Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಣ್ವೀರ್ ಸಿಂಗ್ ಇಷ್ಟದ ದಕ್ಷಿಣ ಭಾರತ ಸಿನಿಮಾ ಮತ್ತು ನಟರಿವರು
ದಕ್ಷಿಣ ಭಾರತ ಸಿನಿಮಾಗಳ ಹೆಚ್ಚಿನ ಪ್ರೀತಿ ಮತ್ತು ಗೌರವುಳ್ಳ ಬಾಲಿವುಡ್ ನಟರಲ್ಲಿ ರಣ್ವೀರ್ ಸಿಂಗ್ ಸಹ ಒಬ್ಬರು. ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನೂ ರಣ್ವೀರ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ರಣ್ವೀರ್ ಸಿಂಗ್, ತಮಗೆ ಇಷ್ಟವಾದ ದಕ್ಷಿಣ ಭಾರತ ಸಿನಿಮಾಗಳು, ನಟರು, ನಿರ್ದೇಶಕರನ್ನು ಹೆಸರಿಸಿದ್ದಾರೆ.
ಕೇವಲ ಸಿನಿಮಾಗಳನ್ನು ನೋಡುವುದು ಮಾತ್ರವಲ್ಲ, ತಮ್ಮ ಇಷ್ಟದ ದಕ್ಷಿಣ ಭಾರತ ನಟರು, ನಿರ್ದೇಶಕರೊಟ್ಟಿಗೆ ಕೆಲಸ ಮಾಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಅವಕಾಶ ದೊರೆತರೆ ಭಾಷೆಯನ್ನು ಕಲಿಯುವ ಉತ್ಸಾವನ್ನೂ ರಣ್ವೀರ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ರಣ್ವೀರ್ ಸಿಂಗ್ಗೆ ನಿರ್ದೇಶಕ ರಾಜಮೌಳಿ ಬಹಳ ಇಷ್ಟವಂತೆ. ನಾನು ಅವರ ಸಿನಿಮಾಗಳ ಅಭಿಮಾನಿ, ಅವರ ಕ್ರೇಜಿ ಐಡಿಯಾಗಳು ನನಗೆ ಬಹಳ ಮೆಚ್ಚುಗೆಯಾಗುತ್ತವೆ. ಅವರ 'ಮಗಧೀರ' ಸಿನಿಮಾ ನನಗೆ ಬಹಳ ಇಷ್ಟವಾಗಿತ್ತು, ಅವರ ಮುಂದಿನ ಸಿನಿಮಾ 'ಆರ್ಆರ್ಆರ್' ನೋಡಲು ನಾನು ಉತ್ಸುಕನಾಗಿದ್ದೇನೆ'' ಎಂದಿದ್ದಾರೆ ರಣ್ವೀರ್ ಸಿಂಗ್.
ರಾಜಮೌಳಿ ಮಾತ್ರವೇ ಅಲ್ಲ ನಿರ್ದೇಶಕ ಮಣಿರತ್ನಂ ಎಂದರೂ ರಣ್ವೀರ್ಗೆ ಬಹಳ ಇಷ್ಟವಂತೆ. ''ನಾನು ಮಣಿರತ್ನಂ ಸಿನಿಮಾಗಳನ್ನು ನೋಡುತ್ತಾ ಬೆಳೆದವನು'' ಎಂದು ಹೇಳಿರುವ ರಣ್ವೀರ್, ತಮಗೆ ತಮಿಳಿನ ಮತ್ತೊಬ್ಬ ನಿರ್ದೇಶಕ ಶಂಕರ್ ಸಿನಿಮಾಗಳೆಂದರೂ ಇಷ್ಟ ಎಂದಿದ್ದಾರೆ. ''ಶಂಕರ್ ದೊಡ್ಡ ಕ್ಯಾನ್ವಾಸ್ನಲ್ಲಿ ಸಿನಿಮಾಗಳನ್ನು ಪ್ರೆಸೆಂಟ್ ಮಾಡುವ ರೀತಿ ತಮಗೆ ಇಷ್ಟವಾಯಿತೆಂದಿದ್ದಾರೆ. ಅವರ ಐಡಿಯಾಗಳು ನನಗೆ ರೋಚಕ ಎನಿಸುತ್ತವೆ. ಅವರೊಟ್ಟಿಗೆ ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ'' ಎಂದಿದ್ದಾರೆ ರಣ್ವೀರ್. ಶಂಕರ್ ಅವರ ಮುಂದಿನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ತಮ್ಮ ಇಷ್ಟದ ನಟರನ್ನು ಹೆಸರಿಸಿದ್ದಾರೆ ರಣ್ವೀರ್ ಸಿಂಗ್. ''ನನಗೆ ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ನಟನೆ ಬಹಳ ಹಿಡಿಸಿತು'' ಎಂದಿರುವ ಅವರು, 'ಸೂಪರ್ ಡಿಲಕ್ಸ್', 'ಮಗಧೀರ', 'ಕುಂಬಳಂಗಿ ನೈಟ್ಸ್' ಸಿನಿಮಾಗಳನ್ನು ನಾನು ಬಹಳ ಮೆಚ್ಚಿಕೊಂಡೆ ಎಂದಿದ್ದಾರೆ. ಮಲಯಾಳಂ ಸಿನಿಮಾಗಳು ಅದ್ಭುತವಾಗಿ ಮೂಡಿಬರುತ್ತಿವೆ ಎಂದಿರುವ ರಣ್ವೀರ್ ನನ್ನ ಇಷ್ಟದ ನಿರ್ದೇಶಕ ನಟರೊಟ್ಟಿಗೆ ಕೆಲಸ ಮಾಡುವ ಆಸೆಯಿದೆ'' ಎಂದಿದ್ದಾರೆ.
ತಮ್ಮ ಪತ್ನಿ ದೀಪಿಕಾ ಪಡುಕೋಣೆ ಇದೀಗ ಬಹುಭಾಷಾ ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಹೇಳಿರುವ ರಣ್ವೀರ್ ಸಿಂಗ್, ''ದೀಪಿಕಾ ನನಗೆ ಹೇಳುತ್ತಿರುತ್ತಾರೆ, ಬಹುಭಾಷಾ ಸಿನಿಮಾಗಳಲ್ಲಿ ನಟಿಸುವ ಸವಾಲುಗಳು ಎಂಥಹವು, ದಕ್ಷಿಣ ಭಾರತ ಸಿನಿಮಾ ಕರ್ಮಿಗಳು ಯಾವ ರೀತಿ ಸಿನಿಮಾ ಮಾಡುತ್ತಾರೆ. ಬಾಲಿವುಡ್ಗೂ ಅಲ್ಲಿಗೂ ಇರುವ ಭಿನ್ನತೆ ಇತರೆ ವಿಷಯಗಳನ್ನು ಹಂಚಿಕೊಳ್ಳುತ್ತಾಳೆ. ನನಗೂ ಆ ಸವಾಲುಗಳನ್ನು ಎದುರಿಸಿ ನಟಿಸುವಾಸೆ'' ಎಂದಿದ್ದಾರೆ ರಣ್ವೀರ್ ಸಿಂಗ್. ದೀಪಿಕಾ ಪಡುಕೋಣೆ ಪ್ರಸ್ತುತ ಪ್ರಭಾಸ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದು, ಅಮಿತಾಬ್ ಬಚ್ಚನ್ ಸಹ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.