twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಸಾವು: ಸಲ್ಮಾನ್ ಖಾನ್, ಕರಣ್ ಜೋಹರ್ ಮೇಲೆ ದೂರು

    |

    ಆತ್ಮಹತ್ಯೆ ಎನ್ನಲಾಗುತ್ತಿರುವ ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್, ಕರಣ್ ಜೋಹರ್ ಸೇರಿದಂತೆ ಎಂಟು ಮಂದಿಯ ಮೇಲೆ ದೂರು ದಾಖಲಾಗಿದೆ.

    Recommended Video

    Case filed against 8 people including Karan Johar, Sanjay Leela Bhansali, Salman Khan | Filmibeat

    ಸುಶಾಂತ್ ಸಿಂಗ್ ರಜಪೂತ್‌ ಅವರು ಖಿನ್ನತೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುಶಾಂತ್ ಆತ್ಮಹತ್ಯೆಗೆ ವೃತ್ತಿಭೇದವೂ ಕಾರಣ ಎನ್ನಲಾಗುತ್ತಿದೆ.

    'ಸುಶಾಂತ್ ಸಾವಿಗೆ ಕಾರಣರಾದ ಕರಣ್, ಯಶ್ ರಾಜ್, ಸಲ್ಮಾನ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಿ''ಸುಶಾಂತ್ ಸಾವಿಗೆ ಕಾರಣರಾದ ಕರಣ್, ಯಶ್ ರಾಜ್, ಸಲ್ಮಾನ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಿ'

    ಹಾಗಾಗಿ ವಕೀಲರೊಬ್ಬರು ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಮಾನ್ ಖಾನ್, ಕರಣ್ ಜೋಹರ್ ಸೇರಿ ಎಂಟು ಮಂದಿ ಬಾಲಿವುಡ್ ದಿಗ್ಗಜರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ದೂರು ನೀಡಿರುವ ವಕೀಲ ಸುಧೀರ್ ಕುಮಾರ್ ಓಜಾ

    ದೂರು ನೀಡಿರುವ ವಕೀಲ ಸುಧೀರ್ ಕುಮಾರ್ ಓಜಾ

    ವಕೀಲ ಸುಧೀರ್ ಕುಮಾರ್ ಓಜಾ ಎಂಬುವರು ಐಪಿಸಿ ಸೆಕ್ಷನ್ 306, 109, 504, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಲ್ಮಾನ್ ಖಾನ್, ಏಕ್ತಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ,ಕರಣ್ ಜೋಹರ್, ಏಕ್ತಾ ಕಪೂರ್ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಏಳು ಸಿನಿಮಾ ಕಳೆದುಕೊಂಡಿದ್ದ ಸುಶಾಂತ್ ಸಿಂಗ್

    ಏಳು ಸಿನಿಮಾ ಕಳೆದುಕೊಂಡಿದ್ದ ಸುಶಾಂತ್ ಸಿಂಗ್

    ಸುಶಾಂತ್ ಸಿಂಗ್ ಕಳೆದ ಆರು ತಿಂಗಳಲ್ಲಿ ಎಂಟರಲ್ಲಿ ಏಳು ಸಿನಿಮಾಗಳ ಅವಕಾಶ ಕಳೆದುಕೊಂಡಿದ್ದರು, ಈ ಅವಕಾಶಗಳನ್ನು ಅವರಿಂದ ಕಿತ್ತುಕೊಳ್ಳಲಾಗಿತ್ತು, ಇದೇ ವಿಷಯ ಅವರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿತು ಇದೇ ಆಧಾರದ ಮೇಲೆ ಪ್ರಕರಣ ದಾಖಲಿಸುತ್ತಿರುವುದಾಗಿ ವಕೀಲ ಸುಧೀರ್ ಕುಮಾರ್ ಓಜಾ ಮಾಧ್ಯಮಗಳಿಗೆ ಹೇಳಿದ್ದಾರೆ.

    ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್

    ತೀವ್ರ ಬೇಸರ ವ್ಯಕ್ತಪಡಿಸಿರುವ ಏಕ್ತಾ ಕಪೂರ್

    ತೀವ್ರ ಬೇಸರ ವ್ಯಕ್ತಪಡಿಸಿರುವ ಏಕ್ತಾ ಕಪೂರ್

    ತಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ನಿರ್ಮಾಪಕಿ ಏಕ್ತಾ ಕಪೂರ್, 'ಸುಶಾಂತ್ ಅನ್ನು ಸಿನಿಮಾದಲ್ಲಿ ಅವಕಾಶ ನೀಡಲಿಲ್ಲವೆಂದು ಪ್ರಕರಣ ದಾಖಲಿಸಿರುವುದು ಕೇಳಿ ತೀವ್ರ ಬೇಸರವಾಗಿದೆ. ಸುಶಾಂತ್ ಗೆ ಮೊದಲ ಅವಕಾಶ ಕೊಟ್ಟಿದ್ದು ನಾನೆ. ನನ್ನ ಮೇಲೆ ಪ್ರಕರಣ ದಾಖಲಾಗಿರುವುದನ್ನು ನಂಬಲಾಗುತ್ತಿಲ್ಲ' ಎಂದಿದ್ದಾರೆ ಏಕ್ತಾ ಕಪೂರ್.

    ವೃತ್ತಿ ಮಾತ್ಸರ್ಯ, ಬಾಲಿವುಡ್ ಗುಂಪುಗಾರಿಕೆ

    ವೃತ್ತಿ ಮಾತ್ಸರ್ಯ, ಬಾಲಿವುಡ್ ಗುಂಪುಗಾರಿಕೆ

    ವೃತ್ತಿ ಮಾತ್ಸರ್ಯ, ಬಾಲಿವುಡ್‌ನ ಗುಂಪು ಗಾರಿಕೆಯಿಂದ ಸುಶಾಂತ್ ಸಿಂಗ್ ರಜಪೂತ್ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಕಳೆದುಕೊಂಡಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಚರ್ಚೆ ನಡೆದಿದೆ.

    ಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರ

    English summary
    A advocate lodge complaint against Salman Khan, Karan Johar, Ekta Kapoor, Sanjay Leela Bansali over Sushant Singh'd death.
    Wednesday, June 17, 2020, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X