Don't Miss!
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- News Lok Sabha Election 2024: ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಕಾರಣ-ಎಚ್ಡಿಕೆ
- Sports IPL 2024: RCB ವಿರುದ್ಧ ಈ ಒಂದು ದಾಖಲೆಯನ್ನು ಯಾರು ಬೇಗ ನಿರ್ಮಿಸುತ್ತಾರೆ?
- Lifestyle ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಪ್ರವೇಶ ಮಾಡಿದ ಬಡ ಗಾಯಕಿ
Recommended Video
ಕಳೆದ ತಿಂಗಳು ಒಬ್ಬ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ನಿಂತು ಹಿಂದಿ ಹಾಡು ಹಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಲತಾ ಮಂಗೇಶ್ಕರ್ ಹಾಡು ಹಾಡಿದ ಈ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಜನಪ್ರಿಯತೆ ಪಡೆದರು.
ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮೊಂಡಲ್ ಎಂಬ ಮಹಿಳೆಗೆ ಈಗ ಬಾಲಿವುಡ್ ಹಾಡು ಹಾಡುವ ಅವಕಾಶ ಸಿಕ್ಕಿದೆ. ಗಾಯಕ, ಸಂಗೀತ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಆಗಿರುವ ಹಿಮೇಶ್ ರೇಶ್ಮಿಯಾ ಈ ಮಹಿಳೆಗೆ ಒಂದು ಒಳ್ಳೆಯ ಅವಕಾಶ ನೀಡಿದ್ದಾರೆ.
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಜಾಕಿಚಾನ್ ಹಿಂದಿಕ್ಕಿದ ಅಕ್ಷಯ್ ಕುಮಾರ್
ಹಿಮೇಶ್ ರೇಶ್ಮಿಯಾ ಒಂದು ಹಾಡನ್ನು ರಾನು ಮೊಂಡಲ್ ರಿಂದ ಹಾಡಿಸಿದ್ದಾರೆ. ತಮ್ಮ ಸ್ಟೂಡಿಯೊಗೆ ಕರೆದುಕೊಂಡು ಹೋಗಿ ಹಾಡಿನ ರೆಕಾರ್ಡಿಂಗ್ ಮಾಡಿಸಿದ್ದಾರೆ. ರಾನು ಗಾಯನ ಮೆಚ್ಚಿ ಧೈರ್ಯ ತುಂಬಿ, ಆಕೆಯಿಂದ ಈ ಹಾಡನ್ನು ಹಾಡಿಸಿದ್ದಾರೆ. 'ತೇರಿ ಮೇರಿ ಕಹಾನಿ..' ಎಂಬ ಹಾಡು ಇದಾಗಿದೆ.
ರಾನು ಮೊಂಡಲ್ ಹಾಡನ್ನು ತಮ್ಮ ಇನ್ಸ್ಟಾಗ್ರಾಮ್ ಹಿಮೇಶ್ ರೇಶ್ಮಿಯಾ ಹಂಚಿಕೊಂಡಿದ್ದಾರೆ. ಹಿಮೇಶ್ ಮಾಡಿರುವ ಒಳ್ಳೆಯ ಕೆಲಸಕ್ಕೆ ದೊಡ್ಡ ಮೆಚ್ಚುಗೆ ಸಿಗುತ್ತದೆ. ರಾನು ಮೊಂಡಲ್ ಹಾಡಿನ ಝಲಕ್ ತುಂಬ ಚೆನ್ನಾಗಿದೆ. ಪೂರ್ಣ ಹಾಡು ಕೇಳುವ ಆಸೆಯನ್ನು ಅನೇಕರು ವ್ಯಕ್ತಪಡಿಸಿದ್ದಾರೆ.
ಅನುಷ್ಕಾ ಶರ್ಮಾ ಬಾಯಲ್ಲಿ ಕನ್ನಡ ಪದ: ನಿಜಕ್ಕೂ ಕನ್ನಡ ಬಳಸಿದ್ರಾ ಕೊಹ್ಲಿ ಪತ್ನಿ?
ಜುಲೈ ತಿಂಗಳಿನಲ್ಲಿ ಪಶ್ವಿಮ ಬಂಗಾಳದ ರಣಫಾಟ್ ನಲ್ಲಿ ರಾನು ಮೊಂಡಲ್ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿತ್ತು. ನಂತರ ಒಂದು ರಿಯಾಲಿಟಿ ಶೋದಲ್ಲಿ ಹಾಡುವ ಅವಕಾಶವೂ ಅವರಿಗೆ ಬಂದಿತ್ತು.