Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇದರನಾಥದಲ್ಲಿ ಸಾರಾ ಹಾಗೂ ಜಾಹ್ನವಿ ಕಪೂರ್ಗೆ ಸಾವಿನ ಅನುಭವ ಆಗಿತ್ತಂತೆ!
ಬಾಲಿವುಡ್ನ ಉದಯೋನ್ಮುಖ ನಟಿಯರಲ್ಲಿ ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಮುಂಚೂಣಿಯಲ್ಲಿದ್ದಾರೆ. ಇವರ ಸಿನಿಮಾಗಳು ಒಂದರ ಹಿಂದೊಂದು ಸೆಟ್ಟೇರುತ್ತಿವೆ. ಕೆಲವು ಥಿಯೇಟರ್ಗೆ ಲಗ್ಗೆ ಇಟ್ಟರೆ, ಇನ್ನು ಕೆಲವು ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ.
ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಬಾಲಿವುಡ್ನಲ್ಲಿ ಸದ್ಯ ಬ್ಯುಸಿ ಇರುವ ನಟಿಯರು. ಅಲ್ಲದೆ ಇವರಿಬ್ಬರು ಬಾಲಿವುಡ್ನ ಬೆಸ್ಟ್ ಫ್ರೆಂಡ್ಸ್. ಸಿನಿಮಾ ಇಲ್ಲದೆ ಇದ್ದಾಗ, ಇಬ್ಬರೂ ಒಟ್ಟಿಗೆ ಸೇರುತ್ತಾರೆ. ಪ್ರವಾಸಕ್ಕೆ ಹೋಗುತ್ತಾರೆ.
ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್ನ ರಣ್ವೀರ್ ಸಿಂಗ್ ಕೆನ್ನೆಗೆ ಬಿತ್ತು ಏಟು!
ಇತ್ತೀಚೆಗೆ ಬಾಲಿವುಡ್ ಯಂಗ್ ನಟಿಯರು ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಇಬ್ಬರೂ ನಟಿಯರೂ ತಮಗಾದ ಸಾವಿನ ಅನುಭವದ ಬಗ್ಗೆ ಮನಬಿಚ್ಚಿ ಮಾತಾಡಿದ್ದರು.
ಇತ್ತೀಚೆಗೆ ಸಾರಾ ಹಾಗೂ ಜಾಹ್ನವಿ ಇಬ್ಬರೂ ಕೇದರನಾಥಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಇಬ್ಬರ ನಡುವೆ ನಡೆದ ಘಟನೆಯನ್ನು 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ. ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಕೇದರನಾಥಗೆ ಭೇಟಿ ನೀಡಿದ್ದರು. " ಈ ವೇಳೆ ಸಾರಾ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಭೈರವನಾಥ್ಗೆ ಹೋಗಲು ನಿರ್ಧರಿಸಿದ್ದೆವು. ಅದು ದಾರಿ ನೋಡೋಕೆ ಸುಲಭ ಅಂತ ಅನಿಸಿತ್ತು. ಇಬ್ಬರೇ ಬಂಡೆಗಳನ್ನು ಹತ್ತುವುದೆಂದು ನಿರ್ಧರಿಸಿದ್ದೆವು. ಜಾಹ್ನವಿ ಕೂಡ ಇಬ್ಬರೇ ಹೋಗೋಣ ಎಂದಳು. ಕೆಲವು ದೂರು ಪ್ರಯಾಣ ಮಾಡುತ್ತಿದ್ದಂತೆ, ಅಲುಗಾಡುತ್ತಿದ್ದ ಬಂಡೆ ಮೇಲೆ ನಿಂತಿದ್ದ ನಮಗೆ ನಾವು ಅಪಾಯದಲ್ಲಿದ್ದೇವೆ ಎಂದು ಮನವರಿಕೆಯಾಗಿತ್ತು. ಆಗ ಡ್ರೈವರ್ ನೋಡಿ ಸ್ಪೆಷಲ್ ಫೋರ್ಸ್ ಸಹಾಯದಿಂದ ನಮ್ಮ ರಕ್ಷಣೆ ಮಾಡಲಾಯಿತು." ಎಂದು ಸಾರಾ ಅಲಿಖಾನ್ ಹೇಳಿಕೊಂಡಿದ್ದರು.
ಬಾಲಿವುಡ್ ಈ ಬ್ಯೂಟಿಫುಲ್ ನಟಿಯರು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರಾ ಅಲಿ ಖಾನ್ ಈಗ ವಿಕ್ಕಿ ಕೌಶಲ್ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಮುಗಿಯುವ ಹಂತಕ್ಕೆ ಬಂದಿದೆ. ಇನ್ನೊಂದು ಕಡೆ 'ಗ್ಯಾಸ್ಲೈಟ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನೊಂದು ಕಡೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೂಡ ರಾಜ್ಕುಮಾರ್ ರಾವ್ ಜೊತೆ ನಟಿಸುತ್ತಿದ್ದಾರೆ. 'ಮಿಸ್ಟರ್ ಅಂಡ್ ಮಿಸ್ಸಸ್ ಮಾಹಿ' ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಪರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾ ಎನ್ನಲಾಗಿದೆ.