿ ಪಡೆದ ನಟಿ
ನೀನಾ ಗುಪ್ತಾ 1994ರಲ್ಲಿ ತೆರೆಕಂಡಿದ್ದ 'ವಾಹ್ ಚೋಕ್ರಿ' ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2021ರಲ್ಲಿ ನೆಟ್ಫ್ಲಿಕ್ಸ್ಲ್ಲಿ ಬಿಡುಗಡೆಯಾದ 'ಸರ್ದಾರ್ ಕಾ ಗ್ರ್ಯಾಂಡ್ಸನ್' ಸಿನಿಮಾದಲ್ಲಿ ನಟಿಸಿದ್ದರು. ರಣ್ವೀರ್ ಸಿಂಗ್ ನಟನೆಯ '83' ಚಿತ್ರದಲ್ಲಿ ಅಭಿನಯಿಸಿದ್ದಾರೆ.