twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ಅಭಿಮಾನಿ ಹುಚ್ಚಾಟ: ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೋಸ್ಟ್!

    |

    ನಟ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ತುಣುಕುಗಳು ಸಿನಿಮಾದ ಮೇಲೆ ಹೆಚ್ಚಿನ ಕುತೂಹಲ, ನಿರೀಕ್ಷೆಯನ್ನು ಮೂಡುವಂತೆ ಮಾಡಿದೆ. ಇನ್ನು ಕಿಚ್ಚನ ಅಭಿಮಾನಿಗಳು ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಾ ಇದ್ದಾರೆ.

    ಕೆಲವೊಮ್ಮೆ ಸ್ಟಾರ್ ನಟರ ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ಹೋಗಿ ಬಿಡುತ್ತದೆ. ಹಾಗಾಗಿ ಕುರುಡು ಅಭಿಮಾನದಲ್ಲಿ ಅಭಿಮಾನಿಗಳು ತಪ್ಪು ಹೆಜ್ಜೆ ಇಡುತ್ತಾರೆ. ಈಗ ಕಿಚ್ಚನ ಅಭಿಮಾನಿ ಒಬ್ಬ ಇಂತಹ ಎಡವಟ್ಟು ಮಾಡಿದ್ದಾನೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

    'ವಿಕ್ರಾಂತ್ ರೋಣ'ನ ಬಗ್ಗೆ 10 ಪ್ರಶ್ನೆಗಳು, ಉತ್ತರ ನಿಮಗೆ ಗೊತ್ತಾ?'ವಿಕ್ರಾಂತ್ ರೋಣ'ನ ಬಗ್ಗೆ 10 ಪ್ರಶ್ನೆಗಳು, ಉತ್ತರ ನಿಮಗೆ ಗೊತ್ತಾ?

    ಅಂಗೈಯಲ್ಲಿ ಪೆನ್ನಿನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದು ಫೊಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈಗ ಹೀಗೆ ಮಾಡಲು ಕಾರಣ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ. ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾಹಿತಿಗಾಗಿ ಈ ರೀತಿ ಬರೆದುಕೊಂಡಿದ್ದಾರೆ. ಕೈ ಫೋಟೋ ಮಾತ್ರ ಹಂಚಿಕೊಂಡ ಕಾರಣ ಈಗ ಯಾರು ಎಂದು ತಿಳಿದು ಬಂದಿಲ್ಲ.

    ಸತೀಶ್ ಗೌಡ ಎನ್ನುವ ಅಕೌಂಟ್‌ನಿಂದ ಈ ಫೋಟೋ ಪೋಸ್ಟ್ ಆಗಿದೆ. "ವಿಕ್ರಾಂತ್ ರೋಣ ಚಿತ್ರದ ಅಪ್ಡೇಟ್ ಬಾರದ ಕಾರಣ ನಾನು ಆತ್ಮ ಹತ್ಯೆ ಮಾಡಿಕೊಳ್ಳುತ್ತಾ ಇದ್ದೇನೆ" ಎಂದು ಟ್ವೀಟ್‌ನಲ್ಲಿ ಬರೆದು ಸುದೀಪ್ ಮತ್ತು ಅನುಪ್ ಭಂಡಾರಿಗೆ ಟ್ಯಾಗ್ ಮಾಡಲಾಗಿದೆ.

    Sudeep About KGF 2: 'ಕೆಜಿಎಫ್ 2' ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸುದೀಪ್ ಕೊಟ್ಟ ಉತ್ತರ ಹೇಗಿತ್ತು? Sudeep About KGF 2: 'ಕೆಜಿಎಫ್ 2' ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸುದೀಪ್ ಕೊಟ್ಟ ಉತ್ತರ ಹೇಗಿತ್ತು?

    ಇದು ಚಿತ್ರದ ಅಪ್ಡೇಟ್‌ಗಾಗಿ ಅಭಿಮಾನಿ ಹೂಡಿದ ಅಸ್ತ್ರ ಇರಬಹುದು. ಆದರೆ ತಮಾಷೆಗಾಗಿ ಹೀಗೆಲ್ಲಾ ಮಾಡುವುದು ಅತಿರೇಕ ಅಲ್ಲದೆ ಮತ್ತೇನು ಅಲ್ಲ. ಹಾಗಾಗಿ ಈತನ ಪೋಸ್ಟ್‌ಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ.

    Sudeep Fan Write Suicide Note For Vikranth Rona Update

    ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಂಬಿನೇಷನ್‌ನಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣ, 3ಡಿ ಆ್ಯಕ್ಷನ್ ಅಡ್ವೆಂಚರ್‌, ಮಿಸ್ಟ್ರಿ ಥ್ರಿಲ್ಲರ್ ಒಳಗೊಂಡಿದೆ. ಕನ್ನಡ, ಹಿಂದಿ, ತೆಲುಗು ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೇ ಇಂಗ್ಲೀಷ್, ಅರೇಬಿಕ್, ಜರ್ಮನ್, ರಷಿಯನ್, ಮ್ಯಾಂಡರಿನ್ ಭಾಷೆಗೂ ಡಬ್ ಆಗುತ್ತಿದೆ. ಈ ಚಿತ್ರವನ್ನು ಶಾಲಿನಿ ಪ್ರೊಡಕ್ಷನ್ಸ್ ಮೂಲಕ ಜಾಕ್ ಮಂಜುನಾಥ್ ನಿರ್ಮಿಸುತ್ತಿದ್ದು, ಅಲಂಕಾರ್ ಪಾಂಡಿಯನ್ ಕೋ ಪ್ರೊಡ್ಯೂಸರ್ ಆಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ , ನಿರೂಪ್ ಭಂಡಾರಿ, ನೀತಾ ಅಶೋಕ್ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

    English summary
    Sudeep Fan Write Suicide Note For Vikranth Rona Update, Know More
    Saturday, May 7, 2022, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X