Don't Miss!
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಿಂಗ್ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದ ತಂದೆ
ಮುಂಬೈನ ಬಾಂದ್ರಾದ ಮನೆಯಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅವರ ತವರು ಪಟ್ನಾದ ಜನತೆಗೆ ತಿಳಿಯುತ್ತಿದ್ದಂತೆಯೇ ರಾಜೀವ್ ನಗರ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಭಾರಿ ಪ್ರಮಾಣದಲ್ಲಿ ಜನರು ನೆರೆದಿದ್ದರು. ಮಗನ ಸಾವಿನ ಸುದ್ದಿ ಕೇಳಿದ ಕೂಡಲೇ ಆಘಾತಕ್ಕೆ ಒಳಗಾದ ಅವರ ತಂದೆ ಕೃಷ್ಣ ಕುಮಾರ್ ಸಿಂಗ್ ಕುಸಿದುಬಿದ್ದಿದ್ದರು.
Recommended Video
ಮಗನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಕೃಷ್ಣಕುಮಾರ್, ಇಂತಹ ಕೆಟ್ಟ ಸುದ್ದಿಯನ್ನು ನಿರೀಕ್ಷಿಸಿರಲಿಲ್ಲ. ಮಗ ಇನ್ನಿಲ್ಲ ಎಂಬ ಕಹಿ ಸತ್ಯ ಅವರನ್ನು ವಿಹ್ವಲಗೊಳಿಸಿತ್ತು. ನಿಸ್ತೇಜರಾಗಿ ಬಿದ್ದ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಒಂದು ದಿನ ಕಳೆದರೂ ಅವರು ಆಘಾತದಿಂದ ಚೇತರಿಸಿಕೊಂಡಿಲ್ಲ. ಕುಟುಂಬದವರು ಕೂಡ ಆಘಾತದ ನಡುವೆಯೇ ಅವರನ್ನು ಮುಂಬೈಗೆ ಕರೆದುಕೊಂಡು ಬಂದಿದ್ದಾರೆ. ಮುಂದೆ ಓದಿ...
ದೂರವಾಣಿ ಮೂಲಕ ಬಂದ ಸುದ್ದಿ
ಸುಶಾಂತ್ ಸಿಂಗ್ ಅವರ ಸಾವಿನ ಸುದ್ದಿ ದೂರವಾಣಿಯ ಮೂಲಕ ಮನೆಗೆ ತಲುಪಿತು ಎಂದು ಸುಶಾಂತ್ ಅವರ ಪಟ್ನಾ ನಿವಾಸವನ್ನು ನೋಡಿಕೊಳ್ಳುತ್ತಿರುವ ಲಕ್ಷ್ಮಿ ದೇವಿ ತಿಳಿಸಿದರು. ಕೆಲವೇ ದಿನಗಳ ಹಿಂದಷ್ಟೇ ಅಪ್ಪನ ಜತೆ ಸುಶಾಂತ್ ಮಾತನಾಡಿದ್ದರು ಎಂದು ಅವರು ಹೇಳಿದರು.
ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಅವರು ಬರಲಿಲ್ಲ, ಆದರೆ...
ಶೀಘ್ರವೇ ಪಟ್ನಾಕ್ಕೆ ಬಂದು ಅಪ್ಪನನ್ನು ಎಲ್ಲಿಯಾದರೂ ಬೆಟ್ಟದ ಮೇಲೆ ವಾಕ್ಗೆ ಕರೆದುಕೊಂಡು ಹೋಗುವುದಾಗಿ ಸುಶಾಂತ್ ಹೇಳಿದ್ದರು. ಆದರೆ ಅವರು ಬರಲೇ ಇಲ್ಲ. ಅದರ ಬದಲು ಅವರ ಸಾವಿನ ಸುದ್ದಿ ಬಂತು ಎಂದು ಲಕ್ಷ್ಮಿ ದೇವಿ ಕಣ್ಣೀರಿಟ್ಟರು.
ಕೊರೊನಾದಿಂದ ಸೇಫಾಗಿರಿ
ಮೂರು ದಿನಗಳ ಹಿಂದಷ್ಟೇ ಸುಶಾಂತ್ ಕರೆ ಮಾಡಿ ತಂದೆಯ ಜತೆ ಮಾತನಾಡಿದ್ದರು. ಹೊರಗೆ ಕೊರೊನಾ ವೈರಸ್ ಭೀತಿ ಹೆಚ್ಚಿದೆ. ಹಾಗಾಗಿ ಸುರಕ್ಷಿತವಾಗಿರಿ ಎಂದು ತಂದೆಗೆ ಹೇಳಿದ್ದ ಅವರು, ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಲಕ್ಷ್ಮಿ ದೇವಿ ಅವರಿಗೂ ಮನವಿ ಮಾಡಿದ್ದರು. ಅದೇ ಸುಶಾಂತ್ರಿಂದ ಬಂದ ಕೊನೆಯ ಕರೆಯಾಗಿತ್ತು.
ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೇ ದೀಪಿಕಾ, ಆಲಿಯಾ, ಕರಣ್ ಜೋಹರ್ ವಿರುದ್ಧ ಆಕ್ರೋಶ: ಕಾರಣವೇನು?
ಊಟಕ್ಕೆ ಕುಳಿದಿದ್ದಾಗ ಬಂತು ಸಾವಿನ ಸುದ್ದಿ
ನಿವೃತ್ತ ಸರ್ಕಾರಿ ನೌಕರರಾಗಿರುವ ಕೃಷ್ಣ ಕುಮಾರ್ ಸಿಂಗ್, ಭಾನುವಾರ ಊಟಕ್ಕೆಂದು ಕುಳಿತಿದ್ದರು. ಆಗ ಫೋನ್ ಬಂದಿತ್ತು. ಮುಂಬೈ ಎಂದಾಗ ಮಗನ ಫೋನ್ ಎಂದು ಅವರ ಮುಖವರಳಿತ್ತು. ಆದರೆ ಕರೆ ಮಾಡಿದ್ದು ಮುಂಬೈ ಪೊಲೀಸ್. ಮಗನ ಧ್ವನಿಯ ಬದಲು ಕೇಳಿಸಿದ್ದು, ಆತನ ಸಾವಿನ ಸುದ್ದಿ...