Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಸಂಕಷ್ಟಕ್ಕೆ ಸಾಲು-ಸಾಲು ಸಹಾಯ ಘೋಷಿಸಿದ ಶಾರುಖ್ ಖಾನ್
ನೆರೆ, ಬರ ಇನ್ನಾವುದೇ ಸಂಕಷ್ಟಗಳು ಎದುರಾದಾಗಲೂ ಬಾಲಿವುಡ್ ನ ಖಾನ್ ತ್ರಯರು ಸಂಕಷ್ಟಕ್ಕೆ ಮಿಡಿದರೇ ಇಲ್ಲವೇ, ಯಾರು ಎಷ್ಟು ನೀಡಿದರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸುತ್ತದೆ.
ಈ ಬಾರಿಯೂ ಹಾಗೆಯೇ ಆಗಿದೆ. ಶಾರುಖ್ ಖಾನ್ ಅವರು ದುಬೈ ಜನರಿಗಾಗಿ ಮಾಡಿರುವ ವಿಡಿಯೋ ಒಂದು ಹಂಚಿಕೊಂಡು, 'ಈತ ಭಾರತದ ಜನರ ಸಮಸ್ಯೆಗೆ ಸ್ಪಂದಿಸಿಲ್ಲ, ದುಬೈ ಜನರ ಬಗ್ಗೆ ಕಾಳಜಿ ತೋರುತ್ತಿದ್ದಾನೆ' ಎಂದು ಧರ್ಮವನ್ನೂ ಸೇರಿಸಿ ಹೀಗಳೆಯಲಾಗುತ್ತಿದೆ.
ದುಬೈ ಜನರ ಪರ ಶಾರುಖ್ ಖಾನ್ ಕಾಳಜಿ: ವಿವಾದ ಎಬ್ಬಿಸಿದ ವಿಡಿಯೋ
ದೇಶ ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ಶಾರುಖ್ ಖಾನ್ ತಮ್ಮ ನೆರವು ನೀಡಿದ್ದಾರೆ. ಈ ಬಾರಿಯೂ ಸಹ ಅವರು ಅದನ್ನೇ ಮಾಡಿದ್ದಾರೆ. ಸಾಲು-ಸಾಲು ನೆರವನ್ನು ಅವರು ಕೋವಿಡ್ 19 ಸಂದರ್ಭದಲ್ಲಿ ಘೋಷಿಸಿದ್ದಾರೆ.
ತಮ್ಮ ಎಲ್ಲಾ ಪ್ರಾಂಚೈಸಿಗಳಿಗೆ ನೆರವು
ಪ್ರಾಥಮಿಕ ಹಂತದಲ್ಲಿ ಮುಂಬೈ, ಕೊಲ್ಕತ್ತಾ, ದೆಹಲಿ ನಗರಗಳಿಗೆ ತಮ್ಮ ನೆರವನ್ನು ಫೋಕಸ್ ಮಾಡುತ್ತಿರುವುದಾಗಿ ಹೇಳಿರುವ ಶಾರುಖ್ ಖಾನ್. ತಮ್ಮ ರೆಡ್ ಚಿಲ್ಲೀಸ್, ರೆಡ್ ವಿಎಫ್ಎಕ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ, ಎಕ್ ಸಾಥ್ ಫೌಂಡೇಶನ್, ರೋಟಿ ಫೌಂಡೇಶನ್, ಮೀರ್ ಫೌಂಡೇಶನ್ ಗಳ ಮೂಲಕ ಅವರು ಕೋವಿಡ್ 19 ನಿಂದ ಸಂಕಷ್ಟಕ್ಕೆ ಸಿಲುಕಿರುವವರ ಸಹಾಯಕ್ಕೆ ಧಾವಿಸಿದ್ದಾರೆ.
ಪ್ರಧಾನಿ ಹಾಗೂ ಸಿಎಂ ನಿಧಿಗೆ ಆರ್ಥಿಕ ನೆರವು
ಯಾವ-ಯಾವ ಸಹಾಯಗಳನ್ನು ತಾವು ಮಾಡುತ್ತಿದ್ದೇವೆ ಎಂದು ಪಟ್ಟಿಯನ್ನೇ ಕೊಟ್ಟಿರುವ ಶಾರುಖ್ ಖಾನ್, ತಾವು ಹಾಗೂ ತಮ್ಮ ಉದ್ಯಮಗಳು, ಪ್ರಾಂಚೈಸಿಗಳ ಕಡೆಯಿಂದ ಪ್ರಧಾನಿ ಮಂತ್ರಿ, ಮಹಾರಾಷ್ಟ್ರ ಸಿಎಂ ನಿಧಿ ಹಾಗೂ ಪಶ್ಚಿಮ ಬಂಗಾಳ ಸಿಎಂ ನಿಧಿಗೆ ಆರ್ಥಿಕ ನೆರವನ್ನು ನೀಡುವುದಾಗಿ ಹೇಳಿದ್ದಾರೆ.
50,000 ಆರೋಗ್ಯ ಕಿಟ್ ಅನ್ನು ವಿತರಿಸಲಾಗುತ್ತಿದೆ
ಇದರ ಜೊತೆಗೆ ಕೆಕೆಆರ್ ಮತ್ತು ಮೀರ್ ಫೌಂಡೇಶನ್ ವತಿಯಿಂದ 50,000 ಆರೋಗ್ಯ ಕಿಟ್ ಅನ್ನು ವಿತರಿಸುತ್ತಿರುವುದಾಗಿ ಶಾರುಖ್ ಹೇಳಿದ್ದಾರೆ.
ಮೂರು ಲಕ್ಷ ಊಟದ ಕಿಟ್ ನೀಡಿದ ಫೌಂಡೇಶನ್
ರೋಟಿ ಫೌಂಡೇಶನ್ ಮತ್ತು ಮೀರ್ ಫೌಂಡೇಶನ್ ಸೇರಿಕೊಂಡು ಮೂರು ಲಕ್ಷ ಊಟದ ಕಿಟ್ ಅನ್ನು ಹಂಚುತ್ತಿರುವುದಾಗಿ ಹೇಳಿದ್ದಾರೆ. ಇದರಲ್ಲಿ ಅಗತ್ಯ ಆಹಾರ ಸಾಮಗ್ರಿಗಳು ಇರಲಿವೆ. ಇವನ್ನು ದಿನಗೂಲಿ ನೌಕರರಿಗೆ, ಬಡವರಿಗೆ ನೀಡಲಾಗುತ್ತಿದೆಯಂತೆ.
ತಾತ್ಕಾಲಿಕ ಅಡುಗೆ ಮನೆ ನಿರ್ಮಿಸಿ ದಿನ ಊಟ ಸರಬರಾಜು
ಅರ್ಥ್ ಫೌಂಡೇಶನ್ ಮತ್ತು ಮೀರ್ ಫೌಂಡೇಶನ್ ಜೊತೆಯಾಗಿ ಮುಂಬೈ ಒಂದರಲ್ಲೇ 5500 ಮಂದಿಗೆ ತಿಂಗಳಿಗೆ ಆಗುಷ್ಟು ಅಡುಗೆ ಸಾಮಗ್ರಿಗಳನ್ನು ವಿತರಿಸಿದೆ. ಜೊತೆಗೆ ಅಡುಗೆ ಮನೆಯೊಂದನ್ನು ನಿರ್ಮಿಸಿ ಪ್ರತಿದಿನ 2000 ಸಾವಿರ ಮಂದಿಗೆ ಊಟದ ಸರಬರಾಜು ಮಾಡುತ್ತಿದೆ.
ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ
ದಿನಗೂಲಿ ನೌಕರರಿಗೆ ಆಹಾರ ಸಾಮಗ್ರಿಗಳು, ಚಿತ್ರರಂಗದ ದಿನಗೂಲಿ ನೌಕರರಿಗೆ ಸಹಾಯ ಸೇರಿದಂತೆ ಹಲವು ಸಹಾಯಗಳ ಪಟ್ಟಿಯನ್ನು ಶಾರುಖ್ ಖಾನ್ ನೀಡಿದ್ದಾರೆ. ಇದೆಲ್ಲವನ್ನೂ ಅವರು ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ತಮ್ಮನ್ನು ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.