twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಆತ್ಮಹತ್ಯೆ ಪೂರ್ವನಿರ್ಧಾರಿತವೇ? ಅನುಮಾನಕ್ಕೆ ಕಾರಣವಾದ ಸಿಬ್ಬಂದಿ ಹೇಳಿಕೆ

    |

    ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಭಾನುವಾರ ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.

    Recommended Video

    ಸುದೀಪ್ ಕೈಯಲ್ಲಿ ಇದೊಂದು ಕೆಲಸ ಮಾತ್ರ ಆಗಲ್ಲ | Kiccha Sudeep | Filmibeat Kannada

    ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಆ ಕ್ಷಣದ ಹತಾಶೆಯೇ ಕಾರಣ ಎಂದೇ ಎಲ್ಲರೂ ಭಾವಿಸಿದ್ದಾರು. ಆದರೆ ಆತ್ಮಹತ್ಯೆಯ ನಿರ್ಧಾರವನ್ನು ಎರಡು ದಿನ ಮೊದಲೇ ಮಾಡಿದ್ದರಾ ಸುಶಾಂತ್ ಎಂಬ ಅನುಮಾನ ಈಗ ಶುರುವಾಗಿದೆ.

    ಸುಶಾಂತ್ ಸಾವು ಪೂರ್ವನಿಯೋಜಿತ ಹತ್ಯೆ?: ಮಹೇಶ್ ಭಟ್, ರಿಯಾ ವಿರುದ್ಧವೇ ಅನುಮಾನಸುಶಾಂತ್ ಸಾವು ಪೂರ್ವನಿಯೋಜಿತ ಹತ್ಯೆ?: ಮಹೇಶ್ ಭಟ್, ರಿಯಾ ವಿರುದ್ಧವೇ ಅನುಮಾನ

    ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಸುಶಾಂತ್‌ ಸಿಂಗ್‌ ಗೆ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅದರಲ್ಲಿ ಸುಶಾಂತ್‌ ಸಿಂಗ್ ಮನೆಗೆಲಸ ಹಾಗೂ ಇತರ ಸಿಬ್ಬಂದಿಗಳೂ ಸೇರಿದ್ದಾರೆ.

    ಸುಶಾಂತ್ ಸಿಂಗ್ ಸಿಬ್ಬಂದಿ ಪೊಲೀಸರಿಗೆ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಸುಶಾಂತ್‌ ಸಿಂಗ್‌ ಸಾಯುವ ನಿರ್ಧಾರವನ್ನು ಮೊದಲೇ ಮಾಡಿದ್ದರೆ ಎಂಬ ಅನುಮಾನ ಬರುತ್ತದೆ.

    ಆತ್ಮಹತ್ಯೆಯ ಸುಳಿವು ನೀಡಿದ್ದರು ಸುಶಾಂತ್

    ಆತ್ಮಹತ್ಯೆಯ ಸುಳಿವು ನೀಡಿದ್ದರು ಸುಶಾಂತ್

    ಸುಶಾಂತ್‌ ಸಿಂಗ್ ನೇಣಿಗೆ ಕೊರಳೊಡ್ಡುವ ಮೂರು ದಿನ ಮುನ್ನಾ ಎಲ್ಲರಿಗೂ ಸಂಬಳ ನೀಡಿದ್ದರಂತೆ. ಅದೇ ದಿನ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ಆತ್ಮಹತ್ಯೆಯ ಸಣ್ಣ ಸುಳಿವನ್ನೂ ನೀಡಿದ್ದಾರೆ.

    ಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿ

    'ಇದೇ ಕೊನೆಯ ಸಂಬಳ ಆಗಬಹುದು ಎಂದಿದ್ದರು'

    'ಇದೇ ಕೊನೆಯ ಸಂಬಳ ಆಗಬಹುದು ಎಂದಿದ್ದರು'

    ಸಿಬ್ಬಂದಿಗೆ ಸಂಬಳ ಬಟವಾಡೆ ಮಾಡಿ, 'ಮುಂದೆ ನನ್ನಿಂದ ನಿಮಗೆ ಸಂಬಳ ನೀಡಲು ಸಾಧ್ಯವಾಗದೇ ಇರಬಹುದು. ಬಹುಷಃ ಇದು ನಾನು ನೀಡುತ್ತಿರುವ ಕೊನೆಯ ಸಂಬಳ' ಎಂದಿದ್ದರಂತೆ ಸುಶಾಂತ್ ಸಿಂಗ್ ರಜಪೂತ್. ಕೊರೊನಾ ತಂದ ಸಂಕಷ್ಟದಿಂದ ಅವರು ಹೀಗೆ ಹೇಳಿರಬಹುದು ಎಂದುಕೊಂಡರಂತೆ ಸಿಬ್ಬಂದಿ.

    ರಣ್ವೀರ್ ಸಿಂಗ್ ದೊಡ್ಡ ಸ್ಟಾರ್ ಆಗಲು ಸುಶಾಂತ್ ಸಿಂಗ್ ಕಾರಣ!?ರಣ್ವೀರ್ ಸಿಂಗ್ ದೊಡ್ಡ ಸ್ಟಾರ್ ಆಗಲು ಸುಶಾಂತ್ ಸಿಂಗ್ ಕಾರಣ!?

    'ಕೊರೊನಾ ಸಮಯದಲ್ಲೂ ಪೂರ್ಣ ಸಂಬಳ ಕೊಟ್ಟಿದ್ದರು'

    'ಕೊರೊನಾ ಸಮಯದಲ್ಲೂ ಪೂರ್ಣ ಸಂಬಳ ಕೊಟ್ಟಿದ್ದರು'

    'ಕೊರೊನಾ ಸಂಕಷ್ಟದ ಸಮಯದಲ್ಲೂ ಸಹ ಪೂರ್ಣ ಸಂಬಳವನ್ನೇ ಸುಶಾಂತ್ ನಮಗೆ ನೀಡಿದರು. ಯಾರನ್ನೂ ಕೆಲಸದಿಂದಲೂ ತೆಗೆಯಲಿಲ್ಲ, ನಮಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡರು' ಎಂದು ಸಿಬ್ಬಂದಿ ಪೊಲೀಸರ ಬಳಿ ಹೇಳಿದ್ದಾರೆ.

    ಕಣ್ಣೀರಿಟ್ಟ ಮನೆಗೆಲಸದ ಸಿಬ್ಬಂದಿ

    ಕಣ್ಣೀರಿಟ್ಟ ಮನೆಗೆಲಸದ ಸಿಬ್ಬಂದಿ

    'ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ನಾವು ಎಣಿಸಿರಲೇ ಇಲ್ಲ. ಅವರು ಬಹಳ ಒಳ್ಳೆಯವರಾಗಿದ್ದರು, ನಮಗೆ ಕಷ್ಟದ ಸಮಯದಲ್ಲಿ ಹಣಕಾಸಿನ ನೆರವನ್ನೂ ನೀಡಿದ್ದರು. ನೀವು ಸಂಬಳ ಕೊಡದೇ ಇದ್ದರು ನಾವು ಬಂದು ಕೆಲಸ ಮಾಡಿಕೊಡುವುದಾಗಿ ನಾವು ಹೇಳಿದ್ದೆವು' ಎಂದು ಸಿಬ್ಬಂದಿ ಕಣ್ಣೀರಿಡುತ್ತಾ ಪೊಲೀಸರ ಬಳಿ ಹೇಳಿದ್ದಾರೆ.

    ತೆರೆಗೆ ಬರುತ್ತಿದೆ ಸುಶಾಂತ್ ಸಿಂಗ್ ಜೀವನ: ಸಿನಿಮಾದ ಹೆಸರೇನು?ತೆರೆಗೆ ಬರುತ್ತಿದೆ ಸುಶಾಂತ್ ಸಿಂಗ್ ಜೀವನ: ಸಿನಿಮಾದ ಹೆಸರೇನು?

    English summary
    Actor Sushant Singh Rajput paid salaries of his employees three days before his death.
    Saturday, June 20, 2020, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X