Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ಮಾಡಿದ ಮಾನವೀಯ ಕಾರ್ಯ ಅವರನ್ನು ಸಾಮಾನ್ಯ ವ್ಯಕ್ತಿಯಿಂದ ಮಹಾನ್ ವ್ಯಕ್ತಿಯ ಸ್ಥಾಯಿಗೇರಿಸಿದೆ.
ಕೋವಿಡ್ ಸಮಯದಲ್ಲಿ ಸೋನು ಸೂದ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಸೋನು ಸೂದ್ಗೆ ಸಾಮಾನ್ಯ ಜನರು, ಸಂಘ-ಸಂಸ್ಥೆಗಳು, ಸಿನಿಮಾ ಸೇರಿದಂತೆ ವಿವಿಧ ಉದ್ಯಮಗಳವರು, ರಾಜಕಾರಣಿಗಳು ಹಲವಾರು ರೀತಿ ಸನ್ಮಾನಿಸಿ ಗೌರವಿಸಿದ್ದಾರೆ. ಇದೀಗ ಪಂಜಾಬ್ ಸರ್ಕಾರ ಸೋನು ಸೂದ್ಗೆ ವಿಶೇಷ ಗೌರವೊಂದನ್ನು ನೀಡಿದೆ.
ಹಣದ ಕೊರತೆಯಿಂದ ರೈಲಿನಲ್ಲಿ ಓಡಾಡುತ್ತಿದ್ದ ನಟನ ಚಿತ್ರ ಇಂದು ವಿಮಾನದ ಮೇಲೆ!
ಪಂಜಾಬ್ನಲ್ಲಿ ಕೊರೊನಾ ವ್ಯಾಕ್ಸಿನ್ ಅಭಿಯಾನ ನಡೆಸಲಾಗುತ್ತಿದ್ದು, ಈ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಸೋನು ಸೂದ್ ಅವರನ್ನು ರಾಯಭಾರಿಯನ್ನಾಗಿ ಘೋಷಿಸಿದ್ದಾರೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್.
ಇಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪ್ರಕಟಿಸಿದ್ದಾರೆ ಸಿಎಂ ಅಮರೀಂದರ್ ಸಿಂಗ್. ಸೋನು ಸೂದ್ ಸಹ ಸಿಎಂ ಜೊತೆ ವಿಡಿಯೋದಲ್ಲಿದ್ದಾರೆ. ಸೋನು ಸೂದ್ ಕೊರೊನಾ ಸಮಯದಲ್ಲಿ ಮಾಡಿದ ಮಾನವೀಯ ಕಾರ್ಯವನ್ನು ಹೊಗಳಿರುವ ಅಮರೀಂದರ್ ಸಿಂಗ್. ಸೋನು ಸೂದ್ ಪಂಜಾಬ್ನ ವ್ಯಾಕ್ಸಿನೇಷನ್ ಅಭಿಯಾನಕ್ಕೆ ರಾಯಭಾರಿ ಆಗಿರಲಿದ್ದಾರೆ ಎಂದು ಘೋಷಿಸಿದ್ದಾರೆ.
ವಿಡಿಯೋದಲ್ಲಿ ಸೋನು ಸೂದ್ ಅನ್ನು ಜೊತೆಗೆ ನಿಲ್ಲಿಸಿಕೊಂಡೇ ಮಾತನಾಡಿರುವ ಅಮರೀಂದರ್ ಸಿಂಗ್, 'ಸೋನು ಸೂದ್ಗಿಂತಲೂ ಸೂಕ್ತ ಹಾಗೂ ಆದರ್ಶವಂತ ವ್ಯಕ್ತಿ ಈ ಅಭಿಯಾನಕ್ಕೆ ಸಿಗಲಾರರು. ಪಂಜಾಬ್ನ ವ್ಯಾಕ್ಸಿನೇಷನ್ ಅಭಿಯಾನಕ್ಕೆ ರಾಯಭಾರಿ ಆಗಲು ಅವರು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ' ಎಂದಿದ್ದಾರೆ.
ಕೊರೊನಾ ಲಸಿಕೆ ಪಡೆದ ಬಾಲಿವುಡ್ ನಟ ಸೋನು ಸೂದ್
Recommended Video
ಅಮರೀಂದರ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸೋನು ಸೂದ್, 'ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಹಾಕುವ ಮೂಲಕ ನಮ್ಮ ಪ್ರೀತಿಪಾತ್ರರ ಜೀವನನ್ನು ಕಾಪಾಡೋಣ' ಎಂದಿದ್ದಾರೆ. ಸೋನು ಸೂದ್ ಅವರು ಮೂಲತಃ ಪಂಜಾಬ್ ನವರೇ ಆಗಿದ್ದಾರೆ. ಹಾಗಾಗಿ ಅವರಿಗೆ ಈ ವಿಶೇಷ ಗೌರವ ನೀಡಲಾಗಿದೆ.