ನಿದ್ರೆ ಇಲ್ಲದ ರಾತ್ರಿಗಳು ; ಸಮಂತಾ ಜೊತೆ ಮದುವೆ - ರಾಜ್ ನಿಡಿಮೋರು ಮಾಜಿ ಪತ್ನಿ ಶ್ಯಾಮಿಲಿ ಭಾವುಕ
ಪ್ರೀತಿಯ ಸುಖದ ಕ್ಷಣಗಳನ್ನು ಹೇಗೆ ಕೆಲವರು ಗುನುಗುತ್ತಿರುತ್ತಾರೋ ಹಾಗೇಯೇ ನೋವನ್ನು ಕೂಡ ಪದೇ ಪದೇ ಮನದೊಳಗೆ ಅನುಭವಿಸುತ್ತಿರುತ್ತಾರೆ. ಆಗಾಗ ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಎಲ್ಲ ಸಾಮಾನ್ಯ ಈಗ. ಅನುಭವಗಳ ಮೂಲಕ ಪಾಠ ಕಲಿತರೂ ಪ್ರೀತಿಯ ವಿಷಯದಲ್ಲಿ ಮಾತ್ರ ತುಂಬಾ ಹರ್ಟ್ ಆಗಿ ಬಿಡುತ್ತಾರೆ. ಈ ನೋವು ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ.
ಈ ನೋವು ಸದ್ಯ ಸಮಂತಾ ಎರಡನೇ ಗಂಡ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಿಲಿ ದೇ ಅವರಿಗೆ ಕಾಡುತ್ತಿದೆಯಾ..? ಗೊತ್ತಿಲ್ಲ. ಆದರೆ.. ಹಲವರು ಸದ್ಯ ಶ್ಯಾಮಿಲಿ ದೇ ಅವರ ಬಗ್ಗೆ ಸದ್ಯ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಸಮಂತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಇದೀಗ ತಮ್ಮ ಮಾಜಿ ಪತಿ ಮದುವೆಯಾದ ಮೂರು ದಿನಗಳ ನಂತರ ಶ್ಯಾಮಿಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ನಾನು ರಾತ್ರಿಯಿಡೀ ನಿದ್ದೆ ಇಲ್ಲದೇ ಮಗ್ಗಲು ಬದಲಿಸುತ್ತಾ ಕಳೆದೆ, ಬಹಳಷ್ಟು ಆಲೋಚನೆಗಳು ನನ್ನ ಮನದಲ್ಲಿ ಸುಳಿದಾಡಿದವು ಎಂದು ಬರೆದುಕೊಂಡಿರುವ ಶ್ಯಾಮಿಲಿ ಅಂತಿಮವಾಗಿ, ನನಗೆ ಹಲವರು ಕಳುಹಿಸುತ್ತಿರುವ ಒಳ್ಳೆಯತನ ಮತ್ತು ಹಾರೈಕೆಗಳನ್ನು ಒಪ್ಪಿಕೊಳ್ಳದಿರುವುದು ಕೃತಜ್ಞತೆ ಇಲ್ಲದಂತಾಗುತ್ತದೆ ಎಂದು ಅರಿವಾಯಿತು ಎಂದು ಹೇಳಿದ್ದಾರೆ.
ನಾನು ಕಳೆದ ಹಲವು ವರ್ಷಗಳಿಂದ ಅವಳಿ ಹೃದಯಗಳ (Twin Hearts) ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೇನೆ. ತಾಯಿ ಭೂಮಿ ಹಾಗೂ ಸಮಸ್ತ ಜೀವಿಗಳಿಗೆ ಪ್ರೀತಿ, ಶಾಂತಿ, ಕ್ಷಮೆ ಮತ್ತು ಒಳ್ಳೆಯದನ್ನು ಬಯಸುವುದು ಈ ಧ್ಯಾನದ ಭಾಗವಾಗಿದೆ ಎಂದು ಹೇಳಿರುವ ಶ್ಯಾಮಿಲಿ ದೇ ನನ್ನ ಸ್ನೇಹಿತೆಯೊಬ್ಬರು ನನಗೆ ಈಗ ನೆನಪಿಸಿದಂತೆ, ನಾನೀಗ ಪಡೆಯುತ್ತಿರುವುದು ಆ ಶಕ್ತಿಯ ಪ್ರತಿಫಲವಷ್ಟೇ ಎಂದು ಹೇಳಿದ್ದಾರೆ.
