Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಭ್ ಬಚ್ಚನ್ ಟ್ವೀಟ್ ವಿರೋಧಿಸಿ ಮನೆ ಮುಂದೆ ಪ್ರತಿಭಟನೆ
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮನೆ ಮುಂದೆ ಸಾಮಾಜಿಕ ಹೋರಾಟಗಾರರು, ಮೆಟ್ರೋ ಕುರಿತು ಮಾಡಿದ್ದ ಟ್ವೀಟ್ ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ.
ಮೆಟ್ರೋ ಕಾಮಗಾರಿ ಹಿನ್ನಲೆ ಅರೆ ಕಾಲೋನಿಯಲ್ಲಿ ಸುಮಾರು 2600ಕ್ಕೂ ಅಧಿಕ ಮರಗಳನ್ನ ಕಡಿಯವುದಕ್ಕೆ ನಿರ್ಧಾರಿಸಲಾಗಿದೆ. ಇಂತಹ ಸಮಯದಲ್ಲಿ ಅಮಿತಾಭ್ ಬಚ್ಚನ್ ಅವರ ಮೆಟ್ರೋ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿರುವ ಸಾಮಾಜಿಕ ಹೋರಾಟಗಾರರು, ಪರಿಸರ ಪ್ರೇಮಿಗಳು ಬಚ್ಚನ್ ಮನೆ ಮುಂದೆ ಪ್ರತಿಭಟಿಸಿದ್ದಾರೆ.
ಅಮಿತಾಭ್ ಬಚ್ಚನ್ ಗೆ ಶೇಕಡಾ 75 ರಷ್ಟು ಲಿವರ್ ಇಲ್ವಂತೆ
''ನನ್ನ ಸ್ನೇಹಿತನಿಗೆ ವೈದ್ಯಕೀಯ ತುರ್ತುಸ್ಥಿತಿ ಇತ್ತು, ಕಾರಿನ ಬದಲು ಮೆಟ್ರೊ ರೈಲಿನಲ್ಲಿ ಹೋಗಲು ನಿರ್ಧರಿಸಿದ. ಬೇಗ ಹೋಗಿ ಬೇಗ ವಾಪಸ್ ತಲುಪಿದ. ವೇಗವಾಗಿ, ಅನುಕೂಲಕರ ಮತ್ತು ಮೆಟ್ರೋ ಸೇವೆ ಸಿಕ್ಕಿದ ಪರಿಣಾಮ ಸಂತೋಷಗೊಂಡ. ಹೆಚ್ಚು ಮರಗಳನ್ನು ಬೆಳೆಸುವುದು ಮಾಲಿನ್ಯಕ್ಕೆ ಪರಿಹಾರ. ನಾನು ನನ್ನ ತೋಟದಲ್ಲಿ ಮರಗಿಡ ಬೆಳೆಸಿದ್ದೇನೆ. ನೀವು ಬೆಳಸಿ'' ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದರು.
ಆಗಸ್ಟ್ 2...ಅಮಿತಾಭ್ ಬಚ್ಚನ್ ಗೆ ಎರಡನೇ ಜನ್ಮ ಸಿಕ್ಕಿದ್ದ ದಿನ
ಅಮಿತಾಭ್ ಬಚ್ಚನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಮುಂಬೈ ಮೆಟ್ರೋ ವ್ಯವಸ್ಥಾಪಕ ಅಶ್ವಿನಿ ಬಡೇ ಧನ್ಯವಾದ ತಿಳಿಸಿದ್ದಾರೆ. ಆದರೆ ಬಚ್ಚನ್ ಅವರ ಟ್ವೀಟ್ ಗೆ ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
''ಅಮಿತಾಭ್ ಬಚ್ಚನ್ ಅವರೇ ನಾವೆಲ್ಲ 'ಸೇವ್ ಅರೇ-ಸೇವ್ ಫಾರೆಸ್ಟ್' ಎಂದು ಹೋರಾಡುತ್ತಿದ್ದೇವೆ. ನೀವು ಮೆಟ್ರೋಗೆ ಬೆಂಬಲ ಕೊಡ್ತಿದ್ದೀರಾ. ಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳನ್ನ ಕಡಿಯುವುದು ಎಷ್ಟು ಸರಿ. ಅದಕ್ಕೆ ಬೇರೆಯೇ ಮಾರ್ಗವಿದೆ'' ಎಂದು ಪ್ರಶ್ನಿಸಿದ್ದಾರೆ.
ಅರೆ ಕಾಲೋನಿಯಲ್ಲಿ 2600ಕ್ಕೂ ಅಧಿಕ ಮರಗಳನ್ನ ಕಡಿಯಲು ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ. ಇದರ ವಿರುದ್ಧ ಬಾಲಿವುಡ್ ನ ಅನೇಕ ಕಲಾವಿದರು ಪ್ರತಿಭಟಿಸಿದ್ದರು.