Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
18 ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾದ ರಿಯಲ್ ಹೀರೋ ಸೋನು ಸೂದ್
ರಿಯಲ್ ಹೀರೋ ಸೋನು ಸೂದ್ ಮತ್ತೊಂದು ಮಹತ್ತರ ಕೆಲಸಕ್ಕೆ ಮುಂದಾಗಿದ್ದಾರೆ. ದೇಶದ ವಿವಿದ ಭಾಗಗಳಲ್ಲಿ 18 ಆಮ್ಲಜನಕ ಉತ್ಪಾದನ ಘಟಕ ಸ್ಥಾಪಿಸುವುದಾಗಿ ಹೇಳಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸೋಂಕಿತರ ನೆರವಿಗೆ ನಿಂತಿರುವ ಸೋನು ಸೂದ್ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಆಸ್ಪತ್ರೆ, ಬೆಡ್, ಚಿಕಿತ್ಸೆ, ಆಕ್ಸಿಜನ್ ಸಹಾಯ ಮಾಡುತ್ತಿರುವ ಸೋನು ಸೂದ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, 18 ಆಮ್ಲಜನಕ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಕೊರೊನಾ ಲಾಕ್ಡೌನ್ನಿಂದ ಪ್ರಾರಂಭವಾದ ಸೋನು ಸೂದ್ ಮಾನವೀಯ ಕೆಲಸ ಮುಂದುವರೆದಿದ್ದು, ಇಂದು ದೊಡ್ಡ ಮಟ್ಟದಲ್ಲಿ ದೇಶದ ಮೂಲೆ ಮೂಲೆ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಮುಂದೆ ಓದಿ..
ರಾಜಕೀಯಕ್ಕೆ ಸೋನು ಸೂದ್? ಭವಿಷ್ಯದ ಬಗ್ಗೆ ರಿಯಲ್ ಹೀರೋ ಮಾತು
ದೇಶದ ವಿವಿಧ ಕಡೆ ಆಕ್ಸಿಜನ್ ಘಟಕ ಸ್ಥಾಪನೆ
ಕೊರೊನಾ ಎರಡನೇ ಅಲೆ ಹೆಚ್ಚಾದ ಸಮಯದಲ್ಲಿ ಉಂಟಾದ ಆಕ್ಸಿಜನ್ ಸಮಸ್ಯೆ ಹೋಗಲಾಡಿಸಲು ಸೋನು ಸೂದ್ ಹರಸಾಹಸ ಪಡುತ್ತಿದ್ದಾರೆ. ದೇಶಕ್ಕೆ ಆಕ್ಸಿಜನ್ ಅವಶ್ಯಕತೆ ತುಂಬಾ ಇದೆ ಎಂದು ತಿಳಿದಿರುವ ರಿಯಲ್ ಹೀರೋ ಇದೀಗ ದೇಶದ ವಿವಿಧ ಕಡೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ.
18 ಆಕ್ಸಿಜನ್ ಸ್ಥಾವರ ಸ್ಥಾಪನೆ ಸಿದ್ಧತೆ
ದೇಶದ ವಿವಿಧ ರಾಜ್ಯಗಳಲ್ಲಿ 18 ಆಕ್ಸಿಜನ್ ಸ್ಥಾವರಗಳನ್ನು ಸ್ಥಾಪಿಸುತ್ತಿದ್ದಾರೆ. ಈಗಾಗಲೇ ಆಂಧ್ರ ಪ್ರದೇಶದ ಕರ್ನೂಲ್ ಮತ್ತು ನಲ್ಲೂರು ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ಈಗಾಗಲೇ ಆಕ್ಸಿಜಕ್ ಘಟಕ ಕಾರ್ಯ ಪ್ರಾರಂಭವಾಗಿದೆ. ಶೀಘ್ರದಲ್ಲೇ ಉಳಿದ ಕಡೆ, ತಮಿಳುನಾಡು, ಕರ್ನಾಟಕ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಬಿಹಾರ್, ಮಹಾರಾಷ್ಟ್ರ ಉತ್ತರ ಪ್ರದೇಶ ಸೇರಿದಂತೆ ಇನ್ನೂ ಅನೇಕ ಕಡೆ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ.
ಸಾಧ್ಯವಾದಷ್ಟು ಕಡೆ ಆಕ್ಸಿಜನ್ ಘಟಕ ಸ್ಥಾಪಿಸುತ್ತಿದ್ದೇವೆ
ಈ ಬಗ್ಗೆ ಮಾತನಾಡಿರುವ ಸೋನು ಸೂದ್, 'ಕಳೆದ ಕೆಲವು ತಿಂಗಳುಗಳಲ್ಲಿ ನಾವೆಲ್ಲರೂ ಎದುರಿಸಿದ ದೊಡ್ಡ ಸಮಸ್ಯೆ ಆಮ್ಲಜನಕ ಮತ್ತು ಅದರ ಲಭ್ಯತೆ. ಆಮ್ಲಜನಕ ಸಮಸ್ಯೆ ನಿರ್ಮೂಲನೆ ಮಾಡಲು ಏನು ಮಾಡಬೇಕೆಂದು ನಮ್ಮ ತಂಡ ಈಗಾಗಲೇ ಪ್ಲಾನ್ ಮಾಡಿದ್ದು, ಸಾಧ್ಯವಾದಷ್ಟು ಕಡೆ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ನಿರ್ಧರಿಸಿದೆವು' ಎಂದಿದ್ದಾರೆ.
ಆಮ್ಲಜನಕ ಕೊರತೆಯಿಂದ ಯಾರು ಸಾಯಬಾರದು
'ವಿಶೇಷವಾಗಿ ಈ ಆಕ್ಸಿಜನ್ ಸ್ಥಾವರಗಳನ್ನು ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಆಮ್ಲಜನಕ ಸ್ಥಾವರ ಸ್ಥಾಪನೆ ಮಾಡುವ ಉದ್ದೇಶ ದೇಶದಲ್ಲಿ ಆಮ್ಲಜನಕದಂತ ಮೂಲಭೂತ ಅವಶ್ಯಕತೆಯ ಕೊರತೆಯಿಂದ ಒಬ್ಬ ವ್ಯಕ್ತಿಯ ಸಾಯಬಾರದು ಎನ್ನುವುದು' ಎಂದು ಸೋನು ಸೂದ್ ಹೇಳಿದ್ದಾರೆ.
Recommended Video
|
3ನೇ ಅಲೆ ಬಗ್ಗೆ ಹೇಳಿದ್ದೇನು?
ಇನ್ನೂ 3ನೇ ಅಲೆ ಬಗ್ಗೆ ಮಾತನಾಡಿದ ಸೋನು ಸೂದ್, ಇದು ಆಮ್ಲಜನಕ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುತ್ತಿದೆ. ಈ ಆಕ್ಸಿಜನ್ ಘಟಕಗಳು ಅನೇಕ ವರ್ಷಗಳು ಆಕ್ಸಿಜನ್ ನೀಡುತ್ತದೆ. ಯಾಕೆ 3ನೇ ಮತ್ತು 4ನೇ ಅಲೆ ಕಾಯಬೇಕು. ಹಳ್ಳಿಗಳಿಗೂ ಆಕ್ಸಿಜನ್ ಒದಗಿಸುತ್ತದೆ' ಎಂದು ಸೋನು ಸೂದ್ ಹೇಳಿದ್ದಾರೆ. ಮುಂದಿನ ತಿಂಗಳಿಂದಲೇ ಈ ಸ್ಥಾವರಗಳು ಕಾರ್ಯನಿರ್ವಹಿಸಲಿವೆ ಎಂದು ಸೋನು ಸೂದ್ ಹೇಳಿದ್ದಾರೆ.