Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ' ಕಟ್ಟಪ್ಪ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದು ಬಾಲಿವುಡ್ ನ ಈ ಸ್ಟಾರ್ ನಟ
ಭಾರತೀಯ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಸಿನಿಮಾ ಬಾಹುಬಲಿ. ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಂದ ಬಾಹುಬಲಿ, ಸಿನಿಪ್ರಿಯರ ನಿದ್ದೆಗೆಡಿಸಿತ್ತು. ಬಾಹುಬಲಿ ದಿ ಬಿಗಿನಿಂಗ್ ರಿಲೀಸ್ ಆದ ಬಳಿಕ ಪಾರ್ಟ್-2 ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಅಲ್ಲದೆ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ವೀಕ್ಷಕರು ತಲೆಗೆಡಿಸಿಕೊಂಡಿದ್ದರು.
Recommended Video
ಬಾಹುಬಲಿ ಸಿನಿಮಾದಲ್ಲಿ ಕಥೆ ಜೊತೆಗೆ ಪಾತ್ರಗಳ ಆಯ್ಕೆ ಕೂಡ ಜನರ ಮೆಚ್ಚುಗೆ ಪಡೆದಿದೆ. ನಾಯಕ ಪ್ರಭಾಸ್ ಪಾತ್ರದಿಂದ ಹಿಡಿದು ಎಲ್ಲಾ ಪಾತ್ರವು ಭಾರತೀಯ ಚಿತ್ರರಂಗದ ಶ್ರೀಮಂತ ಇತಿಹಾಸದ ಒಂದು ಭಾಗವಾಗಿದೆ. ಪ್ರಭಾಸ್, ಸತ್ಯರಾಜ್, ರಮ್ಯಾಕೃಷ್ಣ, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಸೇರಿದ್ದಂತೆ ಪ್ರತಿಯೊಬ್ಬರ ಪಾತ್ರಗಳು ಅಷ್ಟು ಅದ್ಭುತವಾಗಿ ಮೂಡಿಬಂದಿವೆ. ಮುಂದೆ ಓದಿ..
ಕಂಠಪೂರ್ತಿ ಕುಡಿದು ರಾತ್ರಿ ಶ್ರೀದೇವಿ ಇದ್ದ ಕೊಠಡಿಗೆ ನುಗ್ಗಿದ್ದರು ಸಂಜಯ್ ದತ್
ಮೆಚ್ಚುಗೆ ಪಡೆದ ಕಟ್ಟಪ್ಪ ಪಾತ್ರ
ಬಾಹುಬಲಿಯಲ್ಲಿ ಕಟ್ಟಪ್ಪನ ಪಾತ್ರ ಎಲ್ಲರಿಗೂ ಮೆಚ್ಚುಗೆ ಪಡೆಯುುವ ಪಾತ್ರಗಳಲ್ಲಿ ಒಂದಾಗಿದೆ. ನಟ ಸತ್ಯರಾಜ್ ಕಟ್ಟಪ್ಪನಾಗಿ ನಟಿಸಿದ್ದಾರೆ. ಈ ಪಾತ್ರದ ನಂತರ ಸತ್ಯರಾಜ್ ಕಟ್ಟಪ್ಪನಾಗಿಯೆ ಖ್ಯಾತಿಗಳಿಸಿದ್ದಾರೆ. ಅಂದ್ಹಾಗೆ ಸತ್ಯರಾಜ್ ಕಟ್ಟಪ್ಪ ಪಾತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲವಂತೆ. ಈ ಸತ್ಯ ಈಗ ರಿವೀಲ್ ಆಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಕಟ್ಟಪ್ಪ ಪಾತ್ರಕ್ಕೆ ಮೊದಲ ಆಯ್ಕೆ ಸಂಜಯ್ ದತ್
ಕಪ್ಪಟ್ಟ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಬಾಲಿವುಡ್ ಖ್ಯಾತ ನಟ ಸಂಜಯ್ ದತ್. ಆಯೋಜಕರು ಕಟ್ಟಪ್ಪ ಪಾತ್ರಕ್ಕೆ ಸಂಜಯ್ ದತ್ ಅವರನ್ನು ಕರೆತರುವ ಪ್ಲಾನ್ ಮಾಡಿದ್ದರು. ಆದರೆ ಸಂಜಯ್ ದತ್ ಆ ಸಮಯದಲ್ಲಿ ಜೈಲಿನಲ್ಲಿ ಇದ್ದರು. ಹಾಗಾಗಿ ಸಂಜಯ್ ದತ್ ಪಾತ್ರ ಸತ್ಯರಾಜ್ ಪಾಲಾಗಿದೆ. ಕಥೆ ಮಾಡುವಾಗ ಸಂಜಯ್ ದತ್ ಅವರೆ ಮಾಡಬೇಕೆಂದುಕೊಂಡು ಸ್ಕ್ರಿಪ್ಟ್ ರಚಿಸಿದ್ದರಂತೆ ವಿಜಯೇಂದ್ರ ಪ್ರಸಾದ್. ಈ ಬಗ್ಗೆ ಈಗ ಸ್ವತಹ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬಹಿರಂಗಪಡಿಸಿದ್ದಾರೆ.
'KGF-2'ನಲ್ಲಿ ಸುದೀಪ್ ಮಾಡಬೇಕಿದ್ದ ಪಾತ್ರ ಸಂಜಯ್ ದತ್ ಪಾಲಾಯಿತಾ? ಕಿಚ್ಚ ಹೇಳಿದ್ದೇನು?
ಶಿವಗಾಮಿ ಪಾತ್ರಕ್ಕೆ ರಮ್ಯಾ ಕೃಷ್ಣ ಮೊದಲ ಆಯ್ಕೆ ಆಗಿರಲಿಲ್ಲ
ಬಾಹುಬಲಿ ಸಿನಿಮಾದ ಮತ್ತೊಂದು ಪ್ರಮುಖವಾದ ಪಾತ್ರವೆಂದರೆ ಶಿವಗಾಮಿ. ನಟಿ ರಮ್ಯಾ ಕೃಷ್ಣ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣಗೆ ದೊಡ್ಡ ಮಟ್ಟದಲ್ಲಿ ಹೆಸರುತಂದು ಕೊಟ್ಟಪಾತ್ರವಿದು. ಆದರೆ ಶಿವಗಾಮಿ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಬಾಲಿವುಡ್ ಖ್ಯಾತ ನಟಿ ಶ್ರೀದೇವಿ. ಸಂಭಾವನೆ ವಿಚಾರಕ್ಕೆ ಶ್ರೀದೇವಿ ಪಾತ್ರ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೊನೆಗೆ ರಮ್ಯಾ ಶಿವಗಾಮಿಯಾಗಿ ಬಣ್ಣಹಚ್ಚುವ ಮೂಲಕ ಇತಿಹಾಸ ನಿರ್ಮಿಸಿದರು.
ಕೆಜಿಎಫ್ 2 ರವೀನಾ ಟಂಡನ್ ಪಾತ್ರವೇನು? ಅವರೇ ಹೇಳಿದ್ದಾರೆ ನೋಡಿ
5 ವರ್ಷ ತುಂಬಿದ ಖುಷಿಯಲ್ಲಿ ಬಾಹುಬಲಿ ಟೀಂ
ಬಾಹುಬಲಿ ದಿ ಬಿಗಿನಿಂಗ್ ಸಿನಿಮಾ ರಿಲೀಸ್ ಆಗಿ 5 ವರ್ಷವಾಗಿದೆ. ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ನಿರ್ಮಿಸಿದ ಸಿನಿಮಾಗೆ 5 ವರ್ಷ ತುಂಬಿದ ಖುಷಿಯನ್ನು ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ ಸೇರಿದ್ದಂತೆ ಅನೇಕ ಕಲಾವಿದರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಸಿನಿಮಾವಿದು. ತೆಲುಗು ಚಿತ್ರರಂಗದ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ಬಾಹುಬಲಿ ಸಿನಿಮಾ 5 ವರ್ಷ ತುಂಬಿದ ಸಂಭ್ರಮದಲ್ಲಿದೆ.