Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲ್ಯಾಪ್ ಟಾಪ್, ಚಿನ್ನ, ಹಣ ಎಲ್ಲವನ್ನೂ ರಿಯಾ ದೋಚಿಕೊಂಡು ಹೋಗಿದ್ದಾರೆ: ಸುಶಾಂತ್ ಕುಟುಂಬ ಸ್ನೇಹಿತನ ಆರೋಪ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ದಿನಕ್ಕೊಂದು ತಿರುವು ಪಡೆಯುತ್ತಿರುವ ಸುಶಾಂತ್ ಸಾವಿನ ಪ್ರಕರಣ ಇದೀಗ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸುತ್ತಿಕೊಂಡಿದೆ. ಸುಶಾಂತ್ ನಿಧನಹೊಂದಿ ತಿಂಗಳಾದ ಮೇಲೆ ತಂದೆ ಕೆಕೆ ಸಿಂಗ್ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
Recommended Video
ಸುಶಾಂತ್ ತಂದೆ ರಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವುದು ಮತ್ತಷ್ಟು ಅನುಮಾನ ಮೂಡಿಸುವಂತೆ ಮಾಡಿದೆ. ತಂದೆಯ ದೂರಿನ ಆಧಾರದ ಮೇಲೆ ರಿಯಾ ಚಕ್ರವರ್ತಿಯನ್ನು ವಿಚಾರಣೆ ಮಾಡಲಾಗುತ್ತಿದೆ. ಇದರೆ ಬೆನ್ನಲ್ಲೆ ಈಗ ಸುಶಾಂತ್ ಕುಟುಂಬದ ಸ್ನೇಹಿತರಾದ ನಿಲೋತ್ಪಾಲ್ ಮೃಣಾಲ್ ದೂರನ್ನು ಬೆಂಬಲಿಸಿ ರಿಯಾ ವಿರುದ್ಧ ಮತ್ತಷ್ಟು ಆರೋಪ ಮಾಡಿದ್ದಾರೆ.
ಬಾಲಿವುಡ್ ತೊರೆದು ಕೊಡಗಿನಲ್ಲಿ ಕೃಷಿ ಮಾಡಲು ಬಯಸಿದ್ದರು ಸುಶಾಂತ್ ಸಿಂಗ್
ರಿಯಾ ಚಕ್ರವರ್ತಿ ಸುಶಾಂತ್ ಮನೆಯಲ್ಲಿದ್ದ ಎಲ್ಲವನ್ನೂ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. "ಲ್ಯಾಪ್ ಟಾಪ್, ಆಭರಣ, ಮತ್ತು ಹಣವನ್ನು ರಿಯಾ ತೆಗೆದುಕೊಂಡು ಹೋಗಿದ್ದಾರೆ. ನಂತರ ಸುಶಾಂತ್ ನಂಬರ್ ಬ್ಲಾಕ್ ಮಾಡಿದ್ದಾರೆ. ಮ್ಯಾನೇಜರ್ ದಿಶಾ ಸಾವಿನ ಬಳಿಕ ಸುಶಾಂತ್, ರಿಯಾಗೆ ಎಷ್ಟು ಕರೆ ಮಾಡಿದರು ಸಂಪರ್ಕಿಸಲು ಸಾಧ್ಯವಾಗಿಲ್ಲ. ಮನೆಯಿಂದ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ." ಎಂದಿದ್ದಾರೆ.
"ಅವಳಿಗೆ ಸ್ವಲ್ಪವಾದರು ಜ್ಞಾನ ಇಲ್ಲವೆ. ಬೇರೆಯವರ ಲ್ಯಾಪ್ ಟಾಪ್ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ. ಅಲ್ಲದೆ ಸುಶಾಂತ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ." ಎಂದು ಆರೋಪ ಮಾಡಿದ್ದಾರೆ.
ಈ ಮೊದಲು ರಿಯಾ ಚಕ್ರವರ್ತಿ ಕಳೆದ 11 ತಿಂಗಳಿಂದ ಸುಶಾಂತ್ ಸಿಂಗ್ ಡೆಬಿಟ್ ಮತ್ತು ಕ್ರೆಡಿಟ್ ಅನ್ನು ಬಳಸುತ್ತಿದ್ದರು ಆರೋಪ ಕೇಳಿಬಂದಿದೆ. ಚಿತ್ರೀಕರಣಕ್ಕೆ ಯೂರೋಪ್ ಗೆ ಹೋದ ವಿವಾನ ಟಿಕೆಟ್ ಗೆ ಹಣ ಸುಶಾಂತ್ ಖಾತೆಯಿಂದ ಕಟ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.