Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಿಂಗ್ ವಿರುದ್ಧ ಮೀ ಟೂ ಆರೋಪ: ಪೊಲೀಸ್ ವಿಚಾರಣೆಯಲ್ಲಿ 'ದಿಲ್ ಬೇಚಾರ' ನಟಿ ಹೇಳಿದ್ದೇನು?
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೆ ಒಟ್ಟು 28 ಮಂದಿಯ ವಿಚಾರಣೆ ನಡೆದ ಮುಂಬೈ ಪೊಲೀಸರು, ಈಗ ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೇಚಾರ ಚಿತ್ರದ ನಾಯಕಿ ಸಂಜನಾ ಸಾಂಘಿ ಅವರನ್ನು ವಿಚಾರಣೆ ನಡೆಸಿದ್ದು, ಅವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
Recommended Video
ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು ಮೀ ಟೂ ಆರೋಪದ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. 2018ರಲ್ಲಿಯೆ ದಿಲ್ ಬೇಚಾರ ಸಿನಿಮಾ ಸೆಟ್ಟೇರಿದೆ. ಆಡಿಷನ್ ಮೂಲಕ ಸಿನಿಮಾಗೆ ಆಯ್ಕೆ ಆಗಿರುವುದಾಗಿ ಸಂಜನಾ ಹೇಳಿದ್ದಾರೆ. ಸಿನಿಮಾಗೆ ಆಯ್ಕೆ ಆದ ನಂತರವೆ ಸುಶಾಂತ್ ಸಿಂಗ್ ಜೊತೆ ನಟಿಸಬೇಕು ಎನ್ನುವುದು ತಿಳಿದುಬಂದಿದೆ. ಅಲ್ಲದೆ ಸುಶಾಂತ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು, ದಿಲ್ ಬೇಚಾರ ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದು ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಮುಂದೆ ಓದಿ..
ಸುಶಾಂತ್ ಸಿಂಗ್ ದೇಹದಲ್ಲಿ ವಿಷಕಾರಿ ಅಂಶ ಇತ್ತೇ?: ವರದಿ ಹೇಳುವುದೇನು?
ಸುಶಾಂತ್ ವಿರುದ್ಧ ಮೀ ಟೂ ಆರೋಪ
2018ರಲ್ಲಿ ಮೀ ಟೂ ಚಳುವಳಿ ಉತ್ತುಂಗದಲ್ಲಿ ಇತ್ತು. ಬಾಲಿವುಡ್ ನಟಿಯರು ಸೇರಿದ್ದಂತೆ ಬೇರೆ ಬೇರೆ ಭಾಷೆಯ ನಟಿಯರು ಚಿತ್ರರಂಗದಲ್ಲಿ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ ನಟಿ ಸಂಜನಾ ಸಾಂಘಿ ಮೇಲು ಲೈಂಗಿಕ ದೌರ್ಜನ್ಯವಾಗಿದೆ ಎಂಬ ವರದಿಯಾಗಿತ್ತು. ಆ ಸಮಯದಲ್ಲಿ ನಟ ಸುಶಾಂತ್ ಸಿಂಗ್ ಹೆಸರು ಕೇಳಿಬಂದಿತ್ತು.
ಸಂಜನಾ ಸಾಂಘಿ ಸ್ಪಷ್ಟನೆ
ಆಗ ಸಂಜನಾ ಸಾಂಘಿ ಸ್ಪಷ್ಟನೆ ಕೂಡ ನೀಡಿದ್ದರು. "ನಾನು ಭಾರತದಲ್ಲಿ ಇರಲಿಲ್ಲ. ಶೂಟಿಂಗ್ ಗೆ ಇನ್ನೂ ಸಮಯವಿದ್ದ ಕಾರಣ ಅಮ್ಮನ ಜೊತೆ ಯು ಎಸ್ ಗೆ ತೆರಳಿದ್ದೆ. ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಭಾರಕ್ಕೆ ವಾಪಸ್ ಆದ ಮೇಲೆ ಈ ವಿಚಾರ ಗೊತ್ತಾಗಿದೆ. ನನ್ನ ಹೆಸರನ್ನು ಸುಶಾಂತ್ ಜೊತೆ ಸೇರಿಸಿ ನನಗೂ ದೌರ್ಜವ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಸುಳ್ಳು ಸುದ್ದಿ. ಸುಮ್ಮನೆ ನನ್ನ ಹೆಸರನ್ನು ತರಲಾಗಿದೆ" ಎಂದು ಸಾಮಾಜಿಕ ಜಾಲತಾಣಲ್ಲಿ ಸ್ಪಷ್ಟನೆ ನೀಡಿದ್ದರು. ಈಗಲು ಪೊಲೀಸರ ಮುಂದೆ ಇದೆ ವಿಚಾರವನ್ನು ಹೇಳಿದ್ದಾರೆ.
ಸುಶಾಂತ್ ಸಿಂಗ್ ಸಾವು: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಪೊಲೀಸರಿಂದ ಸಮನ್ಸ್
ಸುಶಾಂತ್ ಗೆ ಎಲ್ಲಾ ಗೊತ್ತಿತ್ತು
"ಈ ಘಟನೆ ನಂತರ ಸುಶಾಂತ್ ಅವರನ್ನು ಭೇಟಿಯಾಗಿ, ಮಾತನಾಡಿದ್ದೇನೆ. ಈ ಬಗ್ಗೆ ಸುಶಾಂತ್ ತುಂಬಾ ಬೇಸರವಾಗಿದ್ದರು. ಇಮೇಜ್ ಹಾಳು ಮಾಡಲೆಂದೇ ಹೀಗೆಲ್ಲ ಮಾಡಿದ್ದಾರೆ ಎಂದು ಸುಶಾಂತ್ ಹೇಳಿದ್ದರು. ಅಲ್ಲದೆ ಅವರಿಗೆ ಗೊತ್ತಿದೆ ಯಾರು ಹೀಗೆಲ್ಲ ಮಾಡುತ್ತಿದ್ದಾರೆ ಎನ್ನುವುದು. ಸುಶಾಂತ್ ಅವರ ಹೆಸರನ್ನು ಬಹಿರಂಗ ಪಡಿಸಿಲ್ಲ. ಅಲ್ಲದೆ ಸುಶಾಂತ್ ವೈಯಕ್ತಿಕ ವಿಚಾರವನ್ನು ಯಾವತ್ತು ನನ್ನ ಬಳಿ ಹೇಳಿಕೊಂಡಿಲ್ಲ" ಎಂದು ಸಂಜನಾ ಹೇಳಿದ್ದಾರೆ.
ಸುಶಾಂತ್ ಸಿಂಗ್ ಸಾವು: ಸ್ನೇಹಿತನೆಡೆಗೇ ತಿರುಗಿದ ಅನುಮಾನ
ಸೆಟ್ ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು
"ಸುಶಾಂತ್ ಮುಂದಿನ ಪ್ರೋಜೆಕ್ಟ್ ಗಳ ಬಗ್ಗೆ ನನಗೆ ಗೊತ್ತಿಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನುವುದು ಗೊತ್ತಿತ್ತು. ಸೆಟ್ ನಲ್ಲಿ ಸುಶಾಂತ್ ಸಾಮಾನ್ಯವ್ಯಕ್ತಿಯಂತೆ ಇರುತ್ತಿದ್ದರು. ಅಲ್ಲದೆ ಪಾಟ್ನಾನ ಜೀವದ ಬಗ್ಗೆ ಹೇಳುತ್ತಿದ್ದರು. ಉಳಿದ್ದಂತೆ ಸಿನಿಮಾ ವಿಚಾರ ಬಿಟ್ಟರೆ ಬೇರೆ ವಿಚಾರಗಳು ಚರ್ಚೆಯಾಗುತ್ತಿರಲಿಲ್ಲ" ಎಂದು ಸಂಜನಾ ವಿಚಾರಣೆಯಲ್ಲಿ ಹೇಳಿದ್ದಾರೆ.