Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದು ಕಾರ್ಯಕರ್ತ ಹರ್ಷ ಪರ ದನಿ ಎತ್ತಿದ ಬಾಲಿವುಡ್ ಬೆಡಗಿ
ಶಿವಮೊಗ್ಗದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷ ಬರ್ಭರ ಕೊಲೆಯ ವಿಚಾರ ದೇಶದಾದ್ಯಂತ ಸದ್ದಾಗುತ್ತಿದೆ. ಕೋಮು ದ್ವೇಷದ ಈ ಕೊಲೆಯನ್ನು ಹಲವರು ಖಂಡಿಸಿದ್ದಾರೆ.
ಕೆಲವು ಬಾಲಿವುಡ್ ನಟ-ನಟಿಯರು ಸಹ ಕರ್ನಾಟಕದಲ್ಲಿ ನಡೆದ ಈ ಹೇಯ ಕೃತ್ಯವನ್ನು ಖಂಡಿಸಿದ್ದಾರೆ. ಜನಪ್ರಿಯ ನಟಿ ರವೀನಾ ಟಂಡನ್ ಸಹ ಹರ್ಷ ಕೊಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಹರ್ಷಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.
'ಕೆಜಿಎಫ್ 2' ಸಿನಿಮಾದಲ್ಲಿಯೂ ನಟಿಸಿರುವ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದು, ಹರ್ಷ ಕೊಲೆಯ ಬಗ್ಗೆ 'ಜಸ್ಟಿಸ್ ಟು ಹರ್ಷ' (ಹರ್ಷಗೆ ನ್ಯಾಯ ದೊರಕಲಿ) ಎಂದು ಸರಳವಾಗಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಿರ್ಮಾಪಕ ಮನಿಶ್ ಮುಂದ್ರಾ ಸಹ ಶಿವಮೊಗ್ಗದಲ್ಲಿ ನಡೆದಿರುವ ಈ ಅಮಾನುಷ ಘಟನೆಯನ್ನು ಖಂಡಿಸಿದ್ದಾರೆ. ''ಮತ್ತೊಂದು ಗುಂಪು ಹತ್ಯೆ ನಡೆದಿದೆ. ನಾವು 'ಜಸ್ಟಿಸ್ ಫಾರ್ ಹರ್ಷ' ಎಂದು ಟ್ರೆಂಡ್ ಮಾಡಿ ಮಲಗಿ ಬಿಡುತ್ತೇವೆ. ಮತ್ತೊಂದು ಗುಂಪು ಹತ್ಯೆ ನಡೆದಾಗ ಮತ್ತೆ ಎಚ್ಚರವಾಗಿ ಮತ್ತೊಂದು ಪೋಸ್ಟ್ ಹಾಕುತ್ತೇವೆ ಅಷ್ಟೆ. ಎಚ್ಚರಗೊಳ್ಳುವ ಸಮಯ ಬಂದಿದೆ'' ಎಂದು ಹೇಳಿದ್ದಾರೆ.
28 ವರ್ಷ ವಯಸ್ಸಿನ ಹರ್ಷ, ಭಜರಂಗದಳ ಕಾರ್ಯಕರ್ತನಾಗಿದ್ದು ಆತನನ್ನು ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಎನ್.ಟಿ ರಸ್ತೆ ಕಾಮತ್ ಪೆಟ್ರೋಲ್ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್ ನ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಹರ್ಷ ಕೊಲೆ ಶಿವಮೊಗ್ಗದಲ್ಲಿ ಉದ್ರೇಕದ ವಾತಾವರಣ ನಿರ್ಮಾಣ ಮಾಡಿದ್ದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆ ಹರ್ಷ ಪಾರ್ಥಿವ ಶರೀರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಖಾಸಿಫ್, 30 ವರ್ಷ, ಬುದ್ಧಾನಗರ, ಶಿವಮೊಗ್ಗ ಟೌನ್ ಮತ್ತುಸೈಯ್ಯದ್ ನಧೀಂ, 20 ವರ್ಷ, ಜೆಪಿ ನಗರ, ಶಿವಮೊಗ್ಗ ಟೌನ್ ಇವರುಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.