Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂಡಮಾರುತದ ಹೊಡೆತಕ್ಕೆ ಸಿಲುಕಿದ 28 ಸಾವಿರ ನಿರಾಶ್ರಿತರಿಗೆ ನೆರವಾದ ನಟ ಸೋನು ಸೂದ್
ಸಾವಿರಾರು ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮೆನೆಗೆ ಕಳುಹಿಕೊಡುತ್ತಿರುವ ನಟ ಸೋನು ಸೂದ್ ಈಗ ನಿಸರ್ಗ ಚಂಡಮಾರುತ್ತಕ್ಕೆ ಸಿಲುಕಿದ ಕುಟುಂಬದವರಿಗೆ ನೆರವಾಗಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಗಿದ ನಲಗುತ್ತಿದ್ದ 28 ಸಾವಿರ ನಿರಾಶ್ರಿತರಿಗೆ ಸೋನು ಸೂದ್ ಸಹಾಯ ಹಸ್ತ ಚಾಚಿದ್ದಾರೆ.
Recommended Video
28 ಸಾವಿರ ಮಂದಿಗೆ ಆಹಾರ ಒದಗಿಸುವ ಜೊತೆಗೆ ಆಶ್ರಯದ ವ್ಯವಸ್ಥೆಯನ್ನು ಮಾಡಿದ್ದಾರೆ. ನಿರಾಶ್ರಿತರನ್ನು ಹಲವಾರು ಶಾಲೆ ಮತ್ತು ಕಾಲೇಜುಗಳಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, "ಇಂದು ನಾವೆಲ್ಲರು ಕಠಿಣ ಸಮಯವನ್ನು ಎದುರಿಸುತ್ತಿದ್ದೀವಿ. ಇದರ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ಪರಸ್ಪರ ಬೆಂಬಲದ ವ್ಯವಸ್ಥೆ. ನನ್ನ ತಂಡ ಮತ್ತು ನಾನು 28 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರವನ್ನು ವಿತರಿಸಿದ್ದೇವೆ" ಎಂದಿದ್ದಾರೆ.
ಸಲ್ಮಾನ್ ಖಾನ್ ಅನ್ನು ಮೀರಿಸಿದ ನಿಜಜೀವನ ನಾಯಕ ಸೋನು ಸೂದ್
"ಕರಾವಳಿ ಪ್ರದೇಶಗಳ ಜನರು ಮತ್ತು ಅವರನ್ನು ವಿವಿಧ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪುನರ್ವಸತಿ ಮಾಡಿದ್ದೀವಿ. ಅವರೆಲ್ಲರೂ ಈಗ ಸುರಕ್ಷಿತವಾಗಿದ್ದಾರೆ. ನಿಸರ್ಗ ಚಂಡಮಾರುತದಿಂದಗಾಗಿ ಮುಂಬೈನಲ್ಲಿ ಸಿಲುಕಿಕೊಂಡದ್ದ 200 ಅಸ್ಸಾಮಿನ ವಲಸಿಗನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗಿದೆ" ಎಂದು ಹೇಳಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಎಬ್ಬಿರುವ ನಿಸರ್ಗ ಸೈಕ್ಲೋನ್ ಮಹಾರಷ್ಟ್ರದಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು. ಈಗಾಗಲೆ ಕೊರೊನಾ ಹಾವಳಿಯಿಂದ ತತ್ತರಿಸಿರುವ ಮುಂಬೈ ನಗರಕ್ಕೆ ಮತ್ತೊಂದು ಬೀತಿ ಎದುರಾಗಿತ್ತು. ಆದರೆ ನಿಸರ್ಗ ಚಂಡಮಾರುತದ ವೇಗ ಇಳಿಕೆಯಾದ ಪರಿಣಾಮ ಭಾರಿ ಪ್ರಮಾಣದ ಅನಾಹುತ ತಪ್ಪಿದೆ.