Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪದ್ಮಾವತ್' ನಂತರ 'ಹಾಲಿವುಡ್'ಗೆ ಹಾರಲಿದ್ದಾರೆ ರಣ್ವೀರ್ ಸಿಂಗ್
ಬಾಲಿವುಡ್ ನಟ ರಣ್ವೀರ್ ಸಿಂಗ್ ಸದ್ಯ ತುಂಬ ಸಂತಸದಲ್ಲಿ ಇದ್ದಾರೆ. ಕಾರಣ ಅವರ ಅಭಿನಯದ 'ಪದ್ಮಾವತ್' ಸಿನಿಮಾ ಎಲ್ಲ ಅಡೆತಡೆಗಳನ್ನು ಮೀರಿ ಬಿಡುಗಡೆಯಾಗಿದೆ. ಮಾತ್ರವಲ್ಲದೆ ಪ್ರೇಕ್ಷಕರಿಂದ ಅದ್ಬುತ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸಿನಿಮಾದಲ್ಲಿ ಎಲ್ಲರ ನಟನೆಗೆ ಪ್ರಶಂಸೆ ಕೇಳಿ ಬಂದಿದೆ. ಅದರಲ್ಲಿಯೂ ರಣ್ವೀರ್ ಸಿಂಗ್ ಅವರ ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ನೋಡುಗರು ತುಂಬ ಮೆಚ್ಚಿಕೊಂಡಿದ್ದರು. ಆ ಪಾತ್ರವನ್ನು ರಣ್ವೀರ್ ಅದ್ಬುತವಾಗಿ ನಿರ್ವಹಿಸಿದ್ದರು. ಈಗ ಈ ಸಿನಿಮಾದ ನಂತರ ರಣ್ವೀರ್ ಹಾಲಿವುಡ್ ಕನಸು ಕಾಣುತ್ತಿದ್ದಾರೆ.
'ಪದ್ಮಾವತ್' ಚಿತ್ರ ನೋಡಿದ ವಿಮರ್ಶಕರು ಏನಂತಾರೆ.?
''ನನಗೆ ಹಾಲಿವುಡ್ ನಿಂದ ಆಫರ್ ಗಳು ಬರುತ್ತಿದ್ದು ಈ ಬಗ್ಗೆ ಉತ್ಸುಕನಾಗಿದ್ದೇನೆ. ನಾನು ಹಿಂದಿ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ನಟಿಸುತ್ತೇನೆ.'' ಎಂದು ಹೇಳಿದ್ದಾರೆ. 'ಪದ್ಮಾವತ್' ನಂತರ '1983', 'ಗಲ್ಲಿ ಬಾಯ್' ಮತ್ತು 'ಸಿಂಬಾ' ಚಿತ್ರದಲ್ಲಿ ಅವರು ಬಿಜಿ ಆಗಲಿದ್ದಾರೆ ಈ ಸಿನಿಮಾಗಳ ಬಳಿಕ ಹಾಲಿವುಡ್ ಗೆ ಹಾರುವ ಪ್ಲಾನ್ ನಲ್ಲಿ ರಣ್ವೀರ್ ಇದ್ದಾರೆ.
ರಣ್ವೀರ್ ಸಿಂಗ್ ಅಭಿನಯದ 'ಪದ್ಮಾವತ್' ಕಳೆದ ಗುರುವಾರ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕದೆ. ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಂಜಯ್ ಲೀಲಾ ಬಸ್ಸಾಲಿ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.