ನನ್ನ ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿರ್ವಹಿಸಲು ನಾನು ಯಾವುದೇ ಪಿಆರ್ ತಂಡವನ್ನು ನೇಮಕ ಮಾಡಿಲ್ಲ. ಯಾವ ಸಿಬ್ಬಂಧಿಗಳಿಲ್ಲ. ನಾನೇ ಸ್ವತಃ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೇನೆ. ಎಂದು ಹೇಳಿರುವ ಶ್ಯಾಮಿಲಿ ಪ್ರಸ್ತುತ ನಾನು ನನ್ನ ಸಂಪೂರ್ಣ ಗಮನವನ್ನು ಬೇಡುವ ಗಂಭೀರ ಸಮಸ್ಯೆಯೊಂದನ್ನು ನಾನು ಎದುರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು ತಮ್ಮ ನೋವಿಗೆ ಕಾರಣವಾದ ವಿಚಾರವನ್ನು ಹಂಚಿಕೊಂಡಿರುವ ಶ್ಯಾಮಿಲಿ ನವೆಂಬರ್ 9 ರಂದು ನನ್ನ ಜ್ಯೋತಿಷ್ಯ ಗುರುಗಳಿಗೆ ಸ್ಟೇಜ್ 4 ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ದುರದೃಷ್ಟವಶಾತ್, ಕ್ಯಾನ್ಸರ್ ಅವರ ಮೆದುಳು ಸೇರಿದಂತೆ ದೇಹದ ಹಲವು ಭಾಗಗಳಿಗೆ ಹರಡಿದೆ. ಇಂತಹ ಸಮಯದಲ್ಲಿ ನನ್ನ ಗಮನ ಎಲ್ಲಿರಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ದಯವಿಟ್ಟು ಈ ಜಾಗವನ್ನು ಸ್ವಚ್ಛವಾಗಿಡಿ. ಪ್ರತಿಯೊಬ್ಬರಿಗೂ ಮತ್ತು ಪ್ರತಿಯೊಂದು ಜೀವಿಗೂ ಉತ್ತಮ ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ಆಧ್ಯಾತ್ಮಿಕತೆ ಸಿಗಲಿ ಎಂದು ಕೂಡ ಶ್ಯಾಮಿಲಿ ಇದೇ ಸಮಯದಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

ಇದಲ್ಲದೇ ಮತ್ತೊಂದು ಪೋಸ್ಟ್ನ್ನು ಕೂಡ ಹಂಚಿಕೊಂಡಿರುವ ಶ್ಯಾಮಿಲಿ ದೇ ಬ್ರೇಕಿಂಗ್ ನ್ಯೂಸ್ ಹುಡುಕುತ್ತಿರೋರಿಗೆ ಇಲ್ಲೇನು ಸಿಗಲಾರದು ಎಂದು ಹೇಳಿದ್ದಾರೆ. ನಾನು ಯಾರ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ, ಮಾಧ್ಯಮದವರು ನನ್ನ ಬಗ್ಗೆ ಮಾತನಾಡಲಿ ಎಂದು ನಾನು ಬಯಸುತ್ತಿಲ್ಲ, ನಾನು ಯಾರಿಗೂ ಸಂದರ್ಶನವನ್ನು ನೀಡುವುದಿಲ್ಲ, ನಾನು ಬ್ರ್ಯಾಂಡ್ ಪ್ರಮೋಷನ್ಗಳನ್ನಾಗಲಿ ಅಥವಾ ಪೇಡ್ ಪಾರ್ಟನರ್ಶಿಫ್ಗಳನ್ನು ಮಾಡುವುದಿಲ್ಲ, ನನಗೆ ಯಾರ ಅನುಕಂಪದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಯಾರಿಗೂ ನಾನು ಏನನ್ನೂ ಮಾರಲು ಬಯಸುವುದಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.



Click it and Unblock the Notifications











