'ಪದ್ಮಾವತಿ' ವಿವಾದ ಬಗೆಹರಿಸಲಿದ್ದಾರೆ ಈ 'ಮಾಸ್ಟರ್ ಮೈಂಡ್' ಲೇಡಿ.!
ಸಂಜಯ್ ಲೀಲಾ ಬನ್ಸಾಲಿ ಚಿತ್ರದ ವಿವಾದವನ್ನ ಬಗೆಹರಿಸಲು ಯಾರಿಂದಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಈ ಬಿಸಿ ಹೆಚ್ಚಾಗುತ್ತಿದೆ. ಒಂದೆಡೆ ರಜಪೂತರು ತೀವ್ರ ಪ್ರತಿಭಟನೆ ಮಾಡುತ್ತಿದ್ದರೇ, ಮತ್ತೊಂದೆರಡೆ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗಿದೆ.
ಇನ್ನೊಂದೆಡೆ ಚಿತ್ರತಂಡ ಪೊಲೀಸ್ ಭದ್ರತೆ ಪಡೆದುಕೊಂಡು ದಿಕ್ಕು ತೋಚದಂತಾಗಿದೆ. ಹೀಗಿರುವಾಗ, 'ಪದ್ಮಾವತಿ' ಚಿತ್ರದ ವಿವಾದವನ್ನ ಬಗೆಹರಿಸಲು ಬಾಲಿವುಡ್ ನಟಿ ಕಮ್ ನಿರೂಪಕಿಯೊಬ್ಬರು ಮುಂದಾಗಿದ್ದಾರೆ.
ಈಕೆಯ ಮಧ್ಯಸ್ಥಿಕೆಯಲ್ಲಿ ಈ ವಿವಾದ ಅಂತ್ಯವಾಗಲಿದೆ ಎಂಬ ಆತ್ಮ ವಿಶ್ವಾಸವನ್ನ ಬಾಲಿವುಡ್ ಮಂದಿ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ರೆ, ಈಕೆ ಯಾರು? ಹೇಗೆ ವಿವಾದ ಬಗೆಹರಿಸಲಿದ್ದಾರೆ? ಎಂಬ ಪೂರ್ತಿ ವಿವರ ಮುಂದಿದೆ. ಓದಿ....

'ಪದ್ಮಾವತಿ' ವಿವಾದಕ್ಕೆ ನಟಿ ಸಿಮಿ ಗೇರವಾಲ್ ಎಂಟ್ರಿ
ಬಾಲಿವುಡ್ ನಟಿ ಕಮ್ ನಿರೂಪಕಿ ಸಿಮಿ ಗೇರವಾಲ್ ಜೈಪುರ ಮಹಾರಾಣಿ ಪದ್ಮಿನಿ ಮತ್ತು ಸಂಜಯ್ ಲೀಲಾ ಅವರ ಮಧ್ಯೆ ಸಂಧಾನದ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ರಾಣಿ ಪದ್ಮಿನಿ ಅವರ ಜೊತೆ ಈಗಾಗಲೇ ಮಾತನಾಡಿದ್ದಾರೆ ಎನ್ನಲಾಗಿದೆ.

ಮಹಾರಾಣಿ ಪದ್ಮಿನಿ ವಿರೋಧ ಚಿತ್ರಕ್ಕಲ್ಲ.!
ಅಂದ್ಹಾಗೆ, ಜೈಪುರ ಮಹಾರಾಣಿ ಪದ್ಮಿನಿ ಅವರ ವಿರೋಧ ಚಿತ್ರಕ್ಕಲ್ಲ. ಗೂಮರ್ ಹಾಡಿನಲ್ಲಿ ಪದ್ಮಾವತಿ ನೃತ್ಯ ಮಾಡಿರುವುದನ್ನ ಆಕ್ಷೇಪಿಸಿದ್ದಾರೆ. ಯಾಕಂದ್ರೆ, ಪದ್ಮಾವತಿ ನೃತ್ಯ ಮಾಡುತ್ತಿರಲಿಲ್ಲ. ಅದು ಸಾರ್ವಜನಿಕವಾಗಿ ನೃತ್ಯ ಮಾಡುತ್ತಿರಲಿಲ್ಲವಂತೆ. ಅದನ್ನ ಬಿಟ್ಟರೇ ಬೇರೆ ಏನೂ ಆಕ್ಷೇಪವಿಲ್ಲ ಎಂಬ ಮಾತು ಹೇಳಿದ್ದಾರೆ ಎನ್ನಲಾಗಿದೆ.

ಸಂಜಯ್ ಲೀಲಾ ಮತ್ತು ರಾಣಿ ಪದ್ಮಿನಿ ಸಭೆ
ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ಮಹಾರಾಣಿ ಪದ್ಮಿನಿ ಅವರ ನಡುವೆ ನೇರ ಮಾತುಕತೆ ಏರ್ಪಡಿಸುವುದು ಸಿಮಿ ಅವರ ಉದ್ದೇಶ. ಪದ್ಮಿನಿ ಅವರಿಗೆ ಪ್ರತ್ಯೇಕವಾಗಿ ಸಿನಿಮಾ ತೋರಿಸಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಕರಣಿ ಸೇನಾ ಜೊತೆ ಸಂಧಾನ
ಅದೇ ರೀತಿ ಪದ್ಮಾವತಿ ಚಿತ್ರದ ವಿರುದ್ಧ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕರಣಿ ಸೇನಾ ಜೊತೆಗೆ ಶಾಂತಿ ಮಾತುಕತೆ ನಡೆಸಲು ಸಿಮಿ ಗೇರವಾಲ್ ಮುಂದಾಗಿದ್ದಾರೆ. ಒಂದು ವೇಳೆ ಮಹಾರಾಣಿ ಪದ್ಮಿನಿ ಒಪ್ಪಿಕೊಂಡರೇ ರಜಪೂತರ ಹೋರಾಟ ತಾನಾಗಿಯೇ ತಣ್ಣಗಾಗುತ್ತೆ ಎಂಬ ಲೆಕ್ಕಾಚಾರ ಸಿಮಿಯದ್ದು.

ಬಗೆಹರಿಯುವ ನಿರೀಕ್ಷೆ ಇದೆ
ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಗಳ ಅಭಿಮಾನಿಯಾಗಿರುವ ಸಿಮಿ ಗೇರವಾಲ್, ಮತ್ತೊಂದೆಡೆ ಮಹಾರಾಣಿ ಪದ್ಮಿನಿ ಅವರಿಗೂ ಆತ್ಮೀಯರಂತೆ. ಹೀಗಾಗಿ, ಈ ಸಂಧಾನ ಯಶಸ್ವಿಯಾಗಬಹುದು ಎಂಬ ನಿರೀಕ್ಷೆ ಬಾಲಿವುಡ್ ವಲಯದಲ್ಲಿದೆ.


Click it and Unblock the Notifications











