Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶಾಖಪಟ್ಟಣದಲ್ಲಿ ರಣ್ಬೀರ್ ಜೊತೆ ರಾಜಮೌಳಿ: 'ಬ್ರಹ್ಮಾಸ್ತ್ರ'ದ ಭರ್ಜರಿ ಪ್ರಚಾರ!
ಬಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿವೆ. ಈ ವರ್ಷ ಹಿಂದಿಯಲ್ಲಿ ಹೆಚ್ಚು ನಿರೀಕ್ಷೆಯ ಜೊತೆಗೆ ದೊಡ್ಡ ಮಟ್ಟದಲ್ಲಿ ಬರುತ್ತಿರುವ ಸಿನಿಮಾ 'ಬ್ರಹ್ಮಾಸ್ತ್ರ'. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲೂ ಕೂಡ ರಿಲೀಸ್ ಆಗಲಿದೆ.
'ಬ್ರಹ್ಮಾಸ್ತ್ರ' ಮೇಕಿಂಗ್, ಹಾಡು ಮತ್ತು ಟೀಸರ್ ಇದು ಹೊಸ ರೀತಿಯ ಸಿನಿಮಾ ಎನ್ನುವುದನ್ನು ಹೇಳಿದೆ. ಈ ಸಿನಿಮಾವನ್ನು ಇಡೀ ಚಿತ್ರರಂಗ ಎದುರು ನೋಡುತ್ತಾ ಇದೆ. ಸಿನಿಮಾದ ರಿಲೀಸ್ ದಿನಾಂಕ ಕೂಡ ನಿಗದಿ ಆಗಿದೆ. ಸದ್ಯ ಪ್ರಚಾರದ ಕೆಲಸವನ್ನು ಸಿನಿಮಾ ತಂಡ ಶುರು ಮಾಡಿದೆ.
ಎನ್ಟಿಆರ್ಗೆ ಕೈ ಕೊಟ್ಟ ಆಲಿಯಾ, ದೀಪಿಕಾ: ಸಾಯಿ ಪಲ್ಲವಿ, ರಶ್ಮಿಕಾ ಇಬ್ಬರಲ್ಯಾರು ಹೀರೊಯಿನ್?
'ಬ್ರಹ್ಮಾಸ್ತ್ರ' ರಿಲೀಸ್ ಆಗೋಕೆ ಇನ್ನು ನಾಲ್ಕು ತಿಂಗಳು ಸಮಯ ಇದೆ. ಆದರೆ ಅದಾಗಲೇ ಸಿನಿಮಾ ತಂಡ ಅಬ್ಬರದ ಪ್ರಚಾರ ಶುರು ಮಾಡಿ ಬಿಟ್ಟಿದೆ. ಸೌತ್ ಮೂಲಕ ಸಿನಿಮಾ ಪ್ರಚಾರ ಶುರುವಾಗಿದ್ದು, ನಿರ್ದೇಶಕ ರಾಜಮೌಳಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ.
|
ವಿಶಾಖಪಟ್ಟಣದಲ್ಲಿ ರಣ್ಬೀರ್ ಕಪೂರ್!
'ಬ್ರಹ್ಮಾಸ್ತ್ರ' ಸಿನಿಮಾದ ಅಬ್ಬರದ ಪ್ರಚಾರ ಶುರುವಾಗಿದೆ. ಹಾಗಾಗಿ ನಟ ರಣ್ಬೀರ್ ಕಪೂರ್ ವಿಶಾಖ ಪಟ್ಟಣಂಗೆ ಬಂದಿಳಿದಿದ್ದಾರೆ. 'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರಕ್ಕಾಗಿ ನಿರ್ದೇಶಕ ಅಯಾನ್ ಮುಖರ್ಜಿ ಮತ್ತು ರಣ್ಬೀರ್ ಕಪೂರ್ ವೈಜಾಗ್ಗೆ ಬಂದಿದ್ದಾರೆ. ಇವರನ್ನು ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಏರ್ಪೋರ್ಟ್ ಎಂಟ್ರಿಯಲ್ಲಿ ಹೂವಿನ ಅಭಿಶೇಕ ಮಾಡಿ ಸ್ವಾಗತ ಕೋರಲಾಗಿದೆ.
ಮದುವೆ ಬಳಿಕ ಆಲಿಯಾ ಭಟ್ ಕೈ ಹಿಡಿದ ಅದೃಷ್ಟ: ಹಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ
|
'ಬ್ರಹ್ಮಾಸ್ತ್ರ' ಪ್ರಚಾರದಲ್ಲಿ ರಾಜಮೌಳಿ ಭಾಗಿ!
ಬಾಲಿವುಡ್ ಮಂದಿಗೆ ರಾಜಮೌಳಿ ಚಿರಪರಿಚಿತ. ಹಾಗಾಗಿ 'ಬ್ರಹ್ಮಾಸ್ತ್ರ' ಟೀಮ್ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ರಾಜಮೌಳಿಯ ಮೊರೆ ಹೋಗಿದೆ. ವೈಜಾಗ್ಗೆ ಬಂದ 'ಬ್ರಹ್ಮಾಸ್ತ್ರ' ತಂಡದ ಜೊತೆಗೆ ರಾಜಮೌಳಿ ಕಾಣಿಸಿಕೊಂಡಿದ್ದಾರೆ. ರಣ್ಬೀರ್ ಜೊತೆಗೆ ರಾಜಮೌಳಿಯನ್ನು ಕಂಡ ಅಭಿಮಾನಿಗಳು ಅವರ ಜೊತೆಗೆ ಫೊಟೋ ತೆಗೆದುಕೊಳ್ಳಲು ಮುತ್ತಿಕೊಂಡಿದ್ದಾರೆ. ಅಲ್ಲಿನ ಸಾಕಷ್ಟು ವಿಡಿಯೋ ಮತ್ತು ಫೊಟೋಗಳು ವೈರಲ್ ಲಿಸ್ಟ್ ಸೇರಿಕೊಂಡಿವೆ.
|
ಸೆಪ್ಟೆಂಬರ್ 9ಕ್ಕೆ 'ಬ್ರಹ್ಮಾಸ್ತ್ರ' ರಿಲೀಸ್!
'ಬ್ರಹ್ಮಾಸ್ತ್ರ' ಚಿತ್ರದ ರಿಲೀಸ್ಗೆ ಇನ್ನು ನಾಲ್ಕು ತಿಂಗಳು ಬಾಕಿ ಇದೆ. ಸೆಪ್ಟೆಂಬರ್ 9ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಅದರೆ ನಾಲ್ಕು ತಿಂಗಳು ಮೊದಲೆ ಸಿನಿಮಾ ತಂಡ ಪ್ರಚಾರ ಕಾರ್ಯ ಶುರು ಮಾಡಿ ಅಚ್ಚರಿ ಮೂಡಿಸಿದೆ. ಸದ್ಯ ತೆಲುಗಿನಲ್ಲಿ ಪ್ರಚಾರ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು, ಮಲಯಾಳಂನಲ್ಲೂ ಕೂಡ ಸಿನಿಮಾ ಪ್ರಚಾರ ಮುಂದುವರೆಯಲಿದೆ.
ಆಲಿಯಾ ಭಟ್ ನಟಿಸಬೇಕಿದ್ದ ಪಾತ್ರ ಕನ್ನಡತಿ ರಶ್ಮಿಕಾ ಮಂದಣ್ಣ ಪಾಲು!
|
'ಬ್ರಹ್ಮಾಸ್ತ್ರ' ಪ್ರಚಾರದಲ್ಲಿ ಆಲಿಯಾ ಮಿಸ್ಸಿಂಗ್!
'ಬ್ರಹ್ಮಾಸ್ತ್ರ' ಪ್ರಚಾರದಲ್ಲಿ ನಟ ರಣ್ಬೀರ್ ಕಪೂರ್ ಮತ್ತು ಅಯಾನ್ ಮುಖರ್ಜಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಆಲಿಯಾ ಭಟ್ ಗೈರಾಗಿದ್ದಾರೆ. ಇದಕ್ಕೆ ಕಾರಣ ಆಲಿಯಾ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಅಲಿಯಾ ಭಟ್ ತಮ್ಮ ಹಾಲಿವುಡ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇರುವ ಕಾರಣ ವಿಶಾಖ ಪಟ್ಟಣದಲ್ಲಿ ರಣ್ಬೀರ್ ಕಪೂರ್ ಜೊತೆಗೆ ಕಾಣಿಸಿಕೊಂಡಿಲ್ಲ.