Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೇಪಿಸ್ಟ್ ಗಳ ಮೇಲೆ ತಿರುಗಿಬಿದ್ದ ಸಲ್ಮಾನ್ ಖಾನ್
ದೇಶದ ರಾಜಧಾನಿ ನವದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಇಡೀ ದೇಶವೇ ಖಂಡಿಸುತ್ತಿದೆ. ಪಕ್ಷಭೇದ ಮರೆದ ರಾಜಕೀಯ ಮುಖಂಡರು ಸಿಡಿದು ನಿಂತಿದ್ದಾರೆ. ಈ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಕಿಡಿಕಾರಿದ್ದಾರೆ.
ಈ ರೀತಿಯ ಅತ್ಯಾಚಾರಗಳಿಗೆ ನಮ್ಮ ಸಿನಿಮಾಗಳಲ್ಲಿ ಬಿಂಬಿಸುವ ರೇಪ್ ಸೀನ್ ಗಳೇ ಕಾರಣ ಎಂಬ ಗಂಭೀರ ಆರೋಪವಿದೆ. ಸದ್ಯಕ್ಕೆ ಆ ವಿಷಯ ಪಕ್ಕಕ್ಕಿಡಿ. ಈಗ ನೇರವಾಗಿ ವಿಷಯಕ್ಕೆ ಬರುವುದಾದರೆ ನಮ್ಮ ಸಲ್ಮಾನ್ ಖಾನ್ ಅವರಂತೂ ರೇಪಿಸ್ಟ್ ಗಳನ್ನು ಮುಲಾಜಿಲ್ಲದೆ ಗಲ್ಲಿಗೇರಿಸಬೇಕು ಎಂದಿದ್ದಾರೆ.
ಈ ಸುದ್ದಿ ನನ್ನ ಕಿವಿಗೆ ಬಿದ್ದ ಕೂಡಲೆ ನನಗನ್ನಿಸಿದ್ದು ಇಂತವರನ್ನು ಸಾಯಿಸಬೇಕು. ಈ ರೀತಿಯ ಕೃತ್ಯವನ್ನು ಯಾಕೆ ಮಾಡ್ತಾರೋ. ಅವರಿಗೆ ಅಕ್ಕ ತಂಗಿ ಯಾರೂ ಇರಲ್ವಾ. ಒಂದು ವೇಳೆ ಅವರನ್ನು ಗಲ್ಲಿಗೇರಿಸಲು ಸಾಧ್ಯವಾಗಲ್ಲ ಎಂದರೆ ಜೀವಾವಧಿ ಶಿಕ್ಷೆಯನ್ನಾದರೂ ಕೊಡಬೇಕು.
ಜೈಲಲ್ಲಿ ಸುಮ್ಮನೆ ಇರಕ್ಕೆ ಬಿಡದೆ ಚೆನ್ನಾಗಿ ಬೆಂಡೆತ್ತುತ್ತಿರಬೇಕು. ಇದರಿಂದ ಬೇರೆಯವರು ರೇಪ್ ಮಾಡುವ ಸಾಹಸಕ್ಕೆ ಹೋಗೋದಿಲ್ಲ ಎಂದಿದ್ದಾರೆ. ತಮ್ಮ ಮುಂದಿನ ಚಿತ್ರ 'ದಬಾಂಗ್ 2' ಪ್ರಚಾರದಲ್ಲಿ ಮಾತನಾಡುತ್ತಿದ್ದ ಸಲ್ಮಾನ್ ಖಾನ್ ಅವರು ದೆಹಲಿ ಗ್ಯಾಂಗ್ ರೇಪ್ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ. (ಏಜೆನ್ಸೀಸ್)