Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರುತಿ ಹಾಸನ್ ಗೆ ಕುಡುಕನ ಕಾಟ, ಕೇಸ್ ದಾಖಲು
ಬಾಲಿವುಡ್ ನಟಿ ಶುತ್ರಿ ಹಾಸನ್ ಅವರು ಮತ್ತೊಮ್ಮೆ ಕಿರುಕುಳಕ್ಕೊಳಗಾದ ಪ್ರಸಂಗ ನಡೆದಿದೆ. ಅಭಿಮಾನಿ ಹೆಸರಿನಲ್ಲಿ ಹತ್ತಿರಕ್ಕೆ ಬಂದ ದುಷ್ಕರ್ಮಿಯೊಬ್ಬ ಶ್ರುತಿ ಜತೆ ಅನುಚಿತವಾಗಿ ವರ್ತಿಸಿದ ಘಟನೆ ಜರುಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮುಸ್ಸೌರಿ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಉತ್ತರಾಖಂಡ್ ರಾಜ್ಯದ ಡೆಡ್ರಾಡೂನ್ ನಲ್ಲಿ ಚಿತ್ರೀಕರಣ ನಡೆಯುವ ವೇಳೆಯಲ್ಲಿ ಅಭಿಮಾನಿಯೊಬ್ಬನಿಂದ ಶ್ರುತಿ ಅವರು ಕಿರುಕುಳ ಅನುಭವಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ತಿಗ್ಮಂಷು ಧೂಳಿಯಾ ಅವರ ನಿರ್ದೇಶನದ ಯಾರಾ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹರ್ಯಾಣದ ಸಿರ್ಸಾ ಮೂಲದ ಈ ವ್ಯಕ್ತಿ ಮದ್ಯಪಾನ ಮಾಡಿಕೊಂಡು ಬಂದು ಶ್ರುತಿ ಹಾಸನ್ ತಂಗಿದ್ದ ಹೋಟೆಲ್ ರೂಮಿನ ಬಾಗಿಲು ಬಡಿದಿದ್ದಾನೆ. ಮಧ್ಯರಾತ್ರಿ ವೇಳೆ ಬಾಗಿಲ ಬಳಿ ನಿಂತು ಅರಚಾಡಿದ್ದಾನೆ ಎಂದು ತಿಳಿದು ಬಂದಿದೆ.
ಕಮಲ್ ಹಾಸನ್ ಹಾಗೂ ಸಾರಿಕಾ ಪುತ್ರಿ ಶ್ರುತಿ ಅವರು ಈ ರೀತಿ ಕಿರುಕುಳ ಅನುಭವಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶ್ರುತಿ ಅವರ ಮ್ಯಾನೇಜರ್ ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಶ್ರುತಿ ಅವರನ್ನು ಕಾಡುವ ಶಂಕಿತ ವ್ಯಕ್ತಿಗಳ ವಿವರ ಪಡೆಯಲಾಗಿದೆ. [ಶ್ರುತಿ ಮನೆಯಲ್ಲಿ ರಾತ್ರಿ ತಂಗಿದ್ದ ನಟನ್ಯಾರು?]
ಈ ಹಿಂದೆ ಸ್ಪಾಟ್ ಬಾಯ್ ಯೊಬ್ಬ ಶ್ರುತಿ ಅವರ ಮುಂಬೈನ ಬಾಂದ್ರಾ ಬಂಗಲೆಗೆ ಅತಿಕ್ರಮ ಪ್ರವೇಶ ಮಾಡಿದ ಘಟನೆ ನಡೆದಿತ್ತು.ಆದರೆ, ಸುದ್ದಿಯನ್ನು ಅಲ್ಲಗಳೆದಿದ್ದ ಸ್ಪಾಟ್ ಬಾಯ್, ನಾನು ನನ್ನ ಅಣ್ಣನಿಗೆ ಕೆಲ್ಸ ಕೇಳಲು ಹೋಗಿದ್ದೆ. ಮಧ್ಯರಾತ್ರಿ ಫ್ಲಾಟಿಗೆ ಹೋಗಿಲ್ಲ ಎಂದಿದ್ದ.[ಶೃತಿ ಮೀರಿದ ನಟಿ ಶ್ರುತಿ ಹಾಟ್ ಫೋಟೋಗಳು]