Don't Miss!
- News ಹನೂರು: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದು ಬೀದಿಗಿಳಿದ ವ್ಯಕ್ತಿ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೈತ ಪ್ರತಿಭಟನೆ ಬಗ್ಗೆ ಟ್ವೀಟ್: ಸನ್ನಿ ಡಿಯೋಲ್ಗೆ ವೈ ಶ್ರೇಣಿ ಭದ್ರತೆ
ಕೇಂದ್ರ ಸರ್ಕಾರದ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆ ದಿನೇ-ದಿನೇ ಹೆಚ್ಚಾಗುತ್ತಿದೆ, ರೈತರ ಪರವಾಗಿ ಕೆಲವು ಬಾಲಿವುಡ್ ನಟರು ಸಹ ಬೆಂಬಲ ಸೂಚಿಸಿದ್ದಾರೆ. ಕೆಲವರು ಸರ್ಕಾರದ ಪರ ಬೆಂಬಲ ಸೂಚಿಸಿದ್ದಾರೆ.
ಈ ನಡುವೆ ನಟ, ಬಿಜೆಪಿ ಸಂಸದರೂ ಆಗಿರುವ ಸನ್ನಿ ಡಿಯೋಲ್ ತಮ್ಮ ಬಿಜೆಪಿ ಸರ್ಕಾರದ ಪರ ವಹಿಸಿ ಮಾತನಾಡಿದ್ದಾರೆ.
ಕೇಂದ್ರದ ವಿರುದ್ಧ ಪ್ರತಿಭಟನೆಯಲ್ಲಿ ಪಂಜಾಬ್ ರೈತರು ಮುಂಚೂಣಿಯಲ್ಲಿದ್ದು, ಪಂಜಾಬ್ ನವರೇ ಆದ ಸನ್ನಿ ಡಿಯೋಲ್ ಪಂಜಾಬ್ ರೈತರ ಪರ ನಿಲ್ಲದೇ ಕೇಂದ್ರ ಸರ್ಕಾರದ ಪರ ನಿಂತಿರುವುದು ರೈತರನ್ನು ಕೆರಳಿಸಿದ್ದು, ಕೆಲವು ರೈತ ಮುಖಂಡರು ಸನ್ನಿ ಡಿಯೋಲ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ.
ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದ ಸಂಸದ ಸನ್ನಿ ಡಿಯೋಲ್, 'ಇದು ರೈತರು ಮತ್ತು ಭಾರತ ಸರ್ಕಾರದ ನಡುವೆ ನಡೆಯುತ್ತಿರುವ ವಿಷಯ, ದಯವಿಟ್ಟು ಇನ್ನಾರೂ ಇದರಲ್ಲಿ ಮಧ್ಯಪ್ರವೇಶ ಮಾಡಬೇಡಿ. ರೈತ ಪ್ರತಿಭಟನೆಯಿಂದ ಲಾಭ ಗಳಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ನಾನು ನನ್ನ ಪಕ್ಷದ ಪರವಾಗಿದ್ದೇನೆ. ನಮ್ಮ ಸರ್ಕಾರವು ಸದಾ ರೈತರ ಪ್ರಗತಿಯ ಬಗ್ಗೆ ಆಲೋಚಿಸಿದೆ, ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನಮ್ಮ ರೈತರ ಜೀವನ ಚೆನ್ನಾಗಿರಬೇಕು ಎಂಬುದೇ ನನ್ನ ಆಶಯ' ಎಂದಿದ್ದಾರೆ ಸನ್ನಿ ಡಿಯೋಲ್.
ಸನ್ನಿ ಡಿಯೋಲ್ ಅವರು ಈ ಹೇಳಿಕೆ ನೀಡಿದ ಬಳಿಕ, ಸರ್ಕಾರವು ಅವರಿಗೆ ವೈ ಶ್ರೇಣಿ ಭದ್ರತೆ ನೀಡಿದೆ. ಇಬ್ಬರು ಕಮ್ಯಾಂಡೊಗಳು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 11 ಮಂದಿ ಸನ್ನಿ ಡಿಯೋಲ್ ಗೆ ಭದ್ರತೆ ಒದಗಿಸಲಿದ್ದಾರೆ.
Recommended Video
ಸಾಕಷ್ಟು ಪಂಜಾಬಿ ನಟರು, ಗಾಯಕರು ರೈತರ ಹೋರಾಟಕ್ಕೆ ಬಹಿರಂಗ ಬೆಂಬಲ ನೀಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಸಹ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ನಟಿ ಕಂಗನಾ ರಣೌತ್, ರೈತರ ಹೋರಾಟವನ್ನು ನಕಲಿ ಎಂದು ಕರೆದು, ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ.