Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯರವಾಡ ಜೈಲಿನಲ್ಲಿ ತಾರೆ ರಾಣಿ ಮುಖರ್ಜಿ
'ಮರ್ದಾನಿ' ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ದುಷ್ಟರನ್ನ ಬಗ್ಗುಬಡಿದ ರಾಣಿ ಮುಖರ್ಜಿ, ಈಗ ಖುದ್ದು ಜೈಲಿಗೆ ತೆರಳಿದ್ದಾರೆ. ಹಾಗಂತ ಛೋಪ್ರಾ ಸೊಸೆ ಯಾವುದೇ ಅಪರಾಧ ಎಸಗಿಲ್ಲ. ಆಡಿದ ಮಾತನ್ನ ಉಳಿಸಿಕೊಳ್ಳೋದಕ್ಕೆ ರಾಣಿ ಯರವಾಡ ಸೆಂಟ್ರಲ್ ಜೈಲಿಗೆ ಎಂಟ್ರಿಕೊಟ್ಟಿದ್ದಾರೆ.
ಮಹಿಳೆಯರ ಹಕ್ಕುಗಳ ಪರ ಪ್ರತಿವಾದಿಸುವ ರಾಣಿ, 'ಮರ್ದಾನಿ' ಚಿತ್ರದ ಶೂಟಿಂಗ್ ವೇಳೆ ಖೈದಿಗಳ ಪುನರ್ವತಿ ಬಗ್ಗೆಯೂ ತಮ್ಮ ಅಭಿಪ್ರಯವನ್ನ ವ್ಯಕ್ತಪಡಿಸಿದ್ದರು. ಆದರೆ ಅದೆಲ್ಲವೂ ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಿಡದೆ, ಯರವಾಡ ಜೈಲಿಗೆ ಭೇಟಿ ನೀಡಿ ಮಹಿಳಾ ಖೈದಿಗಳ ಕಷ್ಟ-ಸುಖ ವಿಚಾರಿಸಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರ ಬಂಧಿಖಾನೆ ಇಲಾಖೆ ವತಿಯಿಂದ ಖೈದಿಗಳೇ ತಯಾರಿಸಿರುವ 'MAKA' ಬ್ರ್ಯಾಂಡ್ ಉತ್ಪನ್ನಗಳನ್ನೂ ರಾಣಿ ಬಿಡುಗಡೆ ಮಾಡಿದರು. ನಂತರ, ಐತಿಹಾಸಿಕ ಹಿನ್ನೆಲೆಯುಳ್ಳ ಯರವಾಡ ಸೆಂಟ್ರಲ್ ಜೈಲನ್ನ ಗಿರಿಕಿ ಹೊಡೆದ ರಾಣಿ, ಸ್ವತಂತ್ರ ಸಂಗ್ರಾಮದಲ್ಲಿ ಜೈಲು ಸೇರಿದ್ದ ಗಾಂಧೀಜಿ, ನೆಹರು, ಸರ್ದಾರ್ ವಲ್ಲಭಾಯ್ ಪಟೇಲ್ ಇದ್ದ ಸೆಲ್ ಗಳಿಗೂ ಭೇಟಿ ನೀಡಿದ್ರು.
ಬಂಧಿಖಾನೆಯ ಅಡಿಷನಲ್ ಡಿ.ಸಿ.ಪಿ ಮೀರನ್ ಬೊರ್ವಾಂಕರ್ ಮಾತನಾಡಿ, ''ಬಂಧಿಖಾನೆಯ ಮೊದಲ ರೇಡಿಯೋ ಸ್ಟೇಷನ್ ಮತ್ತು 'MAKA' ಬ್ರ್ಯಾಂಡ್ ಉತ್ಪನ್ನಗಳನ್ನ ಬಿಡುಗಡೆ ಮಾಡಿರುವ ರಾಣಿ, ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಮಹಿಳೆಯ ಹಕ್ಕುಗಳನ್ನ ಪ್ರತಿಪಾದಿಸುವ ರಾಣಿ, ಇಂದು ಅದನ್ನ ಪ್ರೂವ್ ಮಾಡಿದ್ದಾರೆ'' ಅಂದ್ರು. (ಫೋಟೋ ಕೃಪೆ - MANOJ KESHARWANI)