Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರ್ತಿವ್ಯಂತೆ.! ಯಾರು ಕಾರಣ.?
ಒಳ್ಳೆಯದ್ದೋ, ಕೆಟ್ಟದ್ದೋ.. ಸದಾ ಸುದ್ದಿಯಲ್ಲಿ ಇರಬೇಕು ಅಂತ ಬಯಸುವಾಕೆ ರಾಖಿ ಸಾವಂತ್. ಅಷ್ಟಿಲ್ದೇ ಆಕೆಗೆ ವಿವಾದಾತ್ಮಕ ನಟಿ ಅಂತ ಕರೀತಾರಾ ಹೇಳಿ.? ಒಂದಲ್ಲಾ ಒಂದು ಕಾಂಟ್ರೋವರ್ಸಿಗಳನ್ನ ಮೈ ಮೇಲೆ ಎಳೆದುಕೊಂಡು ರಂಪ ಮಾಡಿಕೊಳ್ಳುವುದರಲ್ಲಿ ರಾಖಿ ಸಾವಂತ್ ಎತ್ತಿದ ಕೈ.
ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ಈ ವಿಚಾರದಲ್ಲೂ ಮೂಗು ತೂರಿಸಿ ನಾನಾ ಪಾಟೇಕರ್ ಪರವಾಗಿ ಮಾತನಾಡಿ ರಾಖಿ ಸಾವಂತ್ ಬ್ರೇಕಿಂಗ್ ನ್ಯೂಸ್ ಮಾಡಿದರು.
ತನುಶ್ರೀ ದತ್ತಾ ವಿರುದ್ಧವಾಗಿ ಮಾತನಾಡಿದ್ದಕ್ಕೆ ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಇದೇ ಕಾರಣಕ್ಕೆ ಸದ್ಯ ರಾಖಿ ಸಾವಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ಪೊಲೀಸ್ ಮೊರೆ ಹೋದ ರಾಖಿ
ಪದೇ ಪದೇ ಬೆದರಿಕೆ ಕರೆಗಳು ಬರುತ್ತಿರುವ ಕಾರಣ ನಟಿ ರಾಖಿ ಸಾವಂತ್ ಪೊಲೀಸರ ಮೊರೆ ಹೋಗಿದ್ದಾರೆ. ತನುಶ್ರೀ ದತ್ತಾ ಪರವಾಗಿ ಇರುವ ಅನಾಮಧ್ಯೇಯ ವ್ಯಕ್ತಿ ಕರೆ ಮಾಡಿ ನಿಂದಿಸಿದರಿಂದ Oshiwara ಪೊಲೀಸ್ ಸ್ಟೇಷನ್ ನಲ್ಲಿ ರಾಖಿ ಸಾವಂತ್ ದೂರು ದಾಖಲಿಸಿದ್ದಾರೆ.
ತನುಶ್ರೀ ದತ್ತಾ ವಿವಾದದ ಬಗ್ಗೆ ಕಾಮೆಂಟ್ ಮಾಡಿದ ಬಾಯಿಬಡುಕಿ ರಾಖಿ ಸಾವಂತ್.!
ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ರಾಖಿ
''Oshiwara ಪೊಲೀಸ್ ಠಾಣೆಯಲ್ಲಿ ಇಂದು ನಾನು ದೂರು ದಾಖಲಿಸಿರುವೆ. ಕೆಲವು ದಿನಗಳಿಂದ ನನಗೆ ಅನಾಮಿಕ ವ್ಯಕ್ತಿಯಿಂದ ಫೋನ್ ಕರೆಗಳು ಬರುತ್ತಿವೆ. ತನುಶ್ರೀ ದತ್ತಾ ವಿರುದ್ಧವಾಗಿ ಮಾತನಾಡಿದ್ದಕ್ಕೆ ನನ್ನನ್ನು ನಿಂದಿಸುತ್ತಿದ್ದಾರೆ'' ಎಂದು ಇನ್ಸ್ಟಾಗ್ರಾಮ್ ನಲ್ಲಿ ರಾಖಿ ಸಾವಂತ್ ಬರೆದುಕೊಂಡಿದ್ದಾರೆ.
ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!
ನಾನಾ ಪಾಟೇಕರ್ ಗೆ ಸಪೋರ್ಟ್ ಮಾಡಿದ್ದ ರಾಖಿ
''ಸಾಂಗ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳದೇ, ಡ್ರಗ್ಸ್ ತೆಗೆದುಕೊಂಡು ತನುಶ್ರೀ ದತ್ತಾ ಮೂರ್ಛೆ ಹೋಗಿದ್ದರು. ಹೀಗಾಗಿ ತನುಶ್ರೀ ದತ್ತಾ ಬದಲು ಹಾಡಿಗೆ ನಾನು ಹೆಜ್ಜೆ ಹಾಕಿದೆ'' ಎಂದು ಇತ್ತೀಚೆಗಷ್ಟೇ ಪ್ರೆಸ್ ಮೀಟ್ ನಲ್ಲಿ ರಾಖಿ ಸಾವಂತ್ ಹೇಳಿದ್ದರು.
ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!
ತನುಶ್ರೀ ಬಿಟ್ಟು ಹೋದ ಜಾಗಕ್ಕೆ ಬಂದ ರಾಖಿ
ಹಾರ್ನ್ ಓಕೆ ಪ್ಲೀಸ್' ಚಿತ್ರದ ಸೆಟ್ ನಲ್ಲಿ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ ಮೇಲೆ ಚಿತ್ರೀಕರಣವನ್ನ ಅರ್ಧಕ್ಕೆ ಬಿಟ್ಟು ತನುಶ್ರೀ ದತ್ತಾ ಹೊರಟು ಹೋದರು. ಆಗ, ತನುಶ್ರೀ ದತ್ತಾ ಬದಲು ಹಾಡಿಗೆ ಡ್ಯಾನ್ಸ್ ಮಾಡಿದವರು ರಾಖಿ ಸಾವಂತ್.