Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತನುಶ್ರೀ ದತ್ತಾ ವಿವಾದದ ಬಗ್ಗೆ ಕಾಮೆಂಟ್ ಮಾಡಿದ ಬಾಯಿಬಡುಕಿ ರಾಖಿ ಸಾವಂತ್.!
ವಿವಾದಗಳಿಗೂ ರಾಖಿ ಸಾವಂತ್ ಗೂ ಒಂಥರಾ ಬಿಡಿಸಲಾರದ ನಂಟು. ಬಾಯಿಗೆ ಬಂದ ಹಾಗೆ ಮಾತನಾಡಿ ಏನಾದರೂ ಒಂದು ವಿವಾದವನ್ನ ಮೈ ಮೇಲೆ ಎಳೆದುಕೊಳ್ಳುವಲ್ಲಿ ರಾಖಿ ಸಾವಂತ್ ಎತ್ತಿದ ಕೈ.
ಇಷ್ಟು ದಿನ ಸುಮ್ಮನಿದ್ದ ರಾಖಿ ಸಾವಂತ್ ಇದೀಗ ತನುಶ್ರೀ ದತ್ತಾ ವಿಚಾರದಲ್ಲಿ ಕಾಮೆಂಟ್ ಮಾಡಿದ್ದಾರೆ. 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಶೂಟಿಂಗ್ ನಡೆಯುವಾಗ, ನಾನಾ ಪಾಟೇಕರ್ ವರ್ತನೆಯಿಂದ ಬೇಸೆತ್ತ ತನುಶ್ರೀ ದತ್ತಾ ಚಿತ್ರಕ್ಕೆ ಗುಡ್ ಬೈ ಹೇಳಿದ್ದರು.
ಆಗ ತನುಶ್ರೀ ದತ್ತಾ ಬಿಟ್ಟು ಹೋದ ಜಾಗಕ್ಕೆ ಕಾಲಿಟ್ಟವರು ರಾಖಿ ಸಾವಂತ್. ತನುಶ್ರೀ ದತ್ತಾ ಡ್ಯಾನ್ಸ್ ಮಾಡಬೇಕಿದ್ದ ಹಾಡಿಗೆ ಅಂದು ರಾಖಿ ಸಾವಂತ್ ಹೆಜ್ಜೆ ಹಾಕಿದ್ದರು.
ಇಂದು ಅದೇ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವುದರಿಂದ ರಾಖಿ ಸಾವಂತ್ ಕೂಡ ಪ್ರೆಸ್ ಮೀಟ್ ಮಾಡಿ ನಾನಾ ಪಾಟೇಕರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಮುಂದೆ ಓದಿರಿ...
ಅಂದು ನಡೆದದ್ದೇನು.?
''ನಾನು ಅಂದು ಮನೆಯಲ್ಲಿ ಇದ್ದೆ. ಗಣೇಶ್ ಆಚಾರ್ಯ ಫೋನ್ ಮಾಡಿದರು. ಕೂಡಲೆ ಸೆಟ್ ಗೆ ಬರುವಂತೆ ಹೇಳಿದರು. ನಾನಾ ಪಾಟೇಕರ್ ಕೂಡ ಫೋನ್ ಮಾಡಿ, ಸಾಂಗ್ ಶೂಟ್ ಮಾಡುವಂತೆ ಮನವಿ ಮಾಡಿದರು. ಆಗ ಅಲ್ಲೇನಾಗಿತ್ತು ಅನ್ನೋದು ನನಗೆ ಗೊತ್ತಿರಲಿಲ್ಲ'' - ರಾಖಿ ಸಾವಂತ್, ನಟಿ
ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!
ಗಣೇಶ್ ಆಚಾರ್ಯ ಹೇಳಿದ ಮಾತು
''ನಾನು ಸೆಟ್ ಗೆ ಹೋದಾಗ, ವ್ಯಾನಿಟಿ ವ್ಯಾನ್ ಬಳಿ ತುಂಬಾ ಜನ ಇದ್ದರು. ಮೀಡಿಯಾದವರೂ ಇದ್ದರು. ಏನಾಯ್ತು ಅಂತ ಕೇಳಿದ್ದಕ್ಕೆ, ''ತನುಶ್ರೀ ಈ ಹಾಡನ್ನ ಮಾಡಬೇಕಿತ್ತು. ಆದ್ರೆ, ಕಳೆದ ನಾಲ್ಕೈದು ಗಂಟೆಗಳಿಂದ ವ್ಯಾನಿಟಿ ವ್ಯಾನ್ ಒಳಗೆ ಸೇರಿಕೊಂಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಕೊಡುತ್ತಿಲ್ಲ'' ಅಂತ ಗಣೇಶ್ ಆಚಾರ್ಯ ನನಗೆ ಹೇಳಿದರು'' - ರಾಖಿ ಸಾವಂತ್, ನಟಿ
ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!
ಡ್ರಗ್ಸ್ ತೆಗೆದುಕೊಂಡಿದ್ದರಂತೆ ತನುಶ್ರೀ
ತನುಶ್ರೀ ಮೇಕಪ್ ಹಾಗೂ ಹೇರ್ ಟೀಮ್ ರನ್ನ ಕೇಳಿದಾಗ, ''ಮೂರ್ನಾಲ್ಕು ಗಂಟೆಗಳಿಂದ ತನುಶ್ರೀಗೆ ಜ್ಞಾನ ಇಲ್ಲ. ಆಕೆ ಡ್ರಗ್ಸ್ ತೆಗೆದುಕೊಂಡು ಮೂರ್ಛೆ ಹೋಗಿದ್ದರು'' ಎಂಬ ಸಂಗತಿ ನನಗೆ ಗೊತ್ತಾಯಿತು.
ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ಕೇಳಿ ಬೇಸರಗೊಂಡ ನಟಿ ತನುಶ್ರೀ ದತ್ತಾ
ಸಾಂಗ್ ಶೂಟ್ ಮಾಡಿದ ರಾಖಿ
''ಅವತ್ತು ವಿವಾದಗಳ ಬಗ್ಗೆ ಗಮನ ಕೊಡದೆ ಸಾಂಗ್ ಶೂಟ್ ಮಾಡುವಂತೆ ಗಣೇಶ್ ಆಚಾರ್ಯ ಹಾಗೂ ನಾನಾ ಪಾಟೇಕರ್ ಮನವಿ ಮಾಡಿದ್ದರು. ಪ್ರೊಡ್ಯೂಸರ್ ಕೂಡ ತುಂಬಾ ಹಣ ಹಾಕಿದ್ದರಿಂದ ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡೆ'' ಅಂತಾರೆ ನಟಿ ರಾಖಿ ಸಾವಂತ್.