Don't Miss!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾವಣ'ನ ಪಾತ್ರದಲ್ಲಿ ಖ್ಯಾತಿ ಗಳಿಸಿದ ನಟ ಅರವಿಂದ್ ತ್ರಿವೇದಿ ನಿಧನ
ಹಿಂದಿ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯಗಳಿಸಿಕೊಂಡಿದ್ದ ನಟ ಅರವಿಂದ್ ತ್ರಿವೇದಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.
82 ವರ್ಷದ ಅರವಿಂದ್ ತ್ರಿವೇದಿ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಬಹಳ ದಿನಗಳಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕಷ್ಟಪಡುತ್ತಿದ್ದರು. ಇದೇ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಅವರ ಅಂತಿಮ ಸಂಸ್ಕಾರವನ್ನು ಬುಧವಾರ ಬೆಳಗ್ಗೆ ಮುಂಬೈನಲ್ಲಿ ನಡೆಯಲಿದೆ.
ಖ್ಯಾತ ನಟ ಮನೋಜ್ ಬಾಜಪೇಯಿ ತಂದೆ ನಿಧನ
ಅರವಿಂದ್ ತ್ರಿವೇದಿ ಅವರ ಸಾವಿನ ಸುದ್ದಿ ತಿಳಿದ ನಂತರ ರಾಮಾಯಣ ಧಾರಾವಾಹಿಯಲ್ಲಿ ಸಹನಟರಾಗಿ ಅಭಿನಯಿಸುತ್ತಿದ್ದ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಸುನಿಲ್ ಲಾಹೀರ್ (ಲಕ್ಷ್ಮಣ), ದೀಪಿಕಾ ಚಿಖ್ಲಿಯಾ (ಸೀತಾ), ಅರುಣ್ ಗೋವಿಲ್ (ರಾಮ್) ಸೇರಿದಂತೆ ಇತರರು ಬೇಸರ ವ್ಯಕ್ತಪಡಿಸಿದರು.
ರಮಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿಯಲ್ಲಿ ಅರವಿಂದ್ ತ್ರಿವೇದಿ ರಾವಣನ ಪಾತ್ರ ಮಾಡಿದ್ದರು. ಪೌರಾಣಿಕ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಅರವಿಂದ್ ತ್ರಿವೇದಿ ಅಂದ್ರೆ ರಾವಣ ಎಂದೇ ಗುರುತಿಸುತ್ತಿದ್ದರು. ಅಷ್ಟರ ಮಟ್ಟಿಗೆ ಈ ಪಾತ್ರ ಅವರಿಗೆ ಯಶಸ್ಸು ತಂದುಕೊಟ್ಟಿತ್ತು. ಗುಜರಾತಿ ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಅರವಿಂದ್ ತ್ರಿವೇದಿ ಹಿಂದೆಯೊಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. 1991ರ ಲೋಕಸಭೆ ಚುನಾವಣೆಯಲ್ಲಿ ಸಬರಕಂಠ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಕೇವಲ ರಾಮಾಯಣ ಮಾತ್ರವಲ್ಲ, ವಿಕ್ರಮ್ ಔರ್ ಬೇತಾಳ್ ಧಾರಾವಾಹಿಯಲ್ಲೂ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಹಿಂದಿ ಮತ್ತು ಗುಜರಾತಿ ಸೇರಿದಂತೆ 300 ಚಲನಚಿತ್ರಗಳಲ್ಲಿ ಸಾಮಾಜಿಕ ಮತ್ತು ಪೌರಾಣಿಕ ಪಾತ್ರಗಳ ಮೂಲಕ ಅರವಿಂದ್ ತ್ರಿವೇದಿ ಹೆಚ್ಚು ಗಮನ ಸೆಳೆದಿದ್ದರು.
8 ನವೆಂಬರ್ 1938ರಲ್ಲಿ ಜನಿಸಿದ ಅರವಿಂದ್ ತ್ರಿವೇದಿ ಗುಜರಾತಿ ಸಿನಿಮಾ ಇಂಡಸ್ಟ್ರಿಯಲ್ಲಿ ಸುಮಾರು 40 ವರ್ಷದಿಂದ ತೊಡಗಿಕೊಂಡಿದ್ದರು. ಇವರ ಸಹೋದರ ಉಪೇಂದ್ರ ತ್ರಿವೇದಿ ಸಹ ನಟ ಮತ್ತು ರಂಗಭೂಮಿ ಕಲಾವಿದ. ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣ್, ವಿಕ್ರಮ್ ಔರ್ ಬೇತಾಳ್, ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ' ಅಂತಹ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
2002ರಲ್ಲಿ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತ್ರಿವೇದಿ ಅವರ ನಟನೆಗಾಗಿ ಏಳು ಬಾರಿ ಗುಜರಾತ್ ಸರ್ಕಾರ ನೀಡುವ ಅತ್ಯುನ್ನತ ಸಿನಿಮಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮನೋಜ್
ಬಾಜಪೇಯಿ
ತಂದೆ
ನಿಧನ
ಇತ್ತೀಚಿಗಷ್ಟೆ
ನಟ
ಮನೋಜ್
ಬಾಜಪೇಯಿ
ಅವರ
ತಂದೆ
ಆರ್ಕೆ
ಬಾಜಪೇಯಿ
ಅಕ್ಟೋಬರ್
3
ಬೆಳಗ್ಗೆ
ನಿಧನರಾದರು.
83
ವರ್ಷದ
ಆರ್ಕೆ
ಬಾಜಪೇಯಿ
ಅವರ
ಆರೋಗ್ಯ
ಕಳೆದ
ಹಲವು
ದಿನಗಳಿಂದಲೂ
ಹದಗೆಟ್ಟಿತ್ತು.
ಆಸ್ಪತ್ರೆ
ಸೇರಿ
ಚಿಕಿತ್ಸೆ
ಪಡೆಯುತ್ತಿದ್ದರು.
ಅಂತಿಮವಾಗಿ
ಚಿಕಿತ್ಸೆಗೆ
ಸ್ಪಂದಿಸದೆ
ಕೊನೆಯುಸಿರೆಳೆದರು.