Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತಿ ವಿರುದ್ಧ ರಾಖಿ ಆರೋಪ, ಪತಿಯ ಅಕ್ರಮ ಸಂಬಂಧ ಬಯಲಿಗೆಳೆಯುವ ಶಪಥ!
ಸದಾ ಒಂದಿಲ್ಲೊಂದು ವಿವಾದಗಳಲ್ಲಿ ತೊಡಗಿರುವ ನಟಿ ರಾಖಿ ಸಾವಂತ್, ವಿವಾಹವೇ ಈಗ ವಿವಾದವಾಗಿಬಿಟ್ಟಿದೆ.
ರಾಖಿ ಸಾವಂತ್, ತಾವು ಮೈಸೂರು ಮೂಲಕ ಆದಿಲ್ ಖಾನ್ ಧುರಾನಿ ಎಂಬುವರನ್ನು ವಿವಾಹವಾಗಿರುವುದಾಗಿ ಘೋಷಿಸಿದ್ದರು. ಆ ನಂತರ ಆದಿಲ್ ಅದನ್ನು ಅಲ್ಲಗಳೆದಿದ್ದರಾದರೂ, ಆ ಬಳಿಕ ಅದನ್ನು ಒಪ್ಪಿಕೊಂಡರು. ಆದರೆ ಈಗ ಇವರಿಬ್ಬರ ವಿವಾಹದಲ್ಲಿ ಬಿರುಕು ಮೂಡಿದೆ.
ಇತ್ತೀಚೆಗಷ್ಟೆ ರಾಖಿ ಸಾವಂತ್ ತಾಯಿ ನಿಧನರಾದಾಗ ಅವರ ಅಂತಿಮ ಸಂಸ್ಕಾರದಲ್ಲಿ ರಾಖಿ ಸಾವಂತ್, ತಮ್ಮ ಪತಿ ಆದಿಲ್ ಅವರನ್ನು ಆಸೆಯಾಗಿಸಿಕೊಂಡು ಅಳುತ್ತಿದ್ದರು. ಆದರೆ ಆ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೀಗ ಆದಿಲ್ ವಿರುದ್ಧ ರಾಖಿ ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ.
''ನಾನು ಆದಿಲ್ಗೆ ಹತ್ತು ಅವಕಾಶ ನೀಡಿದೆ. ಆದಿಲ್ ಸುಧಾರಿಸಿಕೊ ಇದುಸರಿಯಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಅವನು ಕೇಳಲಿಲ್ಲ. ಆ ಹುಡುಗಿಗೆ ಸಹ ನಾನು ಹೇಳಲು ಇಚ್ಛಿಸುತ್ತೇನೆ. ಯಾರು ಪತ್ನಿಗೆ ವಿಧೇಯರಾಗಿ ಇರುವುದಿಲ್ಲವೊ ಅವರು ಯಾರಿಗೂ ವಿಧೇಯರಾಗಿ ಇರುವುದಿಲ್ಲ'' ಎಂದಿದ್ದಾರೆ.
ಪತಿ ವಿರುದ್ಧ ರಾಖಿ ಆರೋಪ, ಪತಿಯ ಅಕ್ರಮ ಸಂಬಂಧ ಬಯಲಿಗೆಳೆಯುವ ಶಪಥ!
ಸದಾ ಒಂದಿಲ್ಲೊಂದು ವಿವಾದಗಳಲ್ಲಿ ತೊಡಗಿರುವ ನಟಿ ರಾಖಿ ಸಾವಂತ್, ವಿವಾಹವೇ ಈಗ ವಿವಾದವಾಗಿಬಿಟ್ಟಿದೆ.
ರಾಖಿ ಸಾವಂತ್, ತಾವು ಮೈಸೂರು ಮೂಲಕ ಆದಿಲ್ ಖಾನ್ ಧುರಾನಿ ಎಂಬುವರನ್ನು ವಿವಾಹವಾಗಿರುವುದಾಗಿ ಘೋಷಿಸಿದ್ದರು. ಆ ನಂತರ ಆದಿಲ್ ಅದನ್ನು ಅಲ್ಲಗಳೆದಿದ್ದರಾದರೂ, ಆ ಬಳಿಕ ಅದನ್ನು ಒಪ್ಪಿಕೊಂಡರು. ಆದರೆ ಈಗ ಇವರಿಬ್ಬರ ವಿವಾಹದಲ್ಲಿ ಬಿರುಕು ಮೂಡಿದೆ.
ಇತ್ತೀಚೆಗಷ್ಟೆ ರಾಖಿ ಸಾವಂತ್ ತಾಯಿ ನಿಧನರಾದಾಗ ಅವರ ಅಂತಿಮ ಸಂಸ್ಕಾರದಲ್ಲಿ ರಾಖಿ ಸಾವಂತ್, ತಮ್ಮ ಪತಿ ಆದಿಲ್ ಅವರನ್ನು ಆಸೆಯಾಗಿಸಿಕೊಂಡು ಅಳುತ್ತಿದ್ದರು. ಆದರೆ ಆ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೀಗ ಆದಿಲ್ ವಿರುದ್ಧ ರಾಖಿ ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ.
''ನಾನು ಆದಿಲ್ಗೆ ಹತ್ತು ಅವಕಾಶ ನೀಡಿದೆ. ಆದಿಲ್ ಸುಧಾರಿಸಿಕೊ ಇದುಸರಿಯಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಅವನು ಕೇಳಲಿಲ್ಲ. ಆ ಹುಡುಗಿಗೆ ಸಹ ನಾನು ಹೇಳಲು ಇಚ್ಛಿಸುತ್ತೇನೆ. ಯಾರು ಪತ್ನಿಗೆ ವಿಧೇಯರಾಗಿ ಇರುವುದಿಲ್ಲವೊ ಅವರು ಯಾರಿಗೂ ವಿಧೇಯರಾಗಿ ಇರುವುದಿಲ್ಲ. ಗಂಡಸು ಹೇಗಿದ್ದರೂ ನಾಯಿಯೇ ಆದರೆ ಆ ಮಹಿಳೆಗೆ ಎಚ್ಚರಿಕೆ ಇರಬೇಕಿತ್ತು. ಒಬ್ಬ ಮಹಿಳೆಯಾಗಿ, ಮತ್ತೊಬ್ಬ ಮಹಿಳೆಯ ಮನೆ ಮುರಿಯಲು ಮುಂದಾಗಿದ್ದಾಳೆ'' ಎಂದಿದ್ದಾರೆ.
''ನಾನು ಬಿಗ್ಬಾಸ್ ಮರಾಠಿಯಲ್ಲಿ ಇದ್ದಾಗ ನೀನು ಅದರ ಸಾಕಷ್ಟು ಲಾಭ ಪಡೆದುಕೊಂಡಿದ್ದೀಯ. ನನ್ನ ಹತ್ತಿರ ಅವರ ಫೋಟೊ, ವಿಡಿಯೋ ಎಲ್ಲವೂ ಇದೆ. ನಮ್ಮ ಮದುವೆಯನ್ನು ಸುಮಾರು ಎಂಟು ತಿಂಗಳ ಕಾಲ ಆದಿಲ್ ಗುಪ್ತವಾಗಿಟ್ಟಿದ್ದಿದ್ದು ಅಫೇರ್ಸ್ ಇಟ್ಟುಕೊಳ್ಳಲು ಎಂದು ಈಗ ನನಗೆ ಗೊತ್ತಾಗುತ್ತಿದೆ'' ಎಂದಿದ್ದಾರೆ ರಾಖಿ.
''ಮೀಡಿಯಾ ಬಳಿ ಯಾಕೆ ಹೋಗ್ತೀಯ ಎನ್ನುತ್ತಾರೆ. ಮನೆಯಲ್ಲಿಯೇ ಇದ್ದು ನಾನು ಸಹ ಫ್ರಿಡ್ಜ್ ಒಳಗೆ ಹೋಗಲು ನನಗೆ ಇಷ್ಟವಿಲ್ಲ. ಆ ಹುಡುಗಿಗೆ ಆದಿಲ್ ಪೂರ್ತಿ ಬೆಂಬಲ ನೀಡುತ್ತಿದ್ದಾನೆ. ಆ ಹುಡುಗಿ ನನ್ನ ತಲೆಯ ಮೇಲೆ ಮೂತ್ರ ಮಾಡಲು ನೋಡುವ ಮಟ್ಟಿಗೆ ಅಹಂಕಾರ ಪ್ರದರ್ಶಿಸಿದ್ದಾಳೆ. ಆದರೆ ನಾನು ಮದುವೆಯ ಹಕ್ಕಿಗಾಗಿ ಹೋರಾಡಲು ನಿಂತಿದ್ದೇನೆ'' ಎಂದು ಅಳುತ್ತಾ ಮಾಧ್ಯಮಗಳ ಬಳಿ ಹೇಳಿದ್ದಾರೆ ರಾಖಿ ಸಾವಂತ್.