Don't Miss!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- News ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಇಳಿಸಲು ಕಾಯುತ್ತಿದ್ದಾರೆ: ಕಾರಣ ಬಿಚ್ಚಿಟ್ಟ ಜನಾರ್ದನ ರೆಡ್ಡಿ
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಿಂಗ್ ಅನ್ನು ಸಿನಿಮಾವೊಂದರಿಂದ ಹೊರಹಾಕಲಾಗಿತ್ತು: ಸಂಜಯ್ ರಾವತ್
ಮಹಾರಾಷ್ಟ್ರದ ರಾಜಕಾರಣಿ, ಶಿವಸೇನಾ ಪಕ್ಷದ ಪ್ರಮುಖ ಮುಖಂಡ ಸಂಜಯ್ ರಾವತ್, ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡು ಹತರಾದ ಸುಶಾಂತ್ ಸಿಂಗ್ ಬಗ್ಗೆ ಸಂಪಾದಕೀಯ ಬರೆದಿದ್ದಾರೆ.
ಸುಶಾಂತ್ ಸಿಂಗ್ ಅವರು ಬಾಲಿವುಡ್ನ ಗುಂಪುಗಾರಿಕೆಗೆ, ಸ್ವಜನಪಕ್ಷಪಾತಕ್ಕೆ ಬಲಿಪಶು ಆಗಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ದೊಡ್ಡ ಚರ್ಚೆಯೇ ಎದ್ದಿದೆ. ಈ ನಡುವೆ ಸುಶಾಂತ್ ಅವರನ್ನು ಮುಖ್ಯವಾದ ಸಿನಿಮಾ ಒಂದರಿಂದ ತೆಗೆದು ಹಾಕಲಾಗಿತ್ತು ಎಂದು ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಬರೆದಿದ್ದಾರೆ ರಾವತ್.
ಸುಶಾಂತ್ ಸಿಂಗ್ ನೆನಪಲ್ಲಿ ಮಹತ್ಕಾರ್ಯಕ್ಕೆ ಮುಂದಾದ ಕುಟುಂಬ
ದೇಶದ ಪ್ರಮುಖ ರಾಜಕೀಯ ನೇತ, ಮಾಜಿ ಮಂತ್ರಿ ಜಾರ್ಜ್ ಫರ್ನಾಂಡೀಸ್ ಅವರ ಜೀವನ ಆಧರಿತ ಸಿನಿಮಾದಲ್ಲಿ ಜಾರ್ಜ್ ಫರ್ನಾಂಡೀಸ್ ಪಾತ್ರವನ್ನು ಸುಶಾಂತ್ ಸಿಂಗ್ ಮಾಡಬೇಕಿತ್ತು. ಆದರೆ ಆ ಸಿನಿಮಾದಿಂದ ಅವರನ್ನು ಹೊರಗೆ ಹಾಕಲಾಯಿತಂತೆ.
ಜಾರ್ಜ್ ಫರ್ನಾಂಡೀಸ್ ಪಾತ್ರಕ್ಕಾಗಿ ಸುಶಾಂತ್ ಸಿಂಗ್ ಅವರನ್ನು ಕೇಳಲಾಗಿತ್ತಂತೆ, ಆದರೆ ಅವರ ಮಾನಸಿಕ ಸ್ಥಿತಿ ಗಮನಿಸಿ ಅವರನ್ನು ಸಿನಿಮಾದಿಂದ ಕೈಬಿಡಲಾಯಿತಂತೆ. ಹೀಗೆಂದು ಸಂಜಯ್ ರಾವತ್ ಸಾಮ್ನಾ ದಲ್ಲಿ ಬರೆದಿದ್ದಾರೆ.
ಕರಣ್ ಜೋಹರ್ ಶೋದಲ್ಲಿ ಸುಶಾಂತ್ ಬಗ್ಗೆ ಇಮ್ರಾನ್ ಹಶ್ಮಿ ಆಡಿದ್ದ ಮಾತುಗಳಿವು...
ಅಷ್ಟೆ ಅಲ್ಲದೆ, ಸುಶಾಂತ್ ಸಿಂಗ್ ಚಿತ್ರೀಕರಣದ ಸೆಟ್ಗಳಲ್ಲಿ ಭಿನ್ನವಾಗಿ ವರ್ತಿಸುತ್ತಿದ್ದರಂತೆ, ಅವರು ಮಾನಸಿಕ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಿದ್ದರಂತೆ. ಇದರಿಂದ ಸೆಟ್ನಲ್ಲಿರುವವರಿಗೆ ಸಮಸ್ಯೆ ಆಗುತ್ತಿತ್ತಂತೆ.