Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸಾವು: ಕುಟುಂಬದಿಂದ ಮನವಿ
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವ ದಿನಕ್ಕೆ ಐದು ದಿನದ ಹಿಂದೆ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಇದು ಆತ್ಮಹತ್ಯೆ ಎನ್ನಲಾಗಿತ್ತು.
Recommended Video
ಜೂನ್ 9 ರಂದು ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ ಮುಂಬೈನ ಮಲಾಡ್ ನಲ್ಲಿನ ಕಟ್ಟಡವೊಂದರ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು. ಇದಾದ ಐದು ದಿನಗಳ ನಂತರ ಅಂದರೆ ಜೂನ್ 14 ಕ್ಕೆ ಸುಶಾಂತ್ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು.
ಸಿನಿಮಾದಿಂದ ಸುಶಾಂತ್ ಕೈಬಿಡಲು ಕಾರಣವೇನು?: ಪೊಲೀಸರ ಮುಂದೆ ಭನ್ಸಾಲಿ ನೀಡಿದ ವಿವರಣೆ
ಈ ಎರಡೂ ಸಾವುಗಳಿಗೆ ಸಂಬಂಧ ಕಲ್ಪಿಸಿ ಕೆಲವು ಸುದ್ದಿಗಳು ಹರಿದಾಡಿದವು. ದಿಶಾ ಸಾಲಿಯಾನ ಸಾವಿನಿಂದಲೇ ಸುಶಾಂತ್ ಖಿನ್ನತೆಗೆ ಒಳಪಟ್ಟಿದ್ದರು, ದಿಶಾ ಸತ್ತಿದ್ದರಿಂದಲೇ ಸುಶಾಂತ್ ಸಿಂಗ್ ಸಾವನ್ನಪ್ಪಿದರು ಎಂದು ಹೇಳಲಾಗುತ್ತಿತ್ತು. ಆದರೆ ಈ ರೀತಿಯ ಸುದ್ದಿಗಳಿಗೆ ದಿಶಾ ಸಾಲಿಯಾನ ಕುಟುಂಬ ಪೂರ್ಣ ವಿರಾಮವಿಡಲು ಹೇಳಿಕೆ ನೀಡಿದೆ.
ಸುಶಾಂತ್ ಸಿಂಗ್-ದಿಶಾ ಬಗ್ಗೆ ಸುಳ್ಳು ಸುದ್ದಿ
ಸುಶಾಂತ್ ಸಿಂಗ್ ರಜಪೂತ್ ಹಾಗೂ ದಿಶಾ ಸಾಲಿಯಾನ ಮಧ್ಯೆ ಸಂಬಂಧವಿತ್ತು, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಸುಶಾಂತ್ ಮಾತಿನಿಂದ ನೊಂದು ದಿಶಾ ಆತ್ಮಹತ್ಯೆ ಮಾಡಿಕೊಂಡಳು, ಇದರಿಂದ ಮನನೊಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು ಎಂದು ಕೆಲವು ಪತ್ರಿಕೆಗಳು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡಿದವು. ಆದರೆ ಇವು ಸತ್ಯವಲ್ಲ.
ಸ್ಪಷ್ಟನೆ ನೀಡಿರುವ ದಿಶಾ ಕುಟುಂಬ
ಈ ಬಗ್ಗೆ ಸ್ಪಷ್ಟನೆ ನೀಡಿರುವ ದಿಶಾ ಸಾಲಿಯಾನ ಕುಟುಂಬ ಮತ್ತು ಗೆಳೆಯರು ಬಹಿರಂಗ ಪತ್ರವೊಂದನ್ನು ಬರೆದು, ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ. ದಿಶಾ ಸಾವಿನ ಲಾಭ ತೆಗೆದುಕೊಳ್ಳುವ ಪ್ರಯತ್ನ ಕ್ರೂರ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಸುಶಾಂತ್ ಸಿಂಗ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳ ಅಡ್ಡಗಾಲು?
ನಾವೆಲ್ಲಾ ಆಘಾತದಲ್ಲಿದ್ದೇವೆ: ದಿಶಾ ಕುಟುಂಬ
ನಾವೆಲ್ಲಾ ತೀವ್ರ ಆಘಾತದಲ್ಲಿದ್ದೇವೆ, ದುಖಃದಿಂದ ಹೊರಬರುವ ಪ್ರಯತ್ನದಲ್ಲಿದ್ದೇವೆ. ಇಂಥಹಾ ಸನ್ನಿವೇಶದಲ್ಲಿ ನಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ, ನಮ್ಮನ್ನು ಇನ್ನಷ್ಟು ನೋಯಿಸಬೇಡಿ ಎಂದು ದಿಶಾ ಕುಟುಂಬ ಸದಸ್ಯರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ವಿಚಾರಣೆ
ಸುಶಾಂತ್ ಸಿಂಗ್ ಆತ್ಮಹತ್ಯೆ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದು, ಇಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ.