Don't Miss!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಎದುರಿಸಲು ನಾಲ್ಕಂತಸ್ತಿನ ಕಟ್ಟಡವನ್ನೇ ಬಿಟ್ಟುಕೊಟ್ಟ ಶಾರುಖ್ ಖಾನ್
ಕೊರೊನಾದಿಂದ ಇಡೀಯ ವಿಶ್ವವೇ ತತ್ತರಿಸಿದೆ. ಭಾರತವು ಕೊರೊನಾ ವಿರುದ್ಧ ಹೋರಾಡಲು ತನ್ನೆಲ್ಲಾ ಶಕ್ತಿಯನ್ನು ಒಟ್ಟುಮಾಡಿಕೊಂಡಿದೆ.
ಭಾರತೀಯರು ಸಹ ಸರ್ಕಾರಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಸಹ ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ.
ಕೊರೊನಾ ಸಂಕಷ್ಟಕ್ಕೆ ಸಾಲು-ಸಾಲು ಸಹಾಯ ಘೋಷಿಸಿದ ಶಾರುಖ್ ಖಾನ್
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರೂ ಸಹ ನೆರವಿನ ಮಹಾ ಪೂರವನ್ನೇ ಹರಿಸಿದ್ದು, ನಗದು ದೇಣಿಗೆ ಜೊತೆಯಾಗಿ ಏಳು ಭಿನ್ನ ನೆರವುಗಳನ್ನು ತನ್ನ ಒಡೆತನದ ಸಂಸ್ಥೆಗಳು, ಫೌಂಡೇಶನ್ಗಳ ಮೂಲಕ ಮಾಡುವುದಾಗಿ ಅವರು ಕೆಲವು ದಿನಗಳ ಹಿಂದಷ್ಟೆ ಘೋಷಿಸಿದ್ದಾರೆ. ಇದರ ಜೊತೆಗೆ ಇನ್ನೂ ದೊಡ್ಡ ನೆರವನ್ನು ಶಾರುಖ್ ಖಾನ್ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದ್ದಾರೆ.
'ಕಿಶೋರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ನಟ ಶಾರುಖ್ ಭಾವುಕ ನುಡಿ
ಹೌದು, ಈಗಾಗಲೇ ದೊಡ್ಡ ಮಟ್ಟದ ನೆರವನ್ನೇ ನೀಡಿರುವ ಶಾರುಖ್ ಖಾನ್, ತಮ್ಮ ಕಚೇರಿಯನ್ನೇ ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.
ನಾಲ್ಕಂತಸ್ತಿನ ಕಟ್ಟಡವನ್ನೇ ಬಿಟ್ಟುಕೊಟ್ಟಿದ್ದಾರೆ
ಹೌದು, ಕೊರೊನಾ ರೋಗಿಗಳನ್ನು, ಶಂಕಿತರನ್ನು ಕ್ವಾರೆಂಟೈನ್ ಮಾಡಲು ತನ್ನ ನಾಲ್ಕು ಮಹಡಿಯ ಐಶಾರಾಮಿ ಕಚೇರಿಯನ್ನೇ ಬಿಟ್ಟುಕೊಟ್ಟಿದ್ದಾರೆ. ಇದನ್ನು ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಅಧಿಕೃತವಾಗಿ ಘೋಷಿಸಿದ್ದಾರೆ.
ಶಾರುಖ್ ಗೆ ಧನ್ಯವಾದ ಹೇಳಿದ ಮುಂಬೈ ಮುನಿಸಿಪಲ್
ಶಾರುಖ್ ಖಾನ್ ನೀಡಿರುವ ನೆರವಿಗೆ ಮುಂಬೈ ಮುನಿಪಲ್ ಕಾರ್ಪೊರೇಷನ್ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಸಹ ತಿಳಿಸಿದೆ. ನಾಲ್ಕಂತಸ್ತಿನ ಕಚೇರಿಯನ್ನು ಶಾರುಖ್ ಬಿಟ್ಟುಕೊಟ್ಟಿದ್ದಾರೆ. ಅಲ್ಲಿ ಕೆಲವು ಅಗತ್ಯ ವೈದ್ಯಕೀಯ ಪರಿಕರಗಳನ್ನೂ ಅವರು ಒದಗಿಸಿದ್ದಾರೆ ಎಂದು ಬಿಎಂಸಿ ಹೇಳಿದೆ.
ಮಾತು ಉಳಿಸಿಕೊಂಡ ಜಗ್ಗೇಶ್: ನಿರ್ಭಯಾ ಹಂತಕರ ಹ್ಯಾಂಗ್ ಮ್ಯಾನ್ ಗೆ 1 ಲಕ್ಷ ದೇಣಿಗೆ
ಮೂರು ರಾಜ್ಯ ಹಾಗೂ ಕೇಂದ್ರಕ್ಕೆ ನೆರವು ನೀಡಿದ ಖಾನ್
ಶಾರುಖ್ ಖಾನ್ ಅವರು, ಪ್ರಧಾನಿ ರಿಲೀಫ್ ಫಂಡ್ ಗೆ ದೇಣಿಗೆ ನೀಡುವ ಜೊತೆಗೆ. ದೆಹಲಿ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಪ್ರತ್ಯೇಕವಾಗಿ ನೆರವು ಘೋಷಿಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಶಾರುಖ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಫೌಂಡೇಶನ್ನಿಂದ ಹಲವು ಉತ್ತಮ ಕಾರ್ಯ
ಅಷ್ಟೆ ಅಲ್ಲದೆ ತಮ್ಮ ಫೌಂಡೇಶನ್ ನಿಂದ ದಿನಗೂಲಿ ಕಾರ್ಮಿಕರು, ಬಡವರಿಗೆ ಲಾಕ್ ಡೌನ್ ಸಮಯದಲ್ಲಿ ದಿನಸಿ ಪೂರೈಕೆ, ಆಹಾರ ಪೂರೈಕೆ ಮಾಡುತ್ತಿದ್ದಾರೆ. ಸಿನಿಮಾ ದಿನಗೂಲಿ ನೌಕರರಿಗೆ ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಿ ಆಸ್ಪತ್ರೆಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ.