Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯೋಧ್ಯೆ ತೀರ್ಪು: ಸಲ್ಮಾನ್ ಖಾನ್ ತಂದೆಯ ಈ ಯೋಚನೆಗೆ ಒಂದು ಸಲಾಂ.!
ಶತ-ಶತಮಾನಗಳ ವಿವಾದಕ್ಕೆ ಅಂತೂ ತೆರೆಬಿದ್ದಿದೆ. ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಆ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ. ಇನ್ನೂ ಅಯೋಧ್ಯೆಯಲ್ಲೇ ಮುಸ್ಲಿಮರಿಗೆ ಐದು ಎಕರೆ ಪರ್ಯಾಯ ಭೂಮಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪನ್ನು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಸ್ವಾಗತಿಸಿದ್ದಾರೆ. ಐಎಎನ್ಎಸ್ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿರುವ ಸಲೀಂ ಖಾನ್, ''ಮುಸ್ಲಿಮರಿಗೆ ಸಿಗುವ ಐದು ಎಕರೆ ಭೂಮಿಯಲ್ಲಿ ಶಾಲೆ ಅಥವಾ ಕಾಲೇಜು ನಿರ್ಮಿಸಿ'' ಎಂದಿದ್ದಾರೆ.
''ಇಸ್ಲಾಂ ಧರ್ಮದಲ್ಲಿ ಪ್ರೀತಿ ಮತ್ತು ಕ್ಷಮೆ ಎಂಬ ಎರಡು ಸದ್ಗುಣಗಳ ಕುರಿತು ಪ್ರವಾದಿಗಳು ಪ್ರತಿಪಾದಿಸಿದ್ದಾರೆ. ಮುಸ್ಲಿಮರು ಈ ಎರಡು ಸದ್ಗುಣಗಳಿಗೆ ಬದ್ಧರಾಗಬೇಕು. ಪ್ರೀತಿ ತೋರಿಸಿ ಮತ್ತು ಕ್ಷಮೆ ಮಾಡಿ'' ಎಂದು ತನ್ನೆಲ್ಲ ಮುಸ್ಲಿಂ ಬಾಂಧವರಿಗೆ ಸಲೀಂ ಖಾನ್ ಹೇಳಿದ್ದಾರೆ.
''ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿಜಕ್ಕೂ ಶ್ಲಾಘನೀಯ. ಶತಮಾನದ ಸಮಸ್ಯೆ ಬಗೆಹರಿದಿದೆ. ಈ ತೀರ್ಪನ್ನು ನಾನು ಒಪ್ಪುತ್ತೇನೆ. ಇದರ ಬಗ್ಗೆ ಇನ್ನೂ ಚರ್ಚೆ ಬೇಡ. ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಅದಕ್ಕೆ ಪರಿಹಾರ ಹುಡುಕಬೇಕು. ಮುಸ್ಲಿಮರಿಗೆ ಈಗ ಸಿಗುವ ಐದು ಎಕರೆ ಭೂಮಿಯಲ್ಲಿ ಶಾಲೆ ಅಥವಾ ಕಾಲೇಜು ನಿರ್ಮಿಸಿದರೆ ಒಳ್ಳೆಯದು. ನಾವು ಎಲ್ಲಿ ಬೇಕಾದರೂ ನಮಾಜ್ ಮಾಡಬಹುದು. ಆದರೆ ದೇಶದ ಸಮಸ್ಯೆಗಳು ಬಗೆಹರಿಯಬೇಕು ಅಂದ್ರೆ ಉತ್ತಮ ಶಾಲೆಗಳು ಬೇಕು'' ಎಂದಿದ್ದಾರೆ ಸಲೀಂ ಖಾನ್.
ಆ ಕಡೆ ಅಯೋಧ್ಯೆ ತೀರ್ಪು: ಈ ಕಡೆ ಧ್ರುವ ಸರ್ಜಾ ಟ್ವೀಟ್
''ಉತ್ತಮ ಶಿಕ್ಷಣ ಪಡೆದವರಿಂದ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ'' ಅಂತ ಸಲೀಂ ಖಾನ್ ಹೇಳಿದ್ದಾರೆ. ಸಲೀಂ ಖಾನ್ ರವರ ಈ ಯೋಚನೆಗೆ ಒಂದು ಸಲಾಂ ಹೇಳಲೇಬೇಕು ಅಲ್ಲವೇ.?!