Don't Miss!
- News 1951 ರಿಂದ 2019 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ವಿವರ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದ ಅತ್ಯಂತ 'ಶ್ರೀಮಂತ' ಮಹಿಳೆಯನ್ನು ಪರಿಚಯಿಸಿದ ಸೋನು ಸೂದ್
ನಟ ಸೋನು ಸೂದ್, ಭಾರತದ ಅತಿ ಶ್ರೀಮಂತ ಮಹಿಳೆಯನ್ನು ನಟ ಸೋನು ಸೂದ್ ಪರಿಚಯಿಸಿದ್ದಾರೆ. ವಿಶೇಷವೆಂದರೆ ಆಕೆಯ ಶ್ರೀಮಂತಿಕೆ ಅಡಗಿರುವುದು ಹಣದಲ್ಲಲ್ಲ ಬದಲಿಗೆ ಆಕೆಯ ಹೃದಯದಲ್ಲಿ.
Recommended Video
ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ಮಾಡುತ್ತಿರುವ ಸಹಾಯಕ್ಕೆ ಹಲವಾರು ಮಂದಿ ಸೋನು ಸೂದ್ ಫೌಂಡೇಶನ್ಗೆ ದೇಣಿಗೆ ನೀಡಿದ್ದಾರೆ. ದೇಶದ ಖ್ಯಾತ ನಾಮರು ಸೋನು ಸೂದ್ ಫೌಂಡೇಶನ್ಗೆ ಸಾಕಷ್ಟು ಹಣ ನೀಡಿದ್ದಾರೆ. ಹಾಗೆಯೇ ಸಾಮಾನ್ಯ ಜನರೂ ಸಹ ಸೋನು ಸೂದ್ ಮಾಡುತ್ತಿರುವ ಕಾರ್ಯಕ್ಕೆ ತಮ್ಮ ನೆರವಿನ ಹಸ್ತವನ್ನು ಜೋಡಿಸಿದ್ದಾರೆ.
ಆಂಧ್ರ ಪ್ರದೇಶದ ವರಿಕುಂಟಪಾಡು ಎಂಬ ಸಣ್ಣ ಹಳ್ಳಿಯ ಅಂಧ ಮಹಿಳೆ ಬೊಡ್ಡು ನಾಗಲಕ್ಷ್ಮಿ ಸಹ ಸೋನು ಸೂದ್ ಫೌಂಡೇಶನ್ಗೆ 15,000 ರುಪಾಯಿ ದೇಣಿಗೆ ನೀಡಿದ್ದಾರೆ. ಅಂಧೆಯಾದ ಬೊಡ್ಡು ನಾಗಲಕ್ಷ್ಮಿಗೆ ಪ್ರತಿತಿಂಗಳು ಸರ್ಕಾರ ಕೊಡುವ 3000 ರು. ಮಾಸಾಶನದ ಹಣದಲ್ಲಿ ಉಳಿಸಿ ಕೂಡಿಟ್ಟ 15,000 ಹಣವನ್ನು ಅವರು ಸೋನು ಸೂದ್ಗೆ ನೀಡಿದ್ದಾರೆ.
ಈ ವಿಷಯವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ನಟ ಸೋನು ಸೂದ್, 'ಅಂಧ ಯುವತಿ, ಯೂಟ್ಯೂಬರ್ ಸಹ ಆಗಿರುವ ಬೊಡ್ಡು ನಾಗಲಕ್ಷ್ಮಿ 15,000 ನೀಡಿದ್ದಾರೆ. ಇದು ಅವರ ಐದು ತಿಂಗಳ ಮಾಸಾಶನ. ನನ್ನ ಮಟ್ಟಿಗೆ ಈಕೆಯೇ ಭಾರತದ ಶ್ರೀಮಂತ ಮಹಿಳೆ. ಬೇರೊಬ್ಬರ ನೋವನ್ನು ಕಾಣಲು ಕಣ್ಣುಗಳ ಅವಶ್ಯಕತೆ ಇಲ್ಲ' ಎಂದಿದ್ದಾರೆ ಸೋನು ಸೂದ್.
ಅಂಧೆ ಬೊಡ್ಡು ನಾಲಲಕ್ಷ್ಮಿ ತೋರಿರುವ ಮಾನವೀಯತೆ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಸೋನು ಸೂದ್ ಅವರು ನಾಗಲಕ್ಷ್ಮಿಯ ಚಿತ್ರವನ್ನು ಸಹ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು ನಾಗಲಕ್ಷ್ಮಿಯ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೊನಾ ಸಂಕಷ್ಟದಲ್ಲಿ ನಟ ಸೋನು ಸೂದ್ ದೊಡ್ಡ ನೆರವಿನ ಹಸ್ತ ಚಾಚಿದ್ದಾರೆ. ಆಮ್ಲಜನಕ ಸಿಲಿಂಡರ್ ವಿತರಣೆ, ಬೆಡ್ ಕೊಡಿಸುವುದು, ಉಚಿತ ಆಹಾರ ವಿತರಣೆ, ಔಷಧಿ ವಿತರಣೆ, ಅವಶ್ಯಕತೆ ಇದ್ದವರಿಗೆ ಪ್ಲಾಸ್ಮಾ ಡೋನರ್ಗಳ ಸಂಪರ್ಕ ಮಾಡಿಸಿಕೊಡುವುದು. ವೈದ್ಯರಿಗೆ, ದಾದಿಯರಿಗೆ ಸಹಾಯ ಹೀಗೆ ಹಲವಾರು ವಿಧಗಳಲ್ಲಿ ಸೋನು ಸೂದ್ ನೆರವಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಹ ಉಚಿತವಾಗಿ ಆಮ್ಲಜನಕ ಸಿಲಿಂಡರ್ ವಿತರಣೆ ಮಾಡುತ್ತಿದ್ದಾರೆ ಸೋನು ಸೂದ್.