Don't Miss!
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಧಿ ಹಿಟ್ಟು, ಹಣ ಮತ್ತು ಆಮೀರ್ ಖಾನ್: ಹಬ್ಬಿರುವ ವದಂತಿ ಬಗ್ಗೆ ಪರ್ಫೆಕ್ಷನಿಸ್ಟ್ ಹೇಳಿದ್ದೇನು?
ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಬಡವರಿಗೆ ಸಹಾಯ ಮಾಡುವ ವಿಚಾರವಾಗಿ ವದಂತಿಯೊಂದು ಹರಿದಾಡುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಊಟಕ್ಕೂ ಪರದಾಡುತ್ತಿರುವ ಬಡವರಿಗೆ ಆಮೀರ್ ಖಾನ್ ನೆರವು ನೀಡುತ್ತಿದ್ದಾರೆ. ಗೋಧಿ ಹಿಟ್ಟಿನ ಬ್ಯಾಗ್ ಗಳನ್ನು ಟ್ರಕ್ ಗಳ ಮೂಲಕ ಕಳುಹಿಸಿಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ಹಿಟ್ಟಿನ ಚೀಲಗಳನ್ನು ಮಾತ್ರವಲ್ಲದೆ ಅದರೊಳಗೆ 15,000 ರೂಪಾಯಿ ಇಟ್ಟು ಕಳುಹಿಸಿಕೊಡುತ್ತಿದ್ದಾರೆ. ಬಡವರಿಗೆ ನೆರವಾಗಲು ಆಮೀರ್ ಖಾನ್ ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ. ಈ ಸುದ್ದಿ ಹೇಗೆ ಬಹಿದಾಡುತ್ತಿದೆ, ವಿಡಿಯೋ ಮಾಡಿದ್ದು ಯಾರು ಎನ್ನುವ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ನಟ ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...
ಗೋಧಿ ಹಿಟ್ಟು ಮತ್ತು ಹಣದ ವದಂತಿ
"ಗೋಧಿ ಹಿಟ್ಟಿನ ಚೀಲ ತುಂಬಿದ ಟ್ರಕ್ ಅನ್ನು ಆಮೀರ್ ಖಾನ್ ದೆಹಲಿಗೆ ಕಳುಹಿಸಿದ್ದಾರೆ. ಟ್ರಕ್ ನಲ್ಲಿ 1 ಕಿಲೋ ಗೋಧಿ ಹಿಟ್ಟಿನ ಬ್ಯಾಗ್ ಇದೆ. ಆ ನಂತರ ಅದನ್ನು ತೆರೆದು ನೋಡಿದಾಗ ಹಿಟ್ಟಿನ ಜೊತೆಗೆ 15,000 ಹಣ ಇಟ್ಟುಕಳುಹಿಸಿದ್ದಾರೆ. ಬಡವರಿಗೆ, ಹಣದ ಅವಶ್ಯಕತೆ ಇರುವವರಿಗೆ ಉಪಯೋಗವಾಗಲಿ ಎಂದು ಆಮೀರ್ ಖಾನ್ ಹೀಗೆ ಮಾಡಿದ್ದಾರೆ" ಎಂದು ವಿಡಿಯೋ ಮಾಡಿ ಹರಿಬಿಡಲಾಗಿದೆ.
ಗೋಧಿ ಹಿಟ್ಟಿನ ಪಾಕೆಟ್ನಲ್ಲಿ 15,000 ಹಣ ಇಟ್ಟು ಕೊಟ್ಟರೇ ಅಮೀರ್ ಖಾನ್? ಸತ್ಯವೇನು?
ವಿಡಿಯೋ ಡಿಲೀಟ್ ಆಗಿದೆ
ಜನರು ಮೊದಲು ಹಿಟ್ಟಿನ ಬ್ಯಾಗ್ ತೆಗೆದುಕೊಳ್ಳುಲು ನಿರಾಕರಿಸಿದರು. 1 ಕಿಲೋ ಹಿಟ್ಟು ಕುಟುಂಬ ನಿರ್ವಹಣೆಗೆ ಸಾಕಾಗಲ್ಲ ಎಂದು ಮೊದಲ ಹಿಟ್ಟಿನ ಚೀಲ ತೆಗೆದುಕೊಂಡಿಲ್ಲ. ಆ ನಂತರ ಹಣವಿರುವ ವಿಚಾರ ಗೊತ್ತಾಗಿ ಎಲ್ಲರೂ ಹಿಟ್ಟಿನ ಬ್ಯಾಗ್ ತೆಗೆದುಕೊಂಡರು ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೀಗ ಈ ವಿಡಿಯೋ ಡಿಲೀಟ್ ಆಗಿದೆ.
ಸ್ಪಷ್ಟನೆ ನೀಡಿದ ಆಮೀರ್ ಖಾನ್
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಆಮೀರ್ ಖಾನ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿರುವ ಆಮೀರ್ ಇದರಲ್ಲಿ ಯಾವುದೆ ಸತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆಮೀರ್ ಖಾನು "ನಾನು ಗೋಧಿ ಚೀಲಗಳಲ್ಲಿ ಹಣವನ್ನು ಹಾಕುವ ವ್ಯಕ್ತಿಯಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ. ರಾಬಿನ್ ಹುಡ್ ತನ್ನನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಸುರಕ್ಷಿತವಾಗಿರಿ" ಎಂದು ಹೇಳಿದ್ದಾರೆ.
ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಆಮೀರ್
ಆಮೀನ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹಾಲಿವುಡ್ ಸಿನಿಮಾದ ರಿಮೇಕ್ ಇದಾಗಿದ್ದು, ಕರೀನಾ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ.