Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರೈತರನ್ನು ಗೌರವಿಸುತ್ತೇನೆ' ಎಂದು ಹೇಳಿದ್ದಕ್ಕೂ ಟ್ರೋಲ್ ಆದ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್ ಬಾಲಿವುಡ್ನ ಖ್ಯಾತ ಮತ್ತು ಪ್ರಭಾವಿಗಳಲ್ಲಿ ಒಬ್ಬರು. ಸತತ ಬಾಕ್ಸಾಫೀಸ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಲ್ಮಾನ್ ಖಾನ್ ಕೂಡ ತಪ್ಪು ಎಸಗಿದ್ದಾರೆ. ಸುಶಾಂತ್ಗೆ ಬರಬೇಕಿದ್ದ ಅನೇಕ ಅವಕಾಶಗಳನ್ನು ಸಲ್ಮಾನ್ ತಪ್ಪಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
Recommended Video
ಈ ಆರೋಪಗಳಿಗೆ ಸಲ್ಮಾನ್ ಖಾನ್ ಇರುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ತಮ್ಮ ಫಾರ್ಮ್ ಹೌಸ್ನಲ್ಲಿ ಅಡ್ಡಾಡುತ್ತಾ ಕೃಷಿ ಮತ್ತು ರೈತರ ಬಗ್ಗೆ ಪೋಸ್ಟ್ಗಳನ್ನು ಹಾಕಲು ಆರಂಭಿಸಿದ್ದಾರೆ. ಮೂರು ದಿನಗಳ ಹಿಂದೆ ತಮ್ಮ ಫಾರ್ಮ್ ಹೌಸ್ನಲ್ಲಿ ನಡೆದುಕೊಂಡು ಹೋಗುವ ಫೋಟೊ ಹಾಕಿದ್ದ ಅವರು, ಮಂಗಳವಾರ ಮೈಕೈಗೆ ಕೆಸರು ಮೆತ್ತಿಕೊಂಡ ಫೋಟೊ ಹಂಚಿಕೊಂಡಿದ್ದಾರೆ. ಇದನ್ನು ಜನರು ಮನಬಂದಂತೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಸುಶಾಂತ್ ಸಿಂಗ್ ಸಾವಿಗೆ ಸಲ್ಮಾನ್ ಖಾನ್ ಪರೋಕ್ಷ ಕಾರಣ?: ಪ್ರಕರಣಕ್ಕೆ ಟ್ವಿಸ್ಟ್
ತಿನ್ನುವವರ ಹೆಸರು...
ಕೆಲವು ದಿನಗಳ ಹಿಂದೆ ತಮ್ಮ ಜಮೀನಿನಲ್ಲಿ ಕೆಲವು ಗಿಡಗಳನ್ನು ಹಿಡಿದುಕೊಂಡಿದ್ದ ಸಲ್ಮಾನ್, ಪ್ರತಿ ಅಗುಳಿನಲ್ಲಿಯೂ ಅದನ್ನು ತಿನ್ನುವವರ ಹೆಸರು ಬರೆದಿರುತ್ತದೆ ಎಂಬ ನಾಣ್ಣುಡಿಯನ್ನು ಬರೆದಿದ್ದರು. ಜತೆಗೆ ಜೈ ಜವಾನ್! ಜೈ ಕಿಸಾನ್ ಎಂಬ ಘೋಷ ವಾಕ್ಯವನ್ನೂ ಬರೆದಿದ್ದರು.
ತಿನ್ನುವವರ ಹೆಸರು...
ಕೆಲವು ದಿನಗಳ ಹಿಂದೆ ತಮ್ಮ ಜಮೀನಿನಲ್ಲಿ ಕೆಲವು ಗಿಡಗಳನ್ನು ಹಿಡಿದುಕೊಂಡಿದ್ದ ಸಲ್ಮಾನ್, ಪ್ರತಿ ಅಗುಳಿನಲ್ಲಿಯೂ ಅದನ್ನು ತಿನ್ನುವವರ ಹೆಸರು ಬರೆದಿರುತ್ತದೆ ಎಂಬ ನಾಣ್ಣುಡಿಯನ್ನು ಬರೆದಿದ್ದರು. ಜತೆಗೆ ಜೈ ಜವಾನ್! ಜೈ ಕಿಸಾನ್ ಎಂಬ ಘೋಷ ವಾಕ್ಯವನ್ನೂ ಬರೆದಿದ್ದರು.
ರೈತರನ್ನು ಗೌರವಿಸುತ್ತೇನೆ
ಮಂಗಳವಾರ ಮತ್ತೊಂದು ಪೋಸ್ಟ್ ಹಾಕಿರುವ ಅವರು, ಮೈಕೈ ತುಂಬಾ ಕೆಸರು ಬಳಿದುಕೊಂಡಿದ್ದಾರೆ. ಕೆಲಸ ಮಾಡಿ ಸುಸ್ತಾಗಿ ಕುಳಿತವರಂತೆ ಪೋಸ್ ನೀಡಿರುವ ಅವರು ಎಲ್ಲಾ ರೈತರನ್ನೂ ಗೌರವಿಸುತ್ತೇನೆ ಎಂದು ಬರೆದಿದ್ದಾರೆ. ಇದು ವಿಪರೀತ ಟ್ರೋಲ್ಗೆ ಒಳಗಾಗಿದೆ.
ರೈತರಾಗಿಸುವುದಿಲ್ಲ
ನಿಮ್ಮ ದೇಹದ ಮೇಲೆ ಸ್ವಲ್ಪ ಮಣ್ಣು ಎಸೆದುಕೊಳ್ಳುವುದು ನಿಮ್ಮನ್ನು ರೈತನನ್ನಾಗಿ ಮಾಡುವುದಿಲ್ಲ. ಇದು ತೀರಾ ಕಳಪೆ ಮತ್ತು ತಾನು ದೊಡ್ಡ ಮನುಷ್ಯ ಎಂಬ ದರ್ಪ ಪ್ರದರ್ಶಿಸುವ ಮನೋಭಾವವನ್ನು ಸೂಚಿಸುತ್ತದೆ ಎಂದು ಕೆಲವರು ಟೀಕಿಸಿದ್ದಾರೆ.
ರೈತರಾಗಿಸುವುದಿಲ್ಲ
ನಿಮ್ಮ ದೇಹದ ಮೇಲೆ ಸ್ವಲ್ಪ ಮಣ್ಣು ಎಸೆದುಕೊಳ್ಳುವುದು ನಿಮ್ಮನ್ನು ರೈತನನ್ನಾಗಿ ಮಾಡುವುದಿಲ್ಲ. ಇದು ತೀರಾ ಕಳಪೆ ಮತ್ತು ತಾನು ದೊಡ್ಡ ಮನುಷ್ಯ ಎಂಬ ದರ್ಪ ಪ್ರದರ್ಶಿಸುವ ಮನೋಭಾವವನ್ನು ಸೂಚಿಸುತ್ತದೆ ಎಂದು ಕೆಲವರು ಟೀಕಿಸಿದ್ದಾರೆ.
ನಾಟಕ ಸಾಕು ಮಾಡಿ!
ಮಣ್ಣನ್ನು ನಿಮ್ಮ ಮುಖಕ್ಕೆ ಬಳಿದುಕೊಂಡಿದ್ದೀರಿ. ಆದರೆ ಕಾಲಿಗೆ ಹಚ್ಚಿಕೊಳ್ಳುವುದನ್ನು ಮರೆತಿದ್ದೀರಲ್ಲ? ಓವರ್ ಆಕ್ಟಿಂಗ್ ಮಾಡುವುದನ್ನು ನಿಲ್ಲಿಸಿ ಸಾಕು ಎಂದು ಅನೇಕರು, ಇದು ಸಲ್ಮಾನ್ ಖಾನ್ ತಾನು ಮಹಾನ್ ಮಾನವೀಯ ವ್ಯಕ್ತಿ ಎಂದು ತೋರಿಸಿಕೊಳ್ಳಲು ಮಾಡುತ್ತಿರುವ ನಾಟಕ ಎಂದು ಟೀಕಿಸಿದ್ದಾರೆ.
ನಾಟಕ ಸಾಕು ಮಾಡಿ!
ಮಣ್ಣನ್ನು ನಿಮ್ಮ ಮುಖಕ್ಕೆ ಬಳಿದುಕೊಂಡಿದ್ದೀರಿ. ಆದರೆ ಕಾಲಿಗೆ ಹಚ್ಚಿಕೊಳ್ಳುವುದನ್ನು ಮರೆತಿದ್ದೀರಲ್ಲ? ಓವರ್ ಆಕ್ಟಿಂಗ್ ಮಾಡುವುದನ್ನು ನಿಲ್ಲಿಸಿ ಸಾಕು ಎಂದು ಅನೇಕರು, ಇದು ಸಲ್ಮಾನ್ ಖಾನ್ ತಾನು ಮಹಾನ್ ಮಾನವೀಯ ವ್ಯಕ್ತಿ ಎಂದು ತೋರಿಸಿಕೊಳ್ಳಲು ಮಾಡುತ್ತಿರುವ ನಾಟಕ ಎಂದು ಟೀಕಿಸಿದ್ದಾರೆ.
ಫುಟ್ಪಾತ್ ಮೇಲಿರುವವರನ್ನೂ ಗೌರವಿಸಿ
ಫುಟ್ ಪಾತ್ ಮೇಲೆ ಮಲಗುವ ಜನರನ್ನೂ ಗೌರವಿಸಿ ಎಂದು ಕೆಲವರು ಸಲ್ಮಾನ್ ಖಾನ್ ಅವರ ಹಿಟ್ ಆಂಡ್ ರನ್ ಕೇಸ್ಅನ್ನು ನೆನಪಿಸಿದ್ದಾರೆ. ಅದರ ಜತೆಗೆ ಕೃಷ್ಣಮೃಗವನ್ನೂ ಗೌರವಿಸಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ.