Don't Miss!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾನು ಮೊಂಡಲ್ ಬಯೋಪಿಕ್ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ.!
ರೈಲ್ವೆ ಸ್ಟೇಷನ್ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಸ್ಟಾರ್ ಗಾಯಕಿಯಾದ ರಾನು ಮೊಂಡಲ್ ಅವರ ಕುರಿತು ಬಯೋಪಿಕ್ ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರು ಮುಂದಾಗಿದ್ದಾರೆ.
ರಾನು ಮೊಂಡಲ್ ಪಾತ್ರದಲ್ಲಿ ನಟಿಸುವಂತೆ ಬೆಂಗಾಳಿ ಚಿತ್ರರಂಗದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿಗೆ ಆಫರ್ ಮಾಡಲಾಗಿದೆ ಎಂಬ ಸುದ್ದಿ ಈಗ ಹೊರಬಿದ್ದಿದೆ.
ಬೆಂಗಾಳಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸುದೀಪ್ತ ಚಕ್ರವರ್ತಿ ಅವರನ್ನ ರಾನು ಪಾತ್ರದಲ್ಲಿ ನಟಿಸುವಂತೆ ಸಂಪರ್ಕಿಸಲಾಗಿದೆಯಂತೆ. ಈ ಬಗ್ಗೆ ಸ್ವತಃ ಸುದೀಪ್ತ ಅವರೇ ಬಹಿರಂಗಪಡಿಸಿದ್ದಾರೆ.
ರಾನು ಮೊಂಡಲ್ ಮಾತು ಕೇಳಿ ಕಣ್ಣೀರಿಟ್ಟ ಹಿಮೇಶ್ ರೇಶಮಿಯಾ
''ಹೌದು, ರಾನು ಮೊಂಡಲ್ ಅವರ ಬಯೋಪಕ್ ನಲ್ಲಿ ನಟಿಸಲು ಅವಕಾಶ ಬಂದಿದೆ. ಆದರೆ ನಾನು ಇನ್ನು ಒಪ್ಪುಕೊಂಡಿಲ್ಲ. ಸ್ಕ್ರಿಪ್ಟ್ ಓದಿದ ಬಳಿಕ ನಾನು ಈ ಸಿನಿಮಾ ಮಾಡ್ಬೇಕಾ ಅಥವಾ ಬೇಡವಾ ಎಂದು ನಿರ್ಧರಿಸುತ್ತೇನೆ'' ಎಂದು ನಟಿ ಸುದೀಪ್ತ ತಿಳಿಸಿದ್ದಾರೆ.
ರಾನು ಮೊಂಡಲ್ಗೆ ಸಲ್ಮಾನ್ ಫ್ಲ್ಯಾಟ್ ಕೊಟ್ರಾ? ಸಲ್ಲು ಸ್ಪಷ್ಟನೆ
ರಿಷಿಕೇಶ್ ಮೊಂಡಲ್ ಅವರು ಈ ಚಿತ್ರವನ್ನ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ರಣಘಾಟ್ ರೈಲ್ವೇ ಸ್ಟೇಷನ್ ನಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟ ದುರಂತ ಮಹಿಳೆಯ ಈ ಕಥೆಗೆ 'ಫ್ಲಾಟ್ ಫಾರ್ಮ್ ಸಿಂಗರ್ ರಾನು ಮೊಂಡಲ್' ಎಂದು ಹೆಸರಿಟ್ಟಿದ್ದಾರೆ.