Don't Miss!
- News Siddaramaiah: ಸಿಎಂ ಸಿದ್ದರಾಮಯ್ಯ ಕೊರಳಿಗೆ ಉಚಿತ ಬಸ್ ಟಿಕೆಟ್ಗಳ ಹಾರ ಹಾಕಿದ ವಿದ್ಯಾರ್ಥಿನಿ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Finance ಮುಂಬೈನ ಅಲಿಬಾಗ್ನಲ್ಲಿ 10,000 ಚದರ ಅಡಿ ಜಾಗ ಖರೀದಿಸಿದ ಅಮಿತಾಭ್ ಬಚ್ಚನ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಧಿ ಹಿಟ್ಟು, ಹಣ ಮತ್ತು ಆಮೀರ್ ಖಾನ್: ಹಬ್ಬಿರುವ ವದಂತಿ ಬಗ್ಗೆ ಪರ್ಫೆಕ್ಷನಿಸ್ಟ್ ಹೇಳಿದ್ದೇನು?
ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಬಡವರಿಗೆ ಸಹಾಯ ಮಾಡುವ ವಿಚಾರವಾಗಿ ವದಂತಿಯೊಂದು ಹರಿದಾಡುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಊಟಕ್ಕೂ ಪರದಾಡುತ್ತಿರುವ ಬಡವರಿಗೆ ಆಮೀರ್ ಖಾನ್ ನೆರವು ನೀಡುತ್ತಿದ್ದಾರೆ. ಗೋಧಿ ಹಿಟ್ಟಿನ ಬ್ಯಾಗ್ ಗಳನ್ನು ಟ್ರಕ್ ಗಳ ಮೂಲಕ ಕಳುಹಿಸಿಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ಹಿಟ್ಟಿನ ಚೀಲಗಳನ್ನು ಮಾತ್ರವಲ್ಲದೆ ಅದರೊಳಗೆ 15,000 ರೂಪಾಯಿ ಇಟ್ಟು ಕಳುಹಿಸಿಕೊಡುತ್ತಿದ್ದಾರೆ. ಬಡವರಿಗೆ ನೆರವಾಗಲು ಆಮೀರ್ ಖಾನ್ ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ. ಈ ಸುದ್ದಿ ಹೇಗೆ ಬಹಿದಾಡುತ್ತಿದೆ, ವಿಡಿಯೋ ಮಾಡಿದ್ದು ಯಾರು ಎನ್ನುವ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ನಟ ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...
ಗೋಧಿ ಹಿಟ್ಟು ಮತ್ತು ಹಣದ ವದಂತಿ
"ಗೋಧಿ ಹಿಟ್ಟಿನ ಚೀಲ ತುಂಬಿದ ಟ್ರಕ್ ಅನ್ನು ಆಮೀರ್ ಖಾನ್ ದೆಹಲಿಗೆ ಕಳುಹಿಸಿದ್ದಾರೆ. ಟ್ರಕ್ ನಲ್ಲಿ 1 ಕಿಲೋ ಗೋಧಿ ಹಿಟ್ಟಿನ ಬ್ಯಾಗ್ ಇದೆ. ಆ ನಂತರ ಅದನ್ನು ತೆರೆದು ನೋಡಿದಾಗ ಹಿಟ್ಟಿನ ಜೊತೆಗೆ 15,000 ಹಣ ಇಟ್ಟುಕಳುಹಿಸಿದ್ದಾರೆ. ಬಡವರಿಗೆ, ಹಣದ ಅವಶ್ಯಕತೆ ಇರುವವರಿಗೆ ಉಪಯೋಗವಾಗಲಿ ಎಂದು ಆಮೀರ್ ಖಾನ್ ಹೀಗೆ ಮಾಡಿದ್ದಾರೆ" ಎಂದು ವಿಡಿಯೋ ಮಾಡಿ ಹರಿಬಿಡಲಾಗಿದೆ.
ಗೋಧಿ ಹಿಟ್ಟಿನ ಪಾಕೆಟ್ನಲ್ಲಿ 15,000 ಹಣ ಇಟ್ಟು ಕೊಟ್ಟರೇ ಅಮೀರ್ ಖಾನ್? ಸತ್ಯವೇನು?
ವಿಡಿಯೋ ಡಿಲೀಟ್ ಆಗಿದೆ
ಜನರು ಮೊದಲು ಹಿಟ್ಟಿನ ಬ್ಯಾಗ್ ತೆಗೆದುಕೊಳ್ಳುಲು ನಿರಾಕರಿಸಿದರು. 1 ಕಿಲೋ ಹಿಟ್ಟು ಕುಟುಂಬ ನಿರ್ವಹಣೆಗೆ ಸಾಕಾಗಲ್ಲ ಎಂದು ಮೊದಲ ಹಿಟ್ಟಿನ ಚೀಲ ತೆಗೆದುಕೊಂಡಿಲ್ಲ. ಆ ನಂತರ ಹಣವಿರುವ ವಿಚಾರ ಗೊತ್ತಾಗಿ ಎಲ್ಲರೂ ಹಿಟ್ಟಿನ ಬ್ಯಾಗ್ ತೆಗೆದುಕೊಂಡರು ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೀಗ ಈ ವಿಡಿಯೋ ಡಿಲೀಟ್ ಆಗಿದೆ.
ಸ್ಪಷ್ಟನೆ ನೀಡಿದ ಆಮೀರ್ ಖಾನ್
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಆಮೀರ್ ಖಾನ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿರುವ ಆಮೀರ್ ಇದರಲ್ಲಿ ಯಾವುದೆ ಸತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆಮೀರ್ ಖಾನು "ನಾನು ಗೋಧಿ ಚೀಲಗಳಲ್ಲಿ ಹಣವನ್ನು ಹಾಕುವ ವ್ಯಕ್ತಿಯಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ. ರಾಬಿನ್ ಹುಡ್ ತನ್ನನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಸುರಕ್ಷಿತವಾಗಿರಿ" ಎಂದು ಹೇಳಿದ್ದಾರೆ.
ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಆಮೀರ್
ಆಮೀನ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹಾಲಿವುಡ್ ಸಿನಿಮಾದ ರಿಮೇಕ್ ಇದಾಗಿದ್ದು, ಕರೀನಾ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ.