Don't Miss!
- News ನೇಹಾ ಕೊಲೆಗೆ ಸಿಎಂ ತೀವ್ರ ಖಂಡನೆ: ಕೊಲೆಗಾರನಿಗೆ ಶಿಕ್ಷೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
- Automobiles Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಇಬ್ಬರು ನಟರು ದೇಶದ ಪ್ರಧಾನಿ ಆಗಬೇಕೆಂಬುದು ರಾಖಿ ಸಾವಂತ್ ಆಸೆ
ಬಾಲಿವುಡ್ ನಟಿ ರಾಖಿ ಸಾವಂತ್ಗೆ ನಟರು ದೇಶದ ಪ್ರಧಾನಿ ಆದರೆ ಚೆನ್ನಾಗಿರುತ್ತದೆ ಎನಿಸಿದೆ. ಅದರಲ್ಲಿಯೂ ಬಾಲಿವುಡ್ನ ಇಬ್ಬರು ನಟರನ್ನು ಹೆಸರಿಸಿ ಇವರಿಬ್ಬರಲ್ಲಿ ಒಬ್ಬ ನಟ ಪ್ರಧಾನಿ ಆದರೆ ಉತ್ತಮ ಎಂದಿದ್ದಾರೆ ರಾಖಿ.
ರಾಖಿ ಸಾವಂತ್ ಪ್ರಕಾರ ನಟರಾದ ಸೋನು ಸೂದ್, ಸಲ್ಮಾನ್ ಖಾನ್ ಅವರುಗಳು ದೇಶದ ಪ್ರಧಾನಿ ಆಗಬೇಕಂತೆ. ಹೀಗೆಂದು ಮಾಧ್ಯಮಗಳ ಬಳಿ ಹೇಳಿದ್ದಾರೆ ರಾಖಿ ಸಾವಂತ್.
'ಇವರಿಬ್ಬರು ನಿಜವಾದ ಹೀರೋಗಳು. ಸೋನು ಸೂದ್ ಅಂತೂ ದೇಶದ ಜನರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತೇ ಇದೆ. ಹಾಗಾಗಿ ಇವರಿಬ್ಬರನ್ನು ದೇಶದ ಪ್ರಧಾನಿ ಮಾಡಿಬಿಡಿ' ಎಂದಿದ್ದಾರೆ ರಾಖಿ.
ಸೋನು ಸೂದ್, ಸಲ್ಮಾನ್ ಖಾನ್ ಜೊತೆಗೆ ಸೋನು ಸೂದ್ ಹಾಗೂ ಅಮಿತಾಬ್ ಬಚ್ಚನ್ ಹೆಸರನ್ನೂ ಹೇಳಿದ್ದಾರೆ ನಟಿ ರಾಖಿ ಸಾವಂತ್. ಅಕ್ಷಯ್ ಹಾಗೂ ಅಮಿತಾಬ್ ಸಹ ಪ್ರಧಾನಿ ಆಗಲು ಅರ್ಹತೆಯುಳ್ಳ ನಟರಂತೆ.
ಪರೋಕ್ಷವಾಗಿ ಸರ್ಕಾರಗಳನ್ನು ಟೀಕಿಸಿರುವ ರಾಖಿ ಸಾವಂತ್, ಜನರು ಮತಚಲಾಯಿಸುವ ಮುನ್ನ ಯೋಚಿಸಬೇಕು. ಯಾರು ದೇಶದ ಜನರಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ತಿಳಿದುಕೊಂಡು ಮತಚಲಾಯಿಸಿದ್ದಿದ್ದರೆ ಇಂದಿನ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ ರಾಖಿ.
ಮಂತ್ರಿಗಳು ತಮ್ಮ ಸುರಕ್ಷತೆ ನೋಡಿಕೊಂಡು ಕೂತಿದ್ದಾರೆ. ಸುಮನ್ನೆ ಭಾಷಣಗಳ ಮೇಲೆ ಭಾಷಣ ಮಾಡುತ್ತಿದ್ದಾರೆ. ಆದರೆ ನಮಗೆ ನಿಮ್ಮ ಭಾಷಣ ಬೇಕಿಲ್ಲ. ನಮಗೆ ವ್ಯಾಕ್ಸಿನ್, ಬೆಡ್, ಆಮ್ಲಜನಕ ಬೇಕು ಎಂದು ರಾಖಿ ಕೇಳಿದ್ದಾರೆ.
ಕೋವಿಡ್ ಮೂರನೇ ಅಲೆಯ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, 'ಮೂರನೇ ಅಲೆಯಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ ಎನ್ನಲಾಗುತ್ತಿದೆ. ಮಕ್ಕಳ ಪೋಷಕರ ಕತೆಯೇನು. ನನ್ನ ಹೃದಯ ಅಳುತ್ತಿದೆ' ಎಂದಿದ್ದಾರೆ.
Recommended Video
ಇತ್ತೀಚೆಗಷ್ಟೆ ನಟಿ ರಾಖಿ ಸಾವಂತ್ ತಾಯಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಆ ಸಮಯದಲ್ಲಿ ಸಲ್ಮಾನ್ ಖಾನ್ ರಾಖಿಗೆ ಆರ್ಥಿಕ ಸಹಾಯ ಒದಗಿಸಿದರು.