Don't Miss!
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಚಿತ್ರವನ್ನ ರೀಮೇಕ್ ಮಾಡೋಕೆ 35 ಕೋಟಿ ಚೆಕ್ ಪಡೆದಿದ್ದಾರಂತೆ ಶಾಹೀದ್.!
ತೆಲುಗು ಬ್ಲಾಕ್ ಬಸ್ಟರ್ 'ಅರ್ಜುನ್ ರೆಡ್ಡಿ' ಚಿತ್ರವನ್ನ ಹಿಂದಿಯಲ್ಲಿ ರೀಮೇಕ್ ಮಾಡಿ ಗೆದ್ದು ಬೀಗಿದ ಶಾಹೀದ್ ಕಪೂರ್, ಈಗ ಮತ್ತೊಂದು ರೀಮೇಕ್ ಚಿತ್ರಕ್ಕೆ ಸಜ್ಜಾಗಿದ್ದಾರೆ.
ಈ ಚಿತ್ರಕ್ಕಾಗಿ ಶಾಹೀದ್ ಕಪೂರ್ ಬರೋಬ್ಬರಿ 35 ಕೋಟಿ ರೂಪಾಯಿಯ ಚೆಕ್ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿದೆ. ಕಬೀರ್ ಸಿಂಗ್ ಸಿನಿಮಾದ ಒಂದು ಯಶಸ್ಸು ಶಾಹೀದ್ ಕಪೂರ್ ವೃತ್ತಿ ಜೀವನದ ದಿಕ್ಕನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬದಲಾಯಿಸಿಬಿಡ್ತಾ ಎಂಬ ಅಚ್ಚರಿ ಈಗ ಸಾಮಾನ್ಯರನ್ನು ಕಾಡ್ತಿದೆ.
ಅಷ್ಟಕ್ಕೂ, ಶಾಹೀದ್ ಕಪೂರ್ ರೀಮೇಕ್ ಮಾಡಲು ಹೊರಟಿರುವ ಚಿತ್ರ ಯಾವುದು ಎಂದು ನೋಡಿದ್ರೆ, ತೆಲುಗಿನ ಸೂಪರ್ ಹಿಟ್ ಸಿನಿಮಾ ಜೆರ್ಸಿ. ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ದೊಡ್ಡ ಹಿಟ್ ಆಗಿತ್ತು.
ಗೌತಮ್ ತಿನ್ನಾನುರಿ ಈ ಚಿತ್ರ ನಿರ್ದೇಶನ ಮಾಡಿದ್ದರು. ಇದೀಗ, ಹಿಂದಿಯಲ್ಲೂ ಇವರೇ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. 35 ಕೋಟಿ ಚೆಕ್ ಮಾತ್ರವಲ್ಲ, ಶೇಕಡಾ 30 ರಷ್ಟು ಲಾಭವನ್ನ ಕೂಡ ಶಾಹೀದ್ ಪಡೆದುಕೊಳ್ಳಲಿದ್ದಾರೆ ಎಂದು ಬಾಲಿವುಡ್ ಚಿತ್ರ ವಿಶ್ಲೇಷಕರು ಹೇಳುತ್ತಿದ್ದಾರೆ.
ರಶ್ಮಿಕಾಗೆ ಹೊಡಿತು ಲಾಟರಿ: ಶಾಹೀದ್ ಕಪೂರ್ ಚಿತ್ರಕ್ಕೆ ಕೊಡಗಿನ ಕುವರಿ ನಾಯಕಿ!
ಬಿಟೌನ್ ನಲ್ಲಿ ಸಲ್ಮಾನ್ ಖಾನ್, ಶಾರೂಖ್ ಖಾನ್, ಅಕ್ಷಯ್ ಕುಮಾರ್ ಅಂತಹ ಸ್ಟಾರ್ ನಟರು, ಸಂಭಾವನೆ ಜೊತೆಗೆ ಚಿತ್ರದಿಂದ ಬಂದ ಲಾಭದಲ್ಲಿ ಶೇಕಡಾವಾರು ಲೆಕ್ಕದಲ್ಲಿ ಹಣ ಪಡೆಯುತ್ತಾರೆ. ಇಂತಹ ಹೊಸ ನಿಯಮವನ್ನ ಈಗ ಶಾಹೀದ್ ಕಪೂರ್ ಕೂಡ ಆರಂಭಿಸಿದ್ದಾರಂತೆ.
'ಕಬೀರ್ ಸಿಂಗ್' ನಂತರ ಮತ್ತೊಂದು ಸೌತ್ ಚಿತ್ರದ ರೀಮೇಕ್ನಲ್ಲಿ ಶಾಹೀದ್ ಕಪೂರ್.?
ಎಲ್ಲ ಅಂದುಕೊಂಡಂತೆ ಆಗಿದ್ದರೇ, ಈ ಚಿತ್ರದ ಹಿಂದಿ ರೀಮೇಕ್ ನಲ್ಲಿ ಶಾಹೀದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ನಟಿಸಬೇಕಿತ್ತು. ಕೊಡಗಿನ ಕುವರಿಗೆ ಆಫರ್ ಮಾಡಲು ಚಿತ್ರತಂಡ ಯೋಜಿಸಿದ್ದರಂತೆ. ಸದ್ಯಕ್ಕೆ ನಾಯಕಿ ಯಾರು ಎಂಬುದು ಅಂತಿಮವಾಗಿಲ್ಲ. ಮುಂದಿನ ಆಗಸ್ಟ್ ತಿಂಗಳಲ್ಲಿ ಜೆರ್ಸಿ ಹಿಂದಿ ರೀಮೇಕ್ ತೆರೆಗೆ ಬರಲಿದೆ.