Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಒಂದು ರಾತ್ರಿ ಕಾಂಪ್ರಮೈಸ್ ಆಗು' ಎಂದ ನಿರ್ಮಾಪಕನಿಗೆ ಚಳಿ ಬಿಡಿಸಿದ್ದ ನಟಿ ಶ್ರುತಿ ಮರಾಠೆ
Recommended Video
ಭಾರತ ಚಿತ್ರರಂಗದಲ್ಲಿ 'ಮೀಟೂ ಅಭಿಯಾನ' ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಅಭಿಯಾನದ ಪರಿಣಾಮ ಮಹಿಳೆ, ಯುವತಿಯರ ಮೇಲೆ ನಡೆದಿದ್ದ ಅನೇಕ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಬಾಲಿವುಡ್, ತೆಲುಗು ಇಂಡಸ್ಟ್ರಿಯ ದೊಡ್ಡ ನಿರ್ಮಾಪಕ, ನಿರ್ದೇಶಕ, ನಟರ ಹೆಸರು ಈ ಆರೋಪದಲ್ಲಿ ಸಿಲುಕಿಕೊಂಡಿತ್ತು.
ಇದೀಗ, ಒಂದು ಹಂತಕ್ಕೆ ಮೀಟು ಅಭಿಯಾನ ಸೈಲೆಂಟ್ ಆಗಿದೆ. ಅಷ್ಟರಲ್ಲೇ ಮತ್ತೊಬ್ಬ ನಟಿ ನಿರ್ಮಾಪಕನಿಂದ ತನ್ನ ಮೇಲಾದ ಕಿರುಕುಳ ಪ್ರಯತ್ನವನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಆ ನಟಿಯನ್ನ ಮಂಚಕ್ಕೆ ಕರೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆ ನಿರ್ದೇಶಕನ ನೀಚ ಕೃತ್ಯ ಅರಿಯಲು ಈ ನಟಿಗೆ 8 ವರ್ಷ ಬೇಕಾಯಿತಂತೆ.!
ಹೌದು, ಮರಾಠಿ, ಹಿಂದಿ, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿರುವ ಶ್ರುತಿ ಮರಾಠೆ, ನಿರ್ಮಾಪಕನೊಬ್ಬನ ಕರಾಳ ಮುಖವನ್ನ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯನ್ನಾಗಿಸುತ್ತೇನೆ, ನನ್ನ ಜೊತೆ ಕಾಂಪ್ರಮೈಸ್ ಆಗು ಎಂದು ಬೇಡಿಕೆಯಿಟ್ಟಿದ್ದನಂತೆ. ಆನಂತರ ಏನಾಯ್ತು? ಮುಂದೆ ಓದಿ......
ಮಂಚಕ್ಕೆ ಕರೆದಿದ್ದ ಆ ನಿರ್ಮಾಪಕ ಯಾರು?
16 ವರ್ಷದಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಶ್ರುತಿ ಮರಾಠೆ ಅವರಿಗೆ ನಿರ್ಮಾಪಕನೊಬ್ಬ ಸಿನಿಮಾದಲ್ಲಿ ನಾಯಕಿ ಪಾತ್ರ ನೀಡುತ್ತೇನೆ ಆದ್ರೆ, ನೀನು ನನ್ನ ಜೊತೆ ಕಾಂಪ್ರಮೈಸ್ ಆಗಬೇಕು, ಒಂದು ರಾತ್ರಿ ನನ್ನ ಜೊತೆ ಮಲಗಬೇಕು' ಎಂದು ಕೇಳಿದ್ದನಂತೆ. ಆದ್ರೆ, ಆ ನಿರ್ಮಾಪಕ ಯಾರು ಎಂದು ಹೆಸರು ಹೇಳಿಲ್ಲ. ಮರಾಠಿ, ಕನ್ನಡ, ತಮಿಳು ಸಿನಿಮಾದಲ್ಲಿ ನಟಿಸಿರುವ ಶ್ರುತಿ ಮರಾಠೆ ಈ ವಿಷ್ಯವನ್ನೀಗ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಹಿರಿಯ ನಟಿ ಬಿ ಜಯಶ್ರೀಗೂ 'ಮೀಟೂ' ಅನುಭವ ಆಗಿತ್ತಂತೆ.!
ಆತನಿಗೆ ಚಳಿ ಬಿಡಿಸಿದ್ದ ಶ್ರುತಿ
ಆಮಿಷ ತೋರಿದ ಆ ನಿರ್ಮಾಪಕನಿಗೆ ಶ್ರುತಿ ಮರಾಠೆ ಸರಿಯಾಗಿ ತಿರುಗೇಟು ನೀಡಿದ್ರಂತೆ. ''ನಾನು ನಿನ್ನ ಜೊತೆ ಮಲಗಿದರೇ ಹೀರೋಯಿನ್ ಮಾಡ್ತಿಯಾ, ಹಾಗಾದ್ರೆ, ನಿನ್ನ ಜೊತೆ ಮುಲಗುವ ಯಾರನ್ನ ಹೀರೋ.....'' ಎಂದು ಪ್ರಶ್ನಿಸಿದ್ದರಂತೆ. ಇದರಿಂದ ಒಂದು ಕ್ಷಣ ಆ ನಿರ್ಮಾಪಕ ಕಂಗಾಲಾದನು ಎಂದು ಶ್ರುತಿ ಹೇಳಿಕೊಂಡಿದ್ದಾರೆ.
ನನ್ನನ್ನು ಬದುಕಲು ಬಿಡಿ ಎಂದು ಕಣ್ಣೀರು ಹಾಕಿದ ಸಂಗೀತ ಭಟ್
ಆಪ್ತರ ಬಳಿ ಅಳಲು ತೊಡಿಕೊಂಡ ನಟಿ
ನಂತರ ಈ ವಿಷ್ಯವನ್ನ ತನ್ನ ಆಪ್ತರ ಬಳಿ ಹೇಳಿಕೊಂಡರಂತೆ. ಈ ಪ್ರಾಜೆಕ್ಟ್ ಬಿಟ್ಟುಬಿಡು ಎಂದು ಸ್ನೇಹಿತರು ಸಲಹೆ ನೀಡಿದ ಬಳಿಕ, ಸುಮ್ಮನಾದರಂತೆ. ತಮ್ಮ ಸಿನಿ ಜರ್ನಿಯಲ್ಲಿ ತಾನು ಅನುಭವಿಸಿದ ಇಂತಹ ಕೆಲವು ಘಟನೆಗಳ ಬಗ್ಗೆಯೂ ನಟಿ ಶ್ರುತಿ ಮರಾಠೆ ಹೇಳಿಕೊಂಡಿದ್ದಾರೆ. ಧೈರ್ಯದಿಂದ ಇಂತಹ ಸಂಕಷ್ಟಗಳನ್ನ ಎದುರಿಸಿ ಮುನ್ನುಗ್ಗುವಂತಹ ಸ್ಥಿತಿಯನ್ನ ಎಲ್ಲ ಮಹಿಳೆಯರ ಹೊಂದಿರಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.
'ಗಂಡ ಹೆಂಡತಿ' ಸಂಧಾನ: ಆರೋಪ ಮಾಡಿದ್ದು ಸಂಜನಾ, 'ಸಾರಿ' ಕೇಳಿದ್ದು ಅವರೇ.!
ಕನ್ನಡದಲ್ಲೂ ನಟಿಸಿದ್ದಾರೆ ಶ್ರುತಿ ಮರಾಠೆ
32 ವರ್ಷದ ಶ್ರುತಿ ಮರಾಠೆ, ತಾನು 16ನೇ ವಯಸ್ಸಿನಲ್ಲಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರಂತೆ. ಮರಾಠಿ, ತಮಿಳು, ಹಿಂದಿ ಹಾಗೂ ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ಆಡು ಆಟ ಆಡೂ' ಎಂಬ ಕನ್ನಡ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗಿ ಅಭಿನಯಿಸಿದ್ದಾರೆ.