Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಧು ಮೂಸೆವಾಲಾ ಕೊಂದವರ ಹಿಟ್ಲಿಸ್ಟ್ನಲ್ಲಿ ಸಲ್ಮಾನ್ ಖಾನ್
ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅನ್ನು ನಡು ರಸ್ತೆಯನ್ನು ಶೂಟ್ ಮಾಡಿ ಸಾಯಿಸಿದ ಹಂತಕನ ಹಿಟ್ ಲಿಸ್ಟ್ನಲ್ಲಿ ಸಲ್ಮಾನ್ ಖಾನ್ ಸಹ ಇದ್ದರು ಎಂದು ಪಂಜಾಬ್ನ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಇದೇ ವರ್ಷದ ಮೇ 29 ರಂದು ನಡೆದ ಸಿಧು ಮೂಸೆವಾಲಾ ಹತ್ಯೆಯ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯಾಕೋರರಲ್ಲಿ ಒಬ್ಬನಾದ ಕಪಿಲ್ ಪಂಡಿತ್ ಎಂಬಾತನನ್ನು ಬಂಧಿಸಿದ್ದು, ಹಿಟ್ ಲಿಸ್ಟ್ನಲ್ಲಿ ಸಿಧು ಮೂಸೆವಾಲಾ ಬಳಿಕ ಸಲ್ಮಾನ್ ಖಾನ್ ಇದ್ದುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸಚಿನ್ ಬಿಷ್ಣೋಯಿ, ಸಂತೋಶ್ ವಾದವ್ ಜೊತೆಗೆ ಸೇರಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಮುಂಬೈನಲ್ಲಿ ಸಲ್ಮಾನ್ ಖಾನ್ ಮನೆ ಕಚೇರಿ ಇನ್ನಿತರೆ ಕಡೆಗಳಲ್ಲಿ ಓಡಾಡಿದ್ದಾಗಿ ಸಹ ಕಪಿಲ್ ಪಂಡಿತ್ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಸಿಧು ಮೂಸೆವಾಲಾ ಪ್ರಕರಣದಲ್ಲಿ ಆರೋಪಿಗಳಾದ ಸಂತೋಶ್ ವಾದವ್ ಹಾಗೂ ಅಜ್ಮಲ್ಪುರ್ನಲ್ಲಿ ಬೇರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸಚಿನ್ ತಪ್ಪನ್ ಸಹ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಷಡ್ಯಂತ್ರದಲ್ಲಿ ಪಾಲುದಾರರು ಎಂದು ಬಂಧಿತ ಕಪಿಲ್ ಪಂಡಿತ್ ಹೇಳಿದ್ದಾನೆ.
ಸಲ್ಮಾನ್ ಖಾನ್ ಅನ್ನು ಕೊಲ್ಲಲು ಪಣತೊಟ್ಟಿರುವ ಲಾರೆನ್ಸ್ ಬೀಶ್ನೋಯಿ ಗ್ಯಾಂಗ್, ಸಂಪತ್ ನೆಹ್ರಾ ಹಾಗೂ ಗೋಲ್ಡಿ ಬ್ರಾರ್ ಕಡೆಯಿಂದ ಕಪಿಲ್ ಪಂಡಿತ್ ಹಾಗೂ ಇತರರನ್ನು ಸಂಪರ್ಕಿಸಿ, ಸಲ್ಮಾನ್ ಖಾನ್ ಅನ್ನು ಕೊಲ್ಲಲು ಸುಫಾರಿ ನೀಡಲಾಗಿತ್ತಂತೆ.
ಸಲ್ಮಾನ್ ಖಾನ್ ಗೆ ಸಿಧು ಮೂಸೆವಾಲಾ ಹತ್ಯೆ ಬಳಿಕ ಸಲ್ಮಾನ್ ಖಾನ್ಗೆ ಅದೇ ಗ್ಯಾಂಗ್ನಿಂದ ಕೊಲೆ ಬೆದರಿಕೆ ಬಂದಿದೆ. ಸಿಧು ಮೂಸೆವಾಲಾ ರೀತಿಯಲ್ಲಿಯೇ ನಿನ್ನನ್ನು ಕೊಲ್ಲುತ್ತೇವೆ ಎಂದು ಪತ್ರ ಬರೆದು ಆ ಪತ್ರ ಸಲ್ಮಾನ್ ಖಾನ್ರ ತಂದೆಯನ್ನು ತಲುಪುವಂತೆ ಹಂತಕರು ಮಾಡಿದ್ದಾರೆ. ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿರುವ ಹಿಂದೆ ಲಾರೆನ್ಸ್ ಬಿಷ್ಣೋಯಿ ಹಾಗೂ ಬ್ರಾರ್ ಸಹೋದರ ಕೈವಾಡವಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಹಲವು ಆಘಾತಕಾರಿ ಸಂಗತಿಗಳು ಗೊತ್ತಾಗಿವೆ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹಲವು ಬಾರಿ ವಿಫಲ ಯತ್ನಗಳು ನಡೆದಿರುವುದಾಗಿ, ಸಲ್ಮಾನ್ ಖಾನ್ ಅನ್ನು ಕೊಲ್ಲಲು ವಿದೇಶಿ, ಅತ್ಯಾಧುನಿಕ ಮಾದರಿ ಬಂದೂಕನ್ನು ಸಹ ಹಂತಕರು ಖರೀದಿಸಿರುವುದು ಬೆಳಕಿಗೆ ಬಂದಿದೆ.
ಸಲ್ಮಾನ್ ಖಾನ್ಗೆ ಬೆದರಿಕೆ ಬಂದ ಬಳಿಕ ಅವರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ಸಲ್ಮಾನ್ ಖಾನ್ ಸಹ ತಮ್ಮ ಭದ್ರತೆಗೆ ಪರವಾನಗಿ ಹೊಂದಿರುವ ಅತ್ಯಾಧುನಿಕ ಬಂದೂಕು ತೆಗೆದುಕೊಂಡಿದ್ದಾರೆ. ಬಹಿರಂಗ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದನ್ನು ಸಹ ಕಡಿಮೆ ಮಾಡಿದ್ದಾರೆ.
ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರು ಮಂದಿ ಪ್ರಮುಖ ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಆರನೇ ಮತ್ತು ಕೊನೆಯ ಶೂಟರ್ ದೀಪಕ್ ಮುಂಡಿಯನ್ನು ಪಂಜಾಬ್ ಪೊಲೀಸರು ಸೆಪ್ಟೆಂಬರ್ 10 ರಂದು ಬಂಧಿಸಿದ್ದಾರೆ.