Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಭಾಸ್ ಸಿನಿಮಾ ನಿರ್ಮಾಪಕನ ಮೇಲೆ ಅತ್ಯಾಚಾರ ಆರೋಪ: ಸುಳ್ಳೆಂದು ಸಾಕ್ಷ್ಯ ನೀಡಿದ ಟಿ-ಸೀರೀಸ್
ಭಾರತ ಚಿತ್ರರಂಗದ ದೊಡ್ಡ ಬಜೆಟ್ ಸಿನಿಮಾ ನಿರ್ಮಾಪಕರಲ್ಲೊಬ್ಬರಾಗಿರುವ ಭೂಷಣ್ ಕುಮಾರ್ ವಿರುದ್ಧ ಮಾಡೆಲ್ ಒಬ್ಬರು ಅತ್ಯಾಚಾರ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಭೂಷಣ್ ಕುಮಾರ್ ವಿರುದ್ಧ ಮುಂಬೈನ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಭೂಷಣ್ ಕುಮಾರ್ ಒಡೆತನದ ಟಿ-ಸೀರೀಸ್ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಆಗಿದ್ದು, ''ಈ ಆರೋಪ ಸುಳ್ಳಾಗಿದ್ದು, ಟಿ-ಸೀರೀಸ್ ಸಂಸ್ಥೆಯ ಹಾಗೂ ಅದರ ಚೇರ್ಮನ್ರ ಮಾನಹಾನಿ ಮಾಡಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ'' ಎಂದಿದ್ದಾರೆ.
ಮಲ್ಲಿಕಾರ್ಜುನ ಪೂಜಾರಿ ಎಂಬ ರಾಜಕಾರಣಿಯೊಬ್ಬ ಭೂಷಣ್ ಕುಮಾರ್ ಅವರಿಂದ ಹಣ ವಸೂಲಿ ಮಾಡಲು ಈ ತಂತ್ರ ಹೆಣೆದಿದ್ದಾನೆ ಎಂದಿರುವ ಟಿ-ಸೀರೀಸ್. ಮಲ್ಲಿಕಾರ್ಜುನ ಪುಜಾರಿಯು ಮಾಡೆಲ್ ಒಬ್ಬರನ್ನು ಸಂಪರ್ಕಿಸಿ ಇನ್ನೂ ಕೆಲವರನ್ನು ಸೇರಿಸಿಕೊಂಡು ಈ ವ್ಯೂಹ ರಚಿಸಿದ್ದಾರೆ ಎಂದಿದೆ ಟಿ-ಸೀರೀಸ್.
ಕಳೆದ ತಿಂಗಳು ಜೂನ್ನಲ್ಲಿ ಮಲ್ಲಿಕಾರ್ಜುನ್ ಪೂಜಾರಿ, ಭೂಷಣ್ ಕುಮಾರ್ ಅವರನ್ನು ಸಂಪರ್ಕಿಸಿ ಬೆದರಿಕೆ ಹಾಕಿದ್ದರು, ಹಣ ನೀಡುವಂತೆ ಒತ್ತಾಯಿಸಿದ್ದರು. ಹಣ ನೀಡಲಿಲ್ಲವೆಂದರೆ ಹುಡುಗಿಯೊಬ್ಬಳು ಬಂದು ಸುಳ್ಳು ದೂರು ನೀಡಿ ಮಾನಹಾನಿ ಮಾಡುತ್ತಾಳೆ ಎಂದು ಬೆದರಿಸಿದ್ದರು. ಈ ಬೆದರಿಕೆ ವಿರುದ್ಧ ಭೂಷಣ್ ಕುಮಾರ್ ಅವರು ಜುಲೈ 1 ನೇ ತಾರೀಖಿನಂದು ಲಿಖಿತ ದೂರು ಸಹ ನೀಡಿದ್ದರು ಎಂದಿದೆ ಟಿ-ಸೀರೀಸ್.
ಜುಲೈ 5ನೇ ತಾರೀಕು ಟಿ-ಸೀರೀಸ್ನ ಕೃಷ್ಣ ಕುಮಾರ್ ಅನ್ನು ದಿ ರೆಗೆನ್ಜಾ ಬೈ ತುಂಗಾ ಹೋಟೆಲ್ಗೆ ಬರಲು ಹೇಳಿದ್ದ ರಾಜಕಾರಣಿ ಮಲ್ಲಿಕಾರ್ಜುನ ಪೂಜಾರಿ ಅಲ್ಲಿ ಕೃಷ್ಣ ಕುಮಾರ್ಗೆ ಕೆಲವು ಸಂದೇಶಗಳನ್ನು ತೋರಿಸಿ ಯುವತಿಯು ಭೂಷಣ್ ಕುಮಾರ್ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಆತ ತೋರಿಸಿದ ಸಂದೇಶಗಳು ಭೂಷಣ್ ಕುಮಾರ್ ಅಥವಾ ಟಿ-ಸೀರೀಸ್ನ ಇನ್ನಾವುದೆ ಸಿಬ್ಬಂದಿಯ ಮೊಬೈಲ್ ಸಂಖ್ಯೆಯಿಂದ ಹೋಗಿದ್ದಲ್ಲ ಎಂದು ಹೇಳಿಕೆಯಲ್ಲಿ ಟಿ-ಸೀರೀಸ್ ಹೇಳಿದೆ.
ಮಲ್ಲಿಕಾರ್ಜುನ ಹಣಕ್ಕಾಗಿ ಪದೇ-ಪದೇ ಕೃಷ್ಣ ಕುಮಾರ್ಗೆ ಕರೆ ಮಾಡುತ್ತಲೇ ಇದ್ದ ಆದರೆ ಕೃಷ್ಣ ಕುಮಾರ್ ಪ್ರತಿಕ್ರಿಯಿಸಲಿಲ್ಲ ಹಾಗಾಗಿ ಮಲ್ಲಿಕಾರ್ಜುನ್ ಪುಜಾರಿ ಅವರು ಮೊದಲೇ ಬೆದರಿಕೆ ಹಾಕಿದ್ದಂತೆ ಸುಳ್ಳು ದೂರು ಕೊಡಿಸಿದ್ದಾರೆ ಎಂದಿದ್ದಾರೆ.
Recommended Video
ಭೂಷಣ್ ಕುಮಾರ್, ಬಾಲಿವುಡ್ನ ಶ್ರೀಮಂತ ಸಂಸ್ಥೆಗಳಲ್ಲಿ ಒಂದಾದ ಟಿ-ಸೀರೀಸ್ನ ಚೇರ್ಮನ್ ಆಗಿದ್ದಾರೆ. ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಭಾರತದ ಅತಿ ಹೆಚ್ಚು ಬಜೆಟ್ನ ಸಿನಿಮಾ ಆಗಲಿದೆ.