ಗೆಳೆಯನಿಗೆ ಕೊಟ್ಟಿದ್ದ ಮಾತು ಉಳಿಸಿಕೊಂಡ ಸುಶಾಂತ್ ಸಿಂಗ್ ರಜಪೂತ್
ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿ ತಿಂಗಳಾಯಿತು. ಆದರೆ ಸುಶಾಂತ್ ಸಿಂಗ್ ಸಾವು ಬಾಲಿವುಡ್ ನಲ್ಲಿ ಹುಟ್ಟಿಸಿದ ನೋವು, ಆತಂಕ ಇನ್ನೂ ಮರೆಯಾಗಿಲ್ಲ.
Recommended Video
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೆ ಹುಟ್ಟಿರುವ ಸ್ವಜನಪಕ್ಷಪಾತದ ಚರ್ಚೆ ದಿನೇ-ದಿನೇ ಏರುತ್ತಲೇ ಇದೆ.
ಹಲವಾರು ಮಂದಿ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ತಮಗಿದ್ದ ನಂಟಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ. ಸುಶಾಂತ್ ಆಪ್ತ ಮಿತ್ರ, ಸುಶಾಂತ್ ಕೊನೆಯ ಸಿನಿಮಾ ನಿರ್ದೇಶಕರೂ ಆಗಿರುವ ಮುಖೇಶ್ ಛಬ್ರಾ ಸುಶಾಂತ್ ಬಗ್ಗೆ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ.

ದಿಲ್ ಬೇಚಾರಾ ಸಿನಿಮಾ ನಿರ್ದೇಶಕ ಮುಖೇಶ್
ಸುಶಾಂತ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ದಿಲ್ ಬೇಚಾರಾ ಸಿನಿಮಾದ ನಿರ್ದೇಶಕ ಮುಖೇಶ್, ಸುಶಾಂತ್ ಹೇಗೆ ತನಗೆ ಕೊಟ್ಟ ಮಾತು ಉಳಿಸಿಕೊಂಡ' ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದರಂತೆ
ಮುಖೇಶ್ ಛಬ್ರಾ ಸುಶಾಂತ್ ಮೊದಲ ಸಿನಿಮಾ 'ಕಾಯ್ ಪೋ ಚೆ' ಸಿನಿಮಾದ ನಿರ್ದೇಶಕ, ಸುಶಾಂತ್ ಗೆ ಮೊದಲ ಬ್ರೇಕ್ ಕೊಟ್ಟಿದ್ದು ಇದೇ ಮುಖೇಶ್. ಆ ನಂತರ ಸುಶಾಂತ್ ಮುಖೇಶ್ ಗೆ ಮಾತು ಕೊಟ್ಟಿದ್ದರಂತೆ, ಅವರ ಸಿನಿಮಾದಲ್ಲಿ ನಟಿಸುವುದಾಗಿ.

ದಿಲ್ ಬೇಚಾರ ಸಿನಿಮಾ ಮಾಡಲು ಒಪ್ಪಿಕೊಂಡರು
ಆದರೆ ಹಲವು ವರ್ಷಗಳ ಕಾಲ ಅದು ಸಾಧ್ಯವಾಗಲಿಲ್ಲ. ಕೊನೆಗೆ ದಿಲ್ ಬೇಚಾರ ಸಿನಿಮಾವನ್ನು ಬೇರೆ ಕೆಲವು ನಾಯಕ ನಟರು ಒಪ್ಪದಿದ್ದಾಗ ಸುಶಾಂತ್ ಸಿಂಗ್ ಸಿನಿಮಾದಲ್ಲಿ ನಟಿಸಿದರಂತೆ. ಇದನ್ನು ನೆನಪಿಸಿಕೊಂಡಿದ್ದಾರೆ ಮುಖೇಶ್.

ಒಟಿಟಿಯಲ್ಲಿ ಬಿಡುಗಡೆ ಆಗಲಿದೆ
ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ ದಿಲ್ ಬೇಚಾರ ಚಿತ್ರೀಕರಣ ಪೂರ್ಣ ಮುಗಿದಿದ್ದು ಬಿಡುಗಡೆಗೆ ತಯಾರಾಗಿದೆ. ಇದೇ ತಿಂಗಳು 24 ರಂದು ಒಟಿಟಿಯಲ್ಲಿ ದಿಲ್ ಬೇಚಾರ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.


Click it and Unblock the Notifications











