Don't Miss!
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಜಯ್ ದತ್ ಈ ಫೋಟೋ ನೋಡಿ ಮರುಗಿದ ಅಭಿಮಾನಿಗಳು: ಆರೋಗ್ಯದ ಬಗ್ಗೆ ಹೆಚ್ಚಿದ ಚಿಂತೆ
ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಇತ್ತೀಚಿಗೆ ಪತ್ನಿ ಮಾನ್ಯತಾ ದತ್ ಜೊತೆ ದುಬೈಗೆ ಪ್ರಯಾಣ ಬೆಳೆಸಿದ್ದರು. ಸಂಜಯ್ ದತ್ ಚಿಕಿತ್ಸೆಯ ನಡುವೆಯೂ ಸಿನಿಮಾ ಕೆಲಸದಲ್ಲಿಯೂ ತೊಡಗಿಕೊಂಡಿದ್ದಾರೆ. ಈ ನಡುವೆ ಸಣ್ಣ ಬ್ರೇಕ್ ಪಡೆದು ಮಕ್ಕಳಿಗಾಗಿ ದುಬೈಗೆ ಹಾರಿದ್ದರು. ಇದೀಗ ದುಬೈಯಿಂದ ವಾಪಸ್ ಆಗಿರುವ ಸಂಜಯ್ ದತ್ ಮತ್ತೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ದಿನಗಳು ಮಕ್ಕಳ ಜೊತೆ ಕಾಲಕಳೆದ ಸಂಜಯ್ ದತ್ ಇದೀಗ ಮುಂಬೈ ಆಸ್ಪತ್ರೆಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಸಂಜಯ್ ದತ್ ಆಸ್ಪತ್ರೆಯಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೊರಗಿ ಹೋಗಿರುವ ಸಂಜು ಬಾಬಾನನ್ನು ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ಖಡಕ್ ಡೈಲಾಗ್ ಗಳನ್ನು ಹೊಡೆಯುತ್ತ, ಎದುರಾಳಿಗಳನ್ನು ಹೊಡೆದುರುಳಿಸುತ್ತಿದ್ದ ಸಂಜಯ್ ದತ್ ಈಗ ದುರ್ಬಲರಾಗಿ ನಿಂತಿರುವ ಫೋಟೋ ಅಭಿಮಾನಿಗಳ ಮನಕ್ಕೆ ಬೆಂಕಿ ಇಟ್ಟಂತೆ ಆಗಿದೆ. ಮುಂದೆ ಓದಿ...
ತಿಂಗಳ ಬಳಿಕ ಮಕ್ಕಳನ್ನು ಭೇಟಿಯಾದ ಸಂತಸದಲ್ಲಿ ನಟ ಸಂಜಯ್ ದತ್
ತೀರ ತೆಳ್ಳಗಾಗಿರುವ ಸಂಜಯ್ ದತ್
ಸಂಜಯ್ ದತ್ ದುಬೈಯಿಂದ ವಾಪಸ್ ಆದ ಬಳಿಕ ಆಸ್ಪತ್ರೆಗೆ ತೆರಳಿರುವ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಸಂಜಯ್ ದಂತ್ ತುಂಬಾ ತೆಳ್ಳಗಾಗಿದ್ದಾರೆ. ಕಟ್ಟುಮಸ್ತಾದ ಖಡಕ್ ದೇಹವನ್ನು ಹೊಂದಿದ್ದ ಸಂಜಯ್ ದತ್ ನನ್ನು ಈ ಸ್ಥಿತಿಯಲ್ಲಿ ನೋಡುತ್ತಿದ್ದ ಅಭಿಮಾನಿಗಳಿಗೆ ಕರಳುಹಿಂಡುವಂತಿದೆ. ಒಮ್ಮೆಗೆ ದುರ್ಬಲ, ಅಸಹಾಯಕ ಸ್ಥಿತಿಯಲ್ಲಿ ನಿಂತಿರುವ ಸಂಜು ಬಾಬಾನ ಫೋಟೋ ನಿಜಕ್ಕೂ ಕಣ್ಣೀರುತರಿಸುತ್ತೆ.
ಸಂಜು ಬಾಬಾಗಾಗಿ ನೆಟ್ಟಿಗರ ಪ್ರಾರ್ಥನೆ
ಸಂಜಯ್ ದತ್ ನೋಡಿ ಅಭಿಮಾನಿಗಳು, ಬೇಗ ಗುಣಮುಖರಾಗಿ ಸಂಜಯ್ ದತ್, ನೀವು ಶೀಘ್ರದಲ್ಲೇ ಗುಣಮುಖರಾಗುತ್ತೀರಿ ಎನ್ನುವ ನಂಬಿಕೆ ಇದೆ, ಗುಣಮುಖರಾದ ಫೋಟೋವನ್ನು ನೋಡಲು ಬಯಸುತ್ತೇವೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಸಂಜಯ್ ದತ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸಿನಿಮಾರಂಗದ ಗಣ್ಯರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆ ನಡುವೆಯೂ ದುಬೈಗೆ ಪ್ರಯಾಣ ಬೆಳೆಸಿದ ನಟ ಸಂಜಯ್ ದತ್
ತಿಂಗಳು ಬಳಿಕ ಮಕ್ಕಳನ್ನು ನೋಡಿ ಸಂತಸ ಪಟ್ಟ ದತ್
ಸಂಜಯ್ ದತ್ ದುಬೈ ತೆರಳುತ್ತಿದಂತೆ ಅಪ್ಪನನ್ನು ನೋಡಿ ಮಕ್ಕಳು ತುಂಬಾ ಸಂತೋಷ ಪಟ್ಟಿದ್ದಾರೆ. ಕ್ಯಾನ್ಸರ್ ಇರುವ ವಿಚಾರ ಬಹಿರಂಗವಾದ ಬಳಿಕ ಮೊದಲ ಬಾರಿಗೆ ಮಕ್ಕಳು ಅಪ್ಪನನ್ನು ನೋಡಿದ್ದಾರೆ. ಸದ್ಯ ಸಂಜಯ್ ದತ್, ಪತ್ನಿ ಮತ್ತು ಮಕ್ಕಳ ಜೊತೆ ದುಬೈನಲ್ಲಿ ಕೆಲವು ದಿನಗಳು ಸಮಯ ಕಳೆದಿದ್ದಾರೆ. ಇತ್ತೀಚಿಗೆ ಪತ್ನಿ ಮಾನ್ಯತಾ ದತ್ ಮಕ್ಕಳ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
Recommended Video
ಚಿಕಿತ್ಸೆಯ ಜೊತೆಗೆ ಸಿನಿಮಾ ಚಿತ್ರೀಕರಣ
ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಿರುವ ಸಂಜಯ್ ದತ್ ಇದೀಗ ಎರಡನೇ ಹಂತದ ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಚಿಕಿತ್ಸೆ ಜೊತೆಗೆ ಚಿತ್ರೀಕಣದಲ್ಲಿಯೂ ಭಾಗಿಯಾಗಿದ್ದಾರೆ. 'ಶಂಶೇರಾ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ಈಗಾಗಲೇ ದತ್ ಹಾಜರಾಗಿದ್ದಾರೆ. ಇದಲ್ಲದೆ ಸಾಕಷ್ಟು ಸಿನಿಮಾಗಳನ್ನು ಸಂಜಯ್ ದತ್ ಪೂರ್ಣಗೊಳಿಸಬೇಕಿದೆ.