Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಷಯ್ ಕುಮಾರ್ ದೊಡ್ಡ ಸ್ವಾರ್ಥಿ, ಹಣವಷ್ಟೆ ಆತನಿಗೆ ಮುಖ್ಯ ಎಂದ ನಿರ್ಮಾಪಕ
ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೆ ಕೊರೊನಾ ವಿರುದ್ಧ ಸಮರಕ್ಕೆ ಸರ್ಕಾರಕ್ಕೆ ಕೋಟ್ಯಂತರ ಹಣ ದೇಣಿಗೆ ನೀಡಿದ್ದಾರೆ. ಆದರೆ ಅವರೊಬ್ಬ ಸ್ವಾರ್ಥಿ, ಹಣವೊಂದೇ ಅವರ ಗುರಿ ಎಂಬ ಆರೋಪವನ್ನು ನಿರ್ಮಾಪಕರೊಬ್ಬರು ಮಾಡಿದ್ದಾರೆ.
Recommended Video
ನಟಿ ಪ್ರಿಯಾಂಕಾ ಚೋಪ್ರಾ ಅವರ ಮಾಜಿ ಮ್ಯಾನೇಜರ್ ಸಹ ಆಗಿರುವ ಪ್ರಕಾಶ್ ಜಾಜು ಎಂಬುವರು ಅಕ್ಷಯ್ ಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಇವರು ನಿರ್ಮಾಪಕ ಹಾಗೂ ಫೈನ್ಯಾನ್ಶಿಯರ್ ಸಹ ಆಗಿದ್ದಾರೆ.
14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?
ಪ್ರಕಾಶ್ ಜಾಜು ಟ್ವಿಟ್ಟರ್ನಲ್ಲಿ ಹೀಗೊಂದು ಆರೋಪ ಮಾಡಿದ್ದು, ಟ್ವೀಟ್ ವೈರಲ್ ಆಗುತ್ತಿದ್ದಂತೆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಅದರ ಸ್ಕ್ರೀನ್ ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
'ನಾನು ಕುಡಿದಿದ್ದೀನಿ, ಸುಳ್ಳು ಹೇಳುವುದಿಲ್ಲ'
ಜುಲೈ 23 ರಂದು ಟ್ವೀಟ್ ಮಾಡಿದ್ದ ಪ್ರಕಾಶ್ ಜಾಜು, 'ನಾನು ನಾಲ್ಕು ಪೆಗ್ ಕುಡಿದಿದ್ದೀನಿ. ನಾನು ಸುಳ್ಳು ಹೇಳುವುದಿಲ್ಲ. ನನ್ನ 35 ವರ್ಷಗಳ ಸಿನಿ ಜೀವದಲ್ಲಿ ನಾನು ಕಂಡ ಅತ್ಯಂತ ಸ್ವಾರ್ಥ ವ್ಯಕ್ತಿ ಅಕ್ಷಯ್ ಕುಮಾರ್, ಆತನ ಒಂದೇ ಉದ್ದೇಶ ಹಣ ಮಾಡುವುದಷ್ಟೆ' ಎಂದು ಬರೆದಿದ್ದರು.
ಟ್ವೀಟ್ ಡಿಲೀಟ್ ಮಾಡಿರುವ ಜಾಜು
ಜುಲೈ 23 ರ ಬೆಳಿಗ್ಗೆ 7:50 ಕ್ಕೆ ಈ ಟ್ವೀಟ್ ಮಾಡಿದ್ದ ಪ್ರಕಾಶ್ ಜಾಜು ಕೆಲವೇ ನಿಮಿಷಗಳಲ್ಲಿ ಟ್ವೀಟ್ ಅನ್ನು ಡಿಲೀಟ್ ಮಾಡಿಬಿಟ್ಟಿದ್ದಾರೆ. ಆದರೆ ಆ ವೇಳೆಗಾಗಲೇ ಹಲವರು ಇದರ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡಿದ್ದರು. ಅದೀಗ ವೈರಲ್ ಆಗಿದೆ.
ಅಧಿಕ ಮೊತ್ತಕ್ಕೆ ಮಾರಾಟವಾದ ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್'
ಪ್ರಿಯಾಂಕಾ ಚೋಪ್ರಾ ವಿರುದ್ಧ ಕೇಸು ದಾಖಲಿಸಿದ್ದ ಜಾಜು
ಪ್ರಿಯಾಂಕಾ ಚೋಪ್ರಾ ಅವರ ಮಾಜಿ ಮ್ಯಾನೇಜರ್ ಆಗಿರುವ ಪ್ರಕಾಶ್ ಜಾಜು 2004 ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಿಯಾಂಕಾ ಚೋಪ್ರಾ ಮೇಲೆಯೇ ದಾವೆ ಹೂಡಿದ್ದರು. ಪ್ರಿಯಾಂಕಾ ಚೋಪ್ರಾ ತಮ್ಮ ನಡುವೆ ಆಗಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಜಾಜು ಆರೋಪಿಸಿದ್ದರು.
15 ವರ್ಷ ನಡೆದ ಕಾನೂನು ಹೋರಾಟ
15 ವರ್ಷ ನಡೆದ ಈ ಕಾನೂನು ಹೊರಾಟವನ್ನು ಕೊನೆಗೆ ಎರಡೂ ಕಡೆಯವರು ಪರಸ್ಪರ ಒಪ್ಪಿಗೆ ಮೇರೆಗೆ ಹಿಂಪಡೆದರು. ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಜೊತೆಗೆ ವಾಸ್ತವ್ಯ ಬದಲಾಯಿಸುತ್ತಿದ್ದ ಕಾರಣ ಅವರು ಪ್ರಕರಣವನ್ನು ಹಿಂಪಡೆಯುವದಕ್ಕೆ ಒಪ್ಪಿಗೆ ನೀಡಿದರು.
ಅಕ್ಷಯ್ ಕುಮಾರ್ ಕಾರಣದಿಂದ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದೆ ಎಂದ ನಟಿ