Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಠಪೂರ್ತಿ ಕುಡಿದು ರಾತ್ರಿ ಶ್ರೀದೇವಿ ಇದ್ದ ಕೊಠಡಿಗೆ ನುಗ್ಗಿದ್ದರು ಸಂಜಯ್ ದತ್
ಬಾಲಿವುಡ್ನ ಅತ್ಯಂತ ಯಶಸ್ವಿ ಮತ್ತು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಟಿಯರಲ್ಲಿ ಶ್ರೀದೇವಿ ಒಬ್ಬರು. ಅಪ್ರತಿಮ ಸೌಂದರ್ಯ ಮತ್ತು ಪ್ರತಭೆ ಎರಡನ್ನೂ ಹೊಂದಿದ್ದ ಶ್ರೀದೇವಿ ನಾಲ್ಕು ದಶಕಗಳಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಯಶಸ್ಸನ್ನೂ ಪಡೆದಿದ್ದರು. ಅವರ ಅಕಾಲಿಕ ಸಾವು ಈಗಲೂ ಅಭಿಮಾನಿಗಳಲ್ಲಿನ ನೋವನ್ನು ಶಮನ ಮಾಡಿಲ್ಲ.
Recommended Video
ಶ್ರೀದೇವಿ ಅವರ ಅಭಿಮಾನಿಗಳಲ್ಲಿ ನಟ ಸಂಜಯ್ ದತ್ ಕೂಡ ಒಬ್ಬರು. ಆದರೆ ಸಂಜಯ್ ದತ್ ವ್ಯಕ್ತಿತ್ವ ಮತ್ತು ವರ್ತನೆಗಳು ವಿವಾದದ ಕೇಂದ್ರಬಿಂದುವಾಗಿದ್ದವು. ಅದರಲ್ಲಿಯೂ ಆರಂಭದ ದಿನಗಳಲ್ಲಿ ಸಂಜಯ್ ದತ್ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿದ್ದವು.
ಐಶ್ವರ್ಯಾ ರೈ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದ ಸಂಜಯ್ ದತ್ ಸಹೋದರಿಯರು
ಇಂತಹ ಸಂಜಯ್ ದತ್, ಶ್ರೀದೇವಿ ಅವರ ಮೊದಲ ಭೇಟಿಯ ಸಂದರ್ಭದಲ್ಲಿಯೇ ಅನುಚಿತವಾಗಿ ವರ್ತಿಸಿದ್ದರು. ಕಂಠಪೂರ್ತಿ ಕುಡಿದು ತಮ್ಮ ನೆಚ್ಚಿನ ನಟಿಯ ಹೋಟೆಲ್ ಕೊಠಡಿಗೆ ನುಗ್ಗಲು ಪ್ರಯತ್ನಿಸಿದ್ದರು ಎನ್ನುವುದು ಗೊತ್ತೇ? ಮುಂದೆ ಓದಿ...
ಹಿಮ್ಮತ್ ವಾಲಾ ಚಿತ್ರೀಕರಣ
ಈ ಘಟನೆ 1983ರಲ್ಲಿ 'ಹಿಮ್ಮತ್ ವಾಲಾ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದಿತ್ತು. ತೆಲುಗಿನ ರೀಮೇಕ್ ಚಿತ್ರವಾಗಿದ್ದ ಇದನ್ನು ಕೆ. ರಾಘವೇಂದ್ರ ರಾವ್ ನಿರ್ದೇಶಿಸಿದ್ದರು. ಜೀತೇಂದ್ರ, ಅಮ್ಜದ್ ಖಾನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಕುಡಿದು ಬಾಗಿಲು ಬಡಿದಿದ್ದ ದತ್
ಶ್ರೀದೇವಿ ತಾವು ಇರುವ ನಗರದಲ್ಲಿಯೇ ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಸಂಜಯ್ ದತ್ ಅವರಿಗೆ ಗೊತ್ತಾಗಿತ್ತು. ಅವರನ್ನು ಭೇಟಿಯಾಗುವ ಸಲುವಾಗಿ ಅವರು ಉಳಿದುಕೊಂಡಿದ್ದ ಹೋಟೆಲ್ಗೆ ತೆರಳಿದ್ದರು. ಅವರಿದ್ದ ಕೊಠಡಿಯ ಬಾಗಿನ್ನು ದಡ ದಡನೆಯ ಬಡಿಯತೊಡಗಿದ್ದರು. ತಾನೇನು ಮಾಡುತ್ತಿದ್ದೇನೆ ಎನ್ನುವುದು ಅವರಿಗೇ ಅರಿವಿರಲಿಲ್ಲ. ಏಕೆಂದರೆ ಅವರು ವಿಪರೀತ ಕುಡಿದಿದ್ದರು. ಶ್ರೀದೇವಿ ಬಾಗಿಲು ತೆರೆದಾಗ ಸಂಜಯ್ ದತ್ ಒಳಗೆ ನುಗ್ಗಲು ಪ್ರಯತ್ನಿಸಿದ್ದರು. ಸಂಜಯ್ ದತ್ ಸ್ಥಿತಿ ಕಂಡು ಬೆದರಿದ ಶ್ರೀದೇವಿ ಹೇಗೋ ಕಷ್ಟಪಟ್ಟು ಬಾಗಿಲು ಹಾಕಿ ಅವರು ಒಳಗೆ ಬರದಂತೆ ನೋಡಿಕೊಂಡಿದ್ದರು.
ಸಂಜಯ್ ದತ್ ಎದುರು ನಿಂತಾಗ ಗಡಗಡ ನಡುಗಿದ್ದರಂತೆ ಶ್ರುತಿ ಹಾಸನ್
ದತ್ ಕಂಡರೆ ಹೆದರುತ್ತಿದ್ದ ಶ್ರೀದೇವಿ
ಆಸಕ್ತಿಕರ ಸಂಗತಿಯೆಂದರೆ ಇದನ್ನು ಸಂಜಯ್ ದತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕುಡಿದ ಅಮಲಿನಲ್ಲಿದ್ದ ತಾವು ಶ್ರೀದೇವಿ ಅವರೊಂದಿಗೆ ಹೇಗೆ ವರ್ತಿಸಿದ್ದೆ ಎನ್ನುವುದೂ ನೆನಪಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಘಟನೆ ಶ್ರೀದೇವಿ ಅವರ ಮನಸಿನಲ್ಲಿ ಗಾಢ ಪರಿಣಾಮ ಬೀರಿತ್ತು. ಸಂಜಯ್ ದತ್ ಜತೆ ಮುಂದೆ ಸಿನಿಮಾ ಮಾಡಲೂ ಅವರು ಹೆದರುತ್ತಿದ್ದರಂತೆ.
'KGF-2'ನಲ್ಲಿ ಸುದೀಪ್ ಮಾಡಬೇಕಿದ್ದ ಪಾತ್ರ ಸಂಜಯ್ ದತ್ ಪಾಲಾಯಿತಾ? ಕಿಚ್ಚ ಹೇಳಿದ್ದೇನು?
ಜತೆಯಾದ ದತ್-ಶ್ರೀದೇವಿ
ಕ್ರಮೇಣ ಸಮಯ ಎಲ್ಲವನ್ನೂ ತಿಳಿಗೊಳಿಸಿತು. ಹತ್ತು ವರ್ಷದ ಬಳಿಕ ಸಂಜಯ್ ದತ್ ಮತ್ತು ಶ್ರೀದೇವಿ 1993ರಲ್ಲಿ 'ಗುಮ್ರಾ' ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು. ಮಹೇಶ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀದೇವಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಡುಗಳೂ ಹಿಟ್ ಆಗಿದ್ದವು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ದೊಡ್ಡ ಸಂಚಲನ ಮೂಡಿಸುವಲ್ಲಿ ವಿಫಲವಾಯಿತು.