Don't Miss!
- Lifestyle 2024 ಮಾರ್ಚ್ 20ಕ್ಕೆ ಅಮಲಕಿ ಏಕಾದಶಿ: ಈ ದಿನ ನೆಲ್ಲಿಕಾಯಿ ಗಿಡ ಪೂಜಿಸುವುದೇಕೆ? ಈ ಏಕಾದಶಿಯ ಮಹತ್ವವೇನು?
- News DV Sadananda Gowda: ಕಮಲ ಬಿಟ್ಟು ಕೈ ಹಿಡಿಯುತ್ತಾರಾ ಸದಾನಂದಗೌಡರು: ಡಿ ಕೆ ಶಿವಕುಮಾರ್ ಏನಂದ್ರು?
- Automobiles ಅದ್ಭುತ ಫೀಚರ್ಸ್ ಪಡೆದುಕೊಂಡ ಟಾಟಾ ಟಿಯಾಗೋ ಇವಿ: ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ
- Sports IPL 2024: ಗಾಯದ ಕಾರಣದಿಂದ ಆಟಗಾರ ಲೀಗ್ನಿಂದ ಹೊರ ನಡೆದರೆ ಸಿಗುವ ಹಣವೆಷ್ಟು?
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸ್ಕರ್ ಅಂಗಳಕ್ಕೆ ಭಾರತದ ಕಿರುಚಿತ್ರ: ಮೂಡಿದೆ ಗೊಂದಲ
ಭಾರತದ ಮಟ್ಟಿಗೆ ಈ ಹಿಂದಿಗಿಂತಲೂ ಈ ಬಾರಿ ಕುತೂಹಲ ಮೂಡಿಸಿದೆ ಆಸ್ಕರ್. ಮಲಯಾಳಂ ಸಿನಿಮಾ 'ಜಲ್ಲಿಕಟ್ಟು'ವನ್ನು ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಕಳಿಸಲಾಗಿದೆ.
ಆದರೆ ಈ ಬಾರಿ ಆಸ್ಕರ್ನ ಸಿನಿಮಾ ವಿಭಾಗದ ಜೊತೆಗೆ ಕಿರುಚಿತ್ರ ವಿಭಾಗದ ಮೇಲೆ ಭಾರತೀಯರ ಕಣ್ಣು ನೆಟ್ಟಿದೆ. ಅದಕ್ಕೆ ಕಾರಣ ಉತ್ತಮ ಗುಣಮಟ್ಟದ ಕಿರುಚಿತ್ರಗಳು ಆಸ್ಕರ್ಗೆ ಆಗಿವೆ. ಆದರೆ ಈ ಆಯ್ಕೆಯಲ್ಲೂ ತುಸು ಗೊಂದಲ ಏರ್ಪಟ್ಟಿದೆ.
ಹೌದು, ಮೊದಲಿಗೆ ನಟಿ ವಿದ್ಯಾ ಬಾಲನ್ ನಟನೆಯ 'ನಟ್ಕಟ್' ಸಿನಿಮಾ, ವಿವಿಧ ಕಿರುಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಗೆದ್ದು, ಆಸ್ಕರ್ಗೆ ಹೋಗಲು ಅರ್ಹತೆ ಗಿಟ್ಟಿಸಿಕೊಂಡಿದೆ ಎನ್ನಲಾಗಿತ್ತು.
ನಂತರ ಧೀರಜ್ ಜಿಂದಾಲ್ ನಿರ್ದೇಶನದ 'ಪಾಷ್' ಎಂಬ ಕಿರುಚಿತ್ರ ಸಹ ಆಸ್ಕರ್ಗೆ ತೆರಳಿದೆ ಎಂಬ ಸುದ್ದಿ ಬಂತು. 13 ನಿಮಿಷದ ಈ ಕಿರುಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಟ್ರಕ್ ಡ್ರೈವರ್ ಒಬ್ಬ ಹೇಳಿದ ಕತೆಯನ್ನೇ ಸಿನಿಮಾ ಮಾಡಿದ್ದಾರೆ ಧೀರಜ್ ಜಿಂದಾಲ್.
Recommended Video
ಕಿರುಚಿತ್ರ 'ಶೇಮ್ಲೆಸ್' ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿ ಆಸ್ಕರ್ ಹೋಗುತ್ತಿದೆ ಎಂಬ ಸದ್ದಿ ಇದೀಗ ಬಂದಿದೆ. ಆದರೆ ಈ ಬಗ್ಗೆ 'ನಟ್ಕಟ್' ಕಿರುಚಿತ್ರದ ನಿರ್ದೇಶಕ ತಕರಾರು ತೆಗೆದಿದ್ದು, ಇದು ಸುಳ್ಳು ಸುದ್ದಿ, ಶೆಮ್ಲೆಸ್ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿಲ್ಲ ಎಂದು ಹೇಳಿದ್ದಾರೆ. ಆದರೆ ಹಲವು ಮಾಧ್ಯಮಗಳಲ್ಲಿ ಶೇಮ್ಲೆಸ್ ಸಿನಿಮಾ ಆಯ್ಕೆ ಆಗಿರುವುದಾಗಿ ಹೇಳಲಾಗಿದೆ.
ನಟ್ಕಟ್ ಕಿರುಚಿತ್ರದ ನಿರ್ದೇಶಕ 'ಶೇಮ್ಲೆಸ್' ಸಿನಿಮಾ ಆಸ್ಕರ್ಗೆ ಆಯ್ಕೆಯಾಗಿಲ್ಲ. ಆಯ್ಕೆಯಾದ ಕಿರುಚಿತ್ರದ ಹೆಸರು ಘೋಷಿಸುವುದು ಫೆಬ್ರವರಿ ತಿಂಗಳಲ್ಲಿ ಆ ವರೆಗೆ ಘೋಷಿಸುವುದಿಲ್ಲ. ಶೇಮ್ಲೆಸ್ ಕಿರುಚಿತ್ರ ಆಸ್ಕರ್ಗೆ ಆಯ್ಕೆ ಆಗಿದೆ ಎಂಬುದು ಸುಳ್ಳು ಸುದ್ದಿ ಎಂದಿದ್ದಾರೆ